ಇಂದು ಮಳೆಯೂ ಇಲ್ಲ. ..
ಅವನೂ ಬರಲಿಲ್ಲ...
ಪದ್ಯ ಬರೆಯಲು ಏನಿದೆ? ??
ಕಣ್ಣು ಮುಚ್ಚಿದೆ
ಶುಭರಾತ್ರಿ ಎಂದು ಸಂದೇಶ ಬಂತು!
ಅರೆ ಮಳೆಯೂ ಧೋ ಎನ್ನುತ್ತಿದೇ!!!
ಬಾರದಿದ್ದರೇ ಏನಂತೇ ಅವ?
ತೋಯಲು ಅವನ ನೆನಪುಗಳೇ ಸಾಕಲ್ಲ ?
ಈ ಮಳೆಯೂ ....ನಿನ್ನೊಲವೂ ಒಂದೇ ತರಹ ಕಣೋ....
ಒಮ್ಮೆ ಸಣ್ಣಗೆ ಹನಿಯುತ್ತೆ...
ಇನ್ನೂ ಬೇಕೆಂದು ಹಂಬಲಿಸುವಂತೇ
ಒಮ್ಮೊಮ್ಮೆ ಎಡಬಿಡದೇ ಜೋರಾಗಿ ಸುರಿಯುತ್ತೆ
ಥೇಟ್ ನಿನ್ನಂತೇ...!!
ಬೇಕು ಕಣೋ ಮಳೆಯೂ...ಒಲವೂ....ಎರಡೂ...ನನಗೆ
ಸಹಿಸುವುದಾದರೂ ಹೇಗೆ ಹೇಳು ....ಈ ಬೇಗೆ ?
ದಿನದ ಇಪ್ಪತ್ನಾಲ್ಕು ಗಂಟೆಗಳಲೂ ಜೊತೆಗಿರು
ಎನಲಾರೆ,
ನಾನು ಕರೆದಾಗ.....
ಓಗೊಡು ಸಾಕು.
ಕಂಡಾಗೊಂದು ಮಿಂಚಿರಲಿ ನಿನ್ನ ಕಣ್ಣುಗಳಲಿ...
ತೆಳುವಾದ ನಗುವಿರಲಿ ಚೆಂದುಟಿಗಳಲಿ.
ಬಳಿ ಬಂದಾಗೊಮ್ಮೆ ತಬ್ಬಿದರೆ ....
ಒಲ್ಲೇ ಎನ್ನುವುದಿಲ್ಲ ನಾನು.
ನೀನಿರುವಾಗ ನನಗೆ ..
ಕಣ್ಣೀರಾದರೂ ಯಾಕೆ ಹೇಳು ?
ಸಂತಸದ ಕ್ಷಣಗಳಲಿ ಜೊತೆಯಾಗಿರು ...
ಮನಸಾರೆ ನಗುವ ನಾವು.
ಹಂಚಿಕೊಳ್ಳುವ ಅದನು -ಇದನು ...
ಉಳಿದುಬಿಡು ಗೆಳೆಯನಾಗಿ ನೀನು
ಮತ್ತೆ ನನಗಿನ್ನೇನು ಬೇಕು ?
ಬೆಳಿಗ್ಗೆಯಿಂದಾ....ಧಗೆ ಧಗೆ....
ಸಂಜೆಯ ವೇಳೆಗೆ ಗುಡುಗು ಮಿಂಚು. ..
ತಂಗಾಳಿ ಸಹಿತ....ಅಂತೂ...
ಮಳೆ ಬರುವ ಹಾಗಿದೇ....
ನಾನೂ ಕೂಡ ಕಾದಿದ್ದೇ....
ಬರುತ್ತೇನೆಂದು ಭರವಸೆ ನೀಡಿದವ
ಬರಲಾರೆ ಎಂದು ನಿರಾಸೆ ಮೂಡಿಸಿ...
ಬಾರದಿರುವವ ನೀನು. ...
ನಾನು ದುಮುಗುಡುವಂತೆ ಮಾಡಿದ್ದು ನೀನೇ...ನೀನೇ...
No comments:
Post a Comment