"ವ್ಯಸನ" ಎನ್ನುವುದು ಮನಸ್ಸಿನ ಒಂದು ವಿಕಲ್ಪ.ಯಾವುದೇ ವ್ಯಸನಕ್ಕೆ ಬಲಿಯಾದ ವ್ಯಕ್ತಿ,ತಾನು ವ್ಯಸನಕ್ಕೆ ಬಲಿಯಾಗಿದ್ದೇನೆ,ಎಂದು ಅರಿವಾದೊಡನೆ ಖಿನ್ನನಾಗುತ್ತಾನೆ.ಹಾಗೂ ಅದನ್ನು ಬಿಡಲು ಯತ್ನಿಸುತ್ತಾನೆ.ಇಲ್ಲಿ ವಿಶೇಷವೆಂದರೆ ವ್ಯಸನಕ್ಕೆ ಬಲಿಯಾಗುವ ಮೊದಲಿನ ಮಾನಸಿಕ ಸ್ಥಿತಿ, ಅದು ಖಿನ್ನತೆಯಾಗಿರಬಹುದು, ನಿರಾಶೆಯಾಗಿರಬಹುದು, ಸುಖ ಅಥವ ದುಃಖ ಆಗಿರಬಹುದು. ಅದೇನೇ ಆಗಿದ್ದರೂ, ಒಂದು ಸಾರಿ ಯಾವುದೇ ವ್ಯಸನಕ್ಕೆ ಒಳಗಾದ ವ್ಯಕ್ತಿ ಅದರಿಂದಾ ಹೊರಬರಲು ಹಾಗೂ ಆಗದಿದ್ದಾಗ ಮತ್ತೆ ಅದೇ ವ್ಯಸನದಿಂದಾ ಚಿಂತಿತ ಹಾಗೂ ವ್ಯಕುಲನಾಗುತ್ತಾ ಹೋಗುತ್ತಾನೆ. ಇದು ಒಂದು ವಿಷದ ಚಕ್ರದಂತೆ.ಇಲ್ಲಿ ವ್ಯಸನಕ್ಕೆ ಮಾದಕ ವಸ್ತುಬೇಕು ಎಂದು ಬಯಸುವವರು ಯಾರು?ಹಾಗೂ ಅದರಿಂದಾ ಹೊರಬರಲು ಯತ್ನಿಸುವವರು ಯಾರು? ಎಂಬ ಪ್ರಶ್ನೆ ಉಧ್ಭವವಾಗುತ್ತದೆ.ಎರಡೂ ನಮ್ಮಒಳಗಿನ ಮನಸ್ಸೇ, ಎರಡು ರೀತಿಯ ದ್ವಂದ್ವ ವ್ಯಕ್ತಿತ್ವಗಳಾಗಿರುತ್ತವೆ.ಇದು ಒಂದೇ ವ್ಯಕ್ತಿಯ ಮನಸ್ಸಿನ ಅನೇಕ ಸ್ಥರಗಳಲ್ಲಿ ಒಂದಾಗಿರುತ್ತದೆ. ಹಾಗಾಗಿ ವ್ಯಸನ ಅದರಿಂದಾ ಉಂಟಾಗುವ ಮಾನಸಿಕ ಹಾಗೂ ದೈಹಿಕ ಪರಿಣಾಮ,ಮತ್ತೆ ಮತ್ತೆ ಅದೇ ವ್ಯಸನದ ಸುತ್ತಾ ನಮ್ಮ ಮನಸ್ಸನ್ನು ಸೆಳೆಯಲು ಪ್ರೇರೇಪಿಸುತ್ತದೆ.ಇದಕ್ಕೆ ನಮ್ಮನ್ನು ನಾವೇ ಕೇಳಿಕೊಂಡಾಗ ವ್ಯಸನಕ್ಕಾಗಿ ಹಂಬಲಿಸುತ್ತಿರುವವರು ಯಾರು? ಹಾಗೂ ಅದರಿಂದ ಮುಕ್ತವಾಗಬೇಕೂ ಎಂದು ಹಂಬಲಿಸುತ್ತಿರುವವರು ಯಾರು?ವಾಸ್ಥವವಾಗಿ ಎರಡೂ ನಮ್ಮಲ್ಲಿಯ ಮಾನಸಿಕ ಸ್ಥರಗಳೇ
ಆಗಿರುತ್ತವೆ.ಇನ್ನು ಮಾನಸಿಕ ಸ್ಥಿತಿಯನ್ನು ಸರಿ ಮಾಡಲು ಯಾವುದೋ ಒಂದು ಮಾದಕ ವಸ್ತುಗಳನ್ನು ಸೇವಿಸಿದಾಗ, ಅದು ಭೌತಿಕ ಶರೀರದ ಮೇಲೆ ಅಪಾರವಾದ ಪರಿಣಾಮ ಉಂಟುಮಾಡುತ್ತದೆ.ಭೌತಿಕ ಶರೀರ ನಮ್ಮದಲ್ಲ. ಅದರ ಮೇಲೆ ನಮ್ಮ ಹಕ್ಕು ಇರುವುದೇ ಇಲ್ಲ. ಅದನ್ನು ನಾವು ಬಾಡಿಗೆಗೆ ಪದೆದುಕೊಂದಿರುತ್ತೇವೆ. ಅದನ್ನು ಹಾಳು ಮಾಡಲು ನಮಗೆ ಹಕ್ಕೆ ಇಲ್ಲ. ಒಂದು ವೇಳೆ ಹಾಳು ಮಾಡಿದರೆ ಅದು ಪ್ರಕೃತಿಗೆ ವಿರುದ್ಧ, ಎಂಬ ಪ್ರಜ್ಞೆ ನಮಗೆ ಇದ್ದರೆ,ಬಹಳಷ್ಟು ದೇಹದ ಮೇಲಿನ ದಬ್ಬಾಳಿಕೆಯನ್ನು ನಾವು ಸಾಕಷ್ಟು ಕಡಿಮೆ ಮಾಡಬಹುದಾಗಿದೆ. ದೇಹ ನಮ್ಮದಲ್ಲ ಎಂದರೆ ಅರ್ಥವೇನೂ?ಎಂದು ಪ್ರಶ್ನೆ ಮಾಡುವವರು, ಯಾವುದೇ ಅನೈಚ್ಚಿಕ ಸ್ನಾಯು ನಮ್ಮ ವಶದಲ್ಲಿ ಇಲ್ಲ, ಉದಾಹರಣೆಗೆ: ನಮ್ಮ ಹೃದಯದ ಬಡಿತ ನಮ್ಮ ವಶದಲ್ಲಿ ಇಲ್ಲ ಎಂದು ಅರ್ಥ ಮಾಡಿಕೊಂಡರೆ ಗೊತ್ತಾಗುತ್ತದೆ, ಅದು ನಮ್ಮದಲ್ಲ ಅದರFriday, 22 February 2013
4.ಹಸಿರೊಣಗಿ ಕೊಂಬೆ
ಕಳಚುವ ಸ್ಥಿತಿಯಲ್ಲಿ ಎಲೆ -
-ಯುದುರಿದ ,ಭಾವನೆಗಳ
ಕಳಚಿಕೊಂಡನ್ತಿರುವ ಒಣ ಮರ
ನಾನಾಗೆ ......
ಮಣ್ಣಿಂದ ಬಿಡುಗಡೆ
ಹೊಂದಲಾರದೇ ..
ನಿಟ್ಟುಸಿರ ಗಯ್ಯಬಲ್ಲೆನಷ್ಟೇ ....
ರವಿಯ ಪ್ರೇಮದ ಹೊಂಗಿರಣಗಳು
ಮೈಮೇಲೆ ಚೆಲ್ಲಾಟವಾಡುತಿರಲು
ಪುಳಕಗೊಳ್ಳದ
ವಸಂತದಿ ತಂಪೆರೆವ ಕೋಗಿಲೆ -
-ಗೆ ತಾಣವಾಗದೆ
ಆ ಬಾವ ಜೀವಿಯ ಭಾವುಕತೆಗೆ
ಸ್ಪಂದಿಸಲಾಗದೆ
ಯವ್ವನದ ಗರಿ ಕಳಚಿದ ಮುದಿಹಕ್ಕಿಯ
ಹಳೆಯ ನೆನಪಿನಂತೆ
ಗತ ವೈಭವದ ನೆನೆಕೆಗಳ ಮೆಲುಕು ,
ನಿಂತಿರುವೆ ....
ನೀರೂಯಿದೆ.....
ಕಳಚುವ ಸ್ಥಿತಿಯಲ್ಲಿ ಎಲೆ -
-ಯುದುರಿದ ,ಭಾವನೆಗಳ
ಕಳಚಿಕೊಂಡನ್ತಿರುವ ಒಣ ಮರ
ನಾನಾಗೆ ......
ಮಣ್ಣಿಂದ ಬಿಡುಗಡೆ
ಹೊಂದಲಾರದೇ ..
ನಿಟ್ಟುಸಿರ ಗಯ್ಯಬಲ್ಲೆನಷ್ಟೇ ....
ರವಿಯ ಪ್ರೇಮದ ಹೊಂಗಿರಣಗಳು
ಮೈಮೇಲೆ ಚೆಲ್ಲಾಟವಾಡುತಿರಲು
ಪುಳಕಗೊಳ್ಳದ
ವಸಂತದಿ ತಂಪೆರೆವ ಕೋಗಿಲೆ -
-ಗೆ ತಾಣವಾಗದೆ
ಆ ಬಾವ ಜೀವಿಯ ಭಾವುಕತೆಗೆ
ಸ್ಪಂದಿಸಲಾಗದೆ
ಯವ್ವನದ ಗರಿ ಕಳಚಿದ ಮುದಿಹಕ್ಕಿಯ
ಹಳೆಯ ನೆನಪಿನಂತೆ
ಗತ ವೈಭವದ ನೆನೆಕೆಗಳ ಮೆಲುಕು ,
ನಿಂತಿರುವೆ ....
ನೀರೂಯಿದೆ.....
ನೀರೂಯಿದೆ.....
ಚಿಗುರಲಾರೆ ಮತ್ತೆ
ಹಸಿರು ಬಿರಿದು ಬಾನೆತ್ತರಕೆ
ಬೆಳೆಯುವಾಸೆಯಿದ್ದರೂ ,
ಪಕ್ಕದಲ್ಲಿನ ಕಿರುಸಸಿಗೆ
ಸ್ಥಳ ತೆರವು ಮಾಡುವ ತವಕದಿ
ಸಾವಿನ ನಿರೀಕ್ಷೆಯ ,
ಬದುಕಲಾರದ ಬಡ ಮುದುಕನ ತೆರದಿ
ಆಗಸವ ದಿಟ್ಟಿಸುತ್ತಿರುವೆ ,
ಮಳೆಗಾಗಿ ಅಲ್ಲ......
ಜೀವಿತದ ಕೊನೆಯ
ಕ್ಷಣಕ್ಕಾಗಿ .
ಚಿಗುರಲಾರೆ ಮತ್ತೆ
ಹಸಿರು ಬಿರಿದು ಬಾನೆತ್ತರಕೆ
ಬೆಳೆಯುವಾಸೆಯಿದ್ದರೂ ,
ಪಕ್ಕದಲ್ಲಿನ ಕಿರುಸಸಿಗೆ
ಸ್ಥಳ ತೆರವು ಮಾಡುವ ತವಕದಿ
ಸಾವಿನ ನಿರೀಕ್ಷೆಯ ,
ಬದುಕಲಾರದ ಬಡ ಮುದುಕನ ತೆರದಿ
ಆಗಸವ ದಿಟ್ಟಿಸುತ್ತಿರುವೆ ,
ಮಳೆಗಾಗಿ ಅಲ್ಲ......
ಜೀವಿತದ ಕೊನೆಯ
ಕ್ಷಣಕ್ಕಾಗಿ .
By: Sujatha Lokesh
3.'ನಿರಾಶಾವಾದ '
ಒಮ್ಮೆ ನನ್ನೂರ ಮಣ್ಣಲ್ಲಿ -
ಮಣ್ಣಾಗುತ್ತಾ ,ನನ್ನ ಕನಸು
ಕಲ್ಪನೆಗಳಲಿ ಕರಗುವಂತೆ
ಯಾರ ಕಣ್ಣಿಗೂ ಬೀಳದೇ ನಶಿಸುತ್ತಿರುವ
ಹಿರಿಯರ ಕಥೆಗೆ ಮೂಕಸಾಕ್ಷಿಯಾದ
ಕೋಟೆಯ ಮೇಲೊಮ್ಮೆ ,
ಹಲವರಿದ್ದ ಗುಂಪಿನಲ್ಲಿ ವಿಲೀನವಾಗಲೆತ್ನಿಸಿ ,
ವಿಫಲಳಾಗಿ
ನಾ ಒಂಟಿಯಾಗಿ
ಕುಳಿತಾಗ .....
ಸುತ್ತಲಿದ್ದ ವನಸಿರಿ ಹೊತ್ತ ಸಾಲು ಸಾಲು ಶೃಂಗಗಿರಿ
ಬತ್ತದೆ ಹರಿಯುತ್ತಿರುವ ಸುಂದರ ಝರಿ
ಚೂರು ಪಾರು ಮೋಡ ...ಬಿಟ್ಟರೆ
ನೀಲಿಯಾಗಸದ ತುಂಬಾ ...
ಚೆಲ್ಲು ಹರಿಯುವ -ಲಲ್ಲೆ ಹೊಡೆಯುವ
ಹುಡುಗ -ಹುಡುಗಿಯರ ನೆನಪಿಸುವ ಹಕ್ಕಿ ಪಕ್ಷಿಗಳು
ಮರವನ್ನಾಲಂಗಿಸಿ ನಿಂತ ಬಳ್ಳಿಗಳು ,
ವಾಸ್ತವದಲಿ ಇನ್ನೇನೇನೋ .....
ಕಣ್ಣೀರಲಿ ಕಾಣದಾಯ್ತು ....
ಮನವನೆಲ್ಲಾ ಆವರಿಸಬಹುದಾದ ಆ ಬಿಂಬ
ನನಗೆ ಮಾತ್ರಾ .....
ಕೋಟೆಯಲ್ಲೇ ....
ಎಲ್ಲೇ ...
ದಿಗಂತದಿಂದಾ ನನ್ನೆಡೆಗೂ
ಕವಿದ ಕಾರ್ಮೋಡದ ಮುಸುಕು
ವನಸಂಪ (ತ್ತ )ಲ್ಲಿ ಒಂಟಿಯಾಗಿ ನಿಂತ
ಒಣಕಲಾದ ಬೋಳುಮರ -
-ವೊಂದು ಕಾಣಿಸಿತ್ತು .
ಓಡಿದೇ ....
ಬಳಿಸಾರಿದೊಡನೆ
ಗಾಢವಾಗಿ ತಬ್ಬಿನಿಂತೆ
ಪ್ರೇಮಿಗಳ ಬಿಸಿಯೋ ...
ತಾಯಿ ಮಗುವಿನ ಅಕ್ಕರೆಯೂ .....
ದಂಪತಿಯ ಒಲುಮೆಯೋ ....
ಯಾವುದೋ ....
ಏನೋ...
ನನ್ನ ಕೃಶ ಬಾಹುಗಳಿ ಬಂಧಿಸಿದ್ದೇ ...
ಬಿಕ್ಕಿದ್ದೆ ...
ಕಣ್ಣಿಂದಾ ಉಪ್ಪುನೀರು ಪುಟಿದು
ಚುಂಬಿಸುತ್ತಾ ಸಾಗಿತ್ತು ....
ಆಗಲೋ ....
ಈಗಲೋ ...
ಎನ್ನುವ 'ಬೋಳು ಮರದ 'ಕಾಂಡಕ್ಕೆ
ಮಣ್ಣಾಗುತ್ತಾ ,ನನ್ನ ಕನಸು
ಕಲ್ಪನೆಗಳಲಿ ಕರಗುವಂತೆ
ಯಾರ ಕಣ್ಣಿಗೂ ಬೀಳದೇ ನಶಿಸುತ್ತಿರುವ
ಹಿರಿಯರ ಕಥೆಗೆ ಮೂಕಸಾಕ್ಷಿಯಾದ
ಕೋಟೆಯ ಮೇಲೊಮ್ಮೆ ,
ಹಲವರಿದ್ದ ಗುಂಪಿನಲ್ಲಿ ವಿಲೀನವಾಗಲೆತ್ನಿಸಿ ,
ವಿಫಲಳಾಗಿ
ನಾ ಒಂಟಿಯಾಗಿ
ಕುಳಿತಾಗ .....
ಸುತ್ತಲಿದ್ದ ವನಸಿರಿ ಹೊತ್ತ ಸಾಲು ಸಾಲು ಶೃಂಗಗಿರಿ
ಬತ್ತದೆ ಹರಿಯುತ್ತಿರುವ ಸುಂದರ ಝರಿ
ಚೂರು ಪಾರು ಮೋಡ ...ಬಿಟ್ಟರೆ
ನೀಲಿಯಾಗಸದ ತುಂಬಾ ...
ಚೆಲ್ಲು ಹರಿಯುವ -ಲಲ್ಲೆ ಹೊಡೆಯುವ
ಹುಡುಗ -ಹುಡುಗಿಯರ ನೆನಪಿಸುವ ಹಕ್ಕಿ ಪಕ್ಷಿಗಳು
ಮರವನ್ನಾಲಂಗಿಸಿ ನಿಂತ ಬಳ್ಳಿಗಳು ,
ವಾಸ್ತವದಲಿ ಇನ್ನೇನೇನೋ .....
ಕಣ್ಣೀರಲಿ ಕಾಣದಾಯ್ತು ....
ಮನವನೆಲ್ಲಾ ಆವರಿಸಬಹುದಾದ ಆ ಬಿಂಬ
ನನಗೆ ಮಾತ್ರಾ .....
ಕೋಟೆಯಲ್ಲೇ ....
ಎಲ್ಲೇ ...
ದಿಗಂತದಿಂದಾ ನನ್ನೆಡೆಗೂ
ಕವಿದ ಕಾರ್ಮೋಡದ ಮುಸುಕು
ವನಸಂಪ (ತ್ತ )ಲ್ಲಿ ಒಂಟಿಯಾಗಿ ನಿಂತ
ಒಣಕಲಾದ ಬೋಳುಮರ -
-ವೊಂದು ಕಾಣಿಸಿತ್ತು .
ಓಡಿದೇ ....
ಬಳಿಸಾರಿದೊಡನೆ
ಗಾಢವಾಗಿ ತಬ್ಬಿನಿಂತೆ
ಪ್ರೇಮಿಗಳ ಬಿಸಿಯೋ ...
ತಾಯಿ ಮಗುವಿನ ಅಕ್ಕರೆಯೂ .....
ದಂಪತಿಯ ಒಲುಮೆಯೋ ....
ಯಾವುದೋ ....
ಏನೋ...
ನನ್ನ ಕೃಶ ಬಾಹುಗಳಿ ಬಂಧಿಸಿದ್ದೇ ...
ಬಿಕ್ಕಿದ್ದೆ ...
ಕಣ್ಣಿಂದಾ ಉಪ್ಪುನೀರು ಪುಟಿದು
ಚುಂಬಿಸುತ್ತಾ ಸಾಗಿತ್ತು ....
ಆಗಲೋ ....
ಈಗಲೋ ...
ಎನ್ನುವ 'ಬೋಳು ಮರದ 'ಕಾಂಡಕ್ಕೆ
ಇದು ನಾನು ಮತ್ತು ಬಿ.ವಿ.ಭಾರತಿ ಸೇರಿ ಹೊಸೆದ ಸಾಲುಗಳು .ಫ್ರೆಂಡ್ಸ್ ನನ್ನದೊಂದು ವಿನೂತನ ಪ್ರಯತ್ನ
ದಿನಕರನ ಕಿರಣ ಧರಣಿಗೆ ಮುತ್ತನಿತ್ತು
ಧರಣಿ ಚೆಲುವೆಗೆ ದಿನವೆಲ್ಲಾ ರೋಮಾಂಚನ .
ಧರಣಿ ಚೆಲುವೆಗೆ ದಿನವೆಲ್ಲಾ ರೋಮಾಂಚನ .
ಅದಕೂ ಮೊದಲು ಇಳೆಗೆ ಇಬ್ಬನಿಯ
ಸಹಜ ಸ್ನಿಗ್ಧ ಸಿಂಚನ .
ರಾತ್ರಿಯೆಲ್ಲ ಚಂದ್ರ ಮುತ್ತಿಕ್ಕಿದ್ದ
ಮತ್ತು ಇಳಿವ ಮುನ್ನ
ಮತ್ತೆ ದಿನಕರನ ಧಾಳಿಗೆ ತುತ್ತಾದರೂ
ಇನಿತೂ ಸುಸ್ತಿಲ್ಲವಲ್ಲ ಇವಳಿಗೆ !!
ಚಂದ್ರಮ ಮುತ್ತಿಗೆ ತಂಪಾದ ಚೆಲುವೆ ಬುವಿ
ಬಿಸಿಯಾಗಿಸಿದ ಅವಳ ಹಗಲಿನಲಿ ರವಿ
ಮುತ್ತಿಗೆ ತಂಪಾಗಲು ಸಾಧ್ಯವೇ?
ಉಹೂ ! ಆವೇಗದ ಜ್ವರವಿಳಿದು
ಮೈ ಮಾತ್ರ ಶೀತಲ
ತುಟಿ ಕೆಂಡವಾಗಿದ್ದು ನೀ ಕಾಣಲಿಲ್ಲ?!
ಸುಡುವ ಧಾತ್ರಿಯ ತಣಿಸಲು ವರುಣ ಕೃಪೆ ಸುರಿಯೆ
ಬಸಿರು ನೆಲ ,ಮೊಳಕೆ ಶುರು ,ಎಲ್ಲೆಲ್ಲೂ ಹಸಿರು .
ಹಡೆದ ಸಮೃದ್ಧೆಯ ಸೊಬಗಿಗೆ
ಅವಾಕ್ಕಾದ ಅವರಿಬ್ಬರಿಗೆ
ಈಗ ಜಗಳವಂತೆ ...
ಇದಕೆ ಕಾರಣ ನಾನು ನಾನೆಂದು !
ಸಹಜ ಸ್ನಿಗ್ಧ ಸಿಂಚನ .
ರಾತ್ರಿಯೆಲ್ಲ ಚಂದ್ರ ಮುತ್ತಿಕ್ಕಿದ್ದ
ಮತ್ತು ಇಳಿವ ಮುನ್ನ
ಮತ್ತೆ ದಿನಕರನ ಧಾಳಿಗೆ ತುತ್ತಾದರೂ
ಇನಿತೂ ಸುಸ್ತಿಲ್ಲವಲ್ಲ ಇವಳಿಗೆ !!
ಚಂದ್ರಮ ಮುತ್ತಿಗೆ ತಂಪಾದ ಚೆಲುವೆ ಬುವಿ
ಬಿಸಿಯಾಗಿಸಿದ ಅವಳ ಹಗಲಿನಲಿ ರವಿ
ಮುತ್ತಿಗೆ ತಂಪಾಗಲು ಸಾಧ್ಯವೇ?
ಉಹೂ ! ಆವೇಗದ ಜ್ವರವಿಳಿದು
ಮೈ ಮಾತ್ರ ಶೀತಲ
ತುಟಿ ಕೆಂಡವಾಗಿದ್ದು ನೀ ಕಾಣಲಿಲ್ಲ?!
ಸುಡುವ ಧಾತ್ರಿಯ ತಣಿಸಲು ವರುಣ ಕೃಪೆ ಸುರಿಯೆ
ಬಸಿರು ನೆಲ ,ಮೊಳಕೆ ಶುರು ,ಎಲ್ಲೆಲ್ಲೂ ಹಸಿರು .
ಹಡೆದ ಸಮೃದ್ಧೆಯ ಸೊಬಗಿಗೆ
ಅವಾಕ್ಕಾದ ಅವರಿಬ್ಬರಿಗೆ
ಈಗ ಜಗಳವಂತೆ ...
ಇದಕೆ ಕಾರಣ ನಾನು ನಾನೆಂದು !
Sunday, 10 February 2013
1.viraha ---
ವಿರಹದುರಿಯಲಿ ಬೇಯುತ್ತಾ
ಕೋಪದಲಿ ಧುಮುಗುಡುತ್ತಿರುವಾಗ
ಸೀಲಿಂಗ್ ಫ್ಯಾನಿನ ರಭಸ
ಗಾಳಿಯೊಂದಿಗೆ ….
ಆ ಗಾಳಿಯೂ ನುಸುಳದಂತೆ
ಬಿಗಿದಪ್ಪಿದ ನಿನ್ನ ತೋಳುಗಳು
ನಾ ತಂಪನ್ನೀವೆ
ಫ್ಯಾನಿನ ಗಾಳಿಯೇಕೆ
ಎಂದು ಸವಾಲೆಸೆದ ಕ್ಷಣವೇ …..
ನಾ ಮಂಜಾಗಿ ….
ನಿನ್ನೊಳು ಸೇರಿಹೋದೆ.
2.ಅಲೆಯ ಹೊಡೆತಕ್ಕೆ ಮರಳ ಮೇಲಿನ ನಿನ್ನ
ಹೆಸರು ಅಳಿಸಬಹುದು ,,,,,
ನಿನ್ನನ್ನೇ ಪ್ರೀತಿಸುವ ನನ್ನ
ಹೃದಯದಲಿ ಬರೆದ
ನಿನ್ನ ಹೆಸರು ಅಳಿಸಲಾದೀತೆ ?
ಮೋಹವೇನಲ್ಲ ಜೀವನ ಪ್ರೇಮ .
ಎಲ್ಲವೂ ಬೇಕು ಬದುಕಿರುವ ತನಕ .
ನೀನೂ ನಿನ್ನ ಪ್ರೀತಿಯೂ ..
ವಿರಹದುರಿಯಲಿ ಬೇಯುತ್ತಾ
ಕೋಪದಲಿ ಧುಮುಗುಡುತ್ತಿರುವಾಗ
ಸೀಲಿಂಗ್ ಫ್ಯಾನಿನ ರಭಸ
ಗಾಳಿಯೊಂದಿಗೆ ….
ಆ ಗಾಳಿಯೂ ನುಸುಳದಂತೆ
ಬಿಗಿದಪ್ಪಿದ ನಿನ್ನ ತೋಳುಗಳು
ನಾ ತಂಪನ್ನೀವೆ
ಫ್ಯಾನಿನ ಗಾಳಿಯೇಕೆ
ಎಂದು ಸವಾಲೆಸೆದ ಕ್ಷಣವೇ …..
ನಾ ಮಂಜಾಗಿ ….
ನಿನ್ನೊಳು ಸೇರಿಹೋದೆ.
2.ಅಲೆಯ ಹೊಡೆತಕ್ಕೆ ಮರಳ ಮೇಲಿನ ನಿನ್ನ
ಹೆಸರು ಅಳಿಸಬಹುದು ,,,,,
ನಿನ್ನನ್ನೇ ಪ್ರೀತಿಸುವ ನನ್ನ
ಹೃದಯದಲಿ ಬರೆದ
ನಿನ್ನ ಹೆಸರು ಅಳಿಸಲಾದೀತೆ ?
ಮೋಹವೇನಲ್ಲ ಜೀವನ ಪ್ರೇಮ .
ಎಲ್ಲವೂ ಬೇಕು ಬದುಕಿರುವ ತನಕ .
ನೀನೂ ನಿನ್ನ ಪ್ರೀತಿಯೂ ..
Saturday, 9 February 2013
ಪ್ರೀತಿಯ ಅಕ್ಕಾ ,
ನನ್ನ ಲೆಟರ್ ನೋಡಿದಾಗ ಎದೆ ಡವ ಡವ ಅಂತಾ ?ನಿನಗೆ ಮಾತ್ರಾ ಅಲ್ಲ ,ಜೀವವಿರೋ ಎಲ್ಲರಿಗೂ ಬಡಿದುಕೊಳ್ಳುತ್ತೆ .ನನ್ನ ಲೆಟರ್ ನೋಡದೆ ಇರುವಾಗಲೂ ಬಡಿಯುತ್ತಿರುತ್ತೆ .ಬೇಕಾದ್ರೆ ಪರೀಕ್ಷೆ ಮಾಡ್ಕೋ .
ಹೌದಕ್ಕಾ , ಆಶಾಳ ವಿಷಯದಲ್ಲಿ ನಾನು ತೀರಾ ಅಪ್ಸೆಟ್ ಆಗ್ತೀನಿ ,ಹಾಗಾಗಬಾರದು ಅಂತಾ ಎಷ್ಟೇ ಪ್ರಯತ್ನಪಟ್ರೂ ,ನನ್ನ ಮನಸನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಆಗ್ತಿಲ್ಲ .But any how it is a challenge to me and my personality . ಆಶಾ ನೇ ದುಃಖಕ್ಕೆ ಮೂಲ ಅಲ್ಲ ಸುಖಕ್ಕೆ ಮೂಲ ಅನ್ನೋದನ್ನು ಪ್ರೂವ್ ಮಾಡ್ತೇನೆ .
ನನ್ನ ತಕ್ಕ ಆಯ್ಕೆ ಅವಳಲ್ಲ .ನಾನು ಯಾವುದೇ ಆದರ್ಶಗಳಿಲ್ಲದ ಒಬ್ಬ ಸಾಧಾರಣ ಮನುಷ್ಯ .ಬಡವ . ಅವಳೋ ಶ್ರೀಮಂತೆ .ನಾನು ಸ್ವಾಭಿಮಾನಿ ಅಕ್ಕಾ .ಎಂತಹಾ ಸ್ರೀಮನ್ತಿಕೆಯಿನ್ದಾನೂ ನನ್ನ ಸ್ವಾಭಿಮಾನಕ್ಕೆ ಬೆಲೆ ಕಟ್ಟೋದು ಯಾರಿಂದನೂ ಸಾಧ್ಯವಿಲ್ಲ .ಶ್ರೀಮಂತಿಕೆ ಕನಸಿನ ಸಂಪತ್ತಿನಂತೆ .ಇಂದು ಲಕ್ಷಾಧಿಪತಿಯಾಗಿದ್ದವನು ನಾಳೆ ಭಿಕ್ಷಾಧಿಪತಿ ಆಗಬಹುದು ಯವ್ವನದ ಮದದಲ್ಲಿ ,ಶ್ರೀಮಂತಿಕೆಯ ಮದದಿಂದಾ ಏನನ್ನಾದರೂ ಮಾಡಬಹುದು ಅನ್ನೋ ಭ್ರಮೆಯಲ್ಲಿರ್ತಾರೆ .ಆದರೆ ಎಷ್ಟು ಶ್ರೀಮಂತಿಕೆಯೂ ಒಬ್ಬನಿಗೆ ಮನಶ್ಯಾನ್ತಿಯನ್ನು ತಂದುಕೊಡಲು ಸಾಧ್ಯನಾ ? ಮಾನವೀಯತೆಯಿಲ್ಲವಾದರೆ ಎಂತಹಾ ಶ್ರೀಮಂತಿಕೆಯೂ ಉಪಯೋಗವಾಗದು .ಸಂದರ್ಭ ಬಂದರೆ ಶ್ರೀಮಂತನೂ ನನ್ನಂತಹ ಬಡವನಲ್ಲಿ ಬೇಡಬೇಕಾದೀತು .ಆಗ ನಾನು ಅಮಾನವೀಯವಾಗಿ ನಡೆದುಕೊಂಡರೆ ?ಚ್ಛೆ ನಾಯಿ ಕಚ್ಚುತ್ತೆ ಅಂತಾ ನಾವೂ ಕಚ್ಚಲಿಕ್ಕೆ ಸಾಧ್ಯನಾ ? ನಮ್ಮ ವ್ಯಕ್ತಿತ್ವಕ್ಕೆ ಕುಂದು .
ನನ್ನ ಜೀವನದಲ್ಲಿ ಅಂತಹ ಘಟನೆ ಬಂದ್ರೆ ?ಹೇಗೆ ವರ್ತಿಸಬೇಕಾಗಿತ್ತು ?
surprise ....
ಇತ್ತೀಚೆಗಷ್ಟೇ ವ್ಯಾಲಂಟೈನ್ ಡೇ ಯಂದು ,ಒಂದು ಗಿಫ್ಟ್ ವಿಷಯಕ್ಕಾಗಿ ನನ್ನೊಂದಿಗೆ ಜಗಳವಾಡಿದ ,ಅದುವರೆಗೂ ಇದ್ದ ನಮ್ಮ ಪವಿತ್ರ (!) ಪ್ರೇಮವನ್ನು ತಿರಸ್ಕರಿಸಿ ಹೋಗಿದ್ದ 'ಆಶಾ ' ಮತ್ತೆ ನನ್ನ ಬಳಿ ಬಂದಳು .ಏನನ್ನೋ ಬೇಡಿದಾಗ ನನ್ನ ಪರಿಸ್ತಿತಿ ಹೇಗಿರಬಹುದು ಉಹಿಸಿದ್ದೀಯಾ ಅಕ್ಕಾ ?
ಸೋಮವಾರ ಅಂದು ,ಬೆಳಗ್ಗೆ ನನ್ನ ಕಾಲೇಜ್ ಬಳಿ ನಿಂತಿದ್ಲು .ನನ್ನನ್ನು ಕಂಡ ಒಡನೆಯೇ 'ಸೂರ್ಯ ಪ್ಲೀಸ್ ಒಂದು ನಿಮಿಷ .ಒಂದು ಹೆಲ್ಪ್ ಮಾಡ್ತೀಯಾ ? ಅಪ್ಪನೇ ನನ್ನನ್ನ ನಿನ್ನಲ್ಲಿಗೆ ಕಳಿಸಿದ್ದಾರೆ ' ಅಂದಳು .ನನಗರಿವಿಲ್ಲದೆಯೇ ನನ್ನ ಕೈ ಮೇಲೆ ಹೋಯ್ತು . ತಕ್ಷಣ ನನ್ನ ಒಳ ಪ್ರಜ್ಞೆ ಎಚ್ಚರಿಸಿ ಆಗುವ ಅನಾಹುತವನ್ನು ತಪ್ಪಿಸಿತು .
ಅವಳ ಬಗ್ಗೆ ಕನಿಕರ ಮೂಡಿತು .ಮೊನ್ನೆ ಮೊನ್ನೆಯಷ್ಟೇ ಒಂದು ಗಿಫ್ಟ್ ಎಂಬ ಮಾನದನ್ದದಿಂದಾ ನನ್ನನ್ನು ಅಳೆದು ತೊರೆದು ಹೋದ ಹುಡುಗಿ ಇವಳೇನಾ ಅನಿಸಿತು .ಆಗ ನನ್ನಲ್ಲಾದ ದ್ವಂದ್ವ !ಅದನ್ನು ಮಾತಿನಲ್ಲಿ ವಿವರಿಸಲಾರೆ ಅಕ್ಕ .'ಜೀವನವೊಂದು ನಾಟಕ ' ಎನ್ನುವ ಕಂಬಾರರ ಮಾತು ನೆನಪಾಯ್ತು .ನಿನ್ನಂತಹ ಶ್ರೀಮಂತೆಗೆ ನಾನು ಏನ್ ಸಹಾಯ ಮಾಡೋಕಾಗುತ್ತೆ ನಾಲಿಗೆಯಿಂದಾ ಜಾರಿತು .ಬಹುಷಃ ಕಥೆಯೊಂದನ್ನು ಓದಿದ ಹಾಗೇ ಆಗ್ತಿದೆ ಆಲ್ವಾ ಅಕ್ಕ್ಕಾ ?ಇದು ಕಥೇನೆ ಮಾತ್ರಾ ಸತ್ಯ ಕಥೆ .
ಸೂರ್ಯ ನಾನು ನಿನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ .ಈಗ ಹೆಚ್ಚು ಮಾತಾಡಿದ್ರೆ ನನ್ನಕ್ಕನ ಜೀವ ಹೋಗುತ್ತೆ ಸೂರ್ಯ ಎಂದಾಗ ಇದೇನು ಕನಸೋ ನನಸೋ ಎಂದು ನನಗೇ ಆಶ್ಚರ್ಯವಾಯ್ತು .ನನಗೇ ಅರಿವಿಲ್ಲದೇ ಕಾರಿನಲ್ಲಿ ಹೋಗಿ ಕುಳಿತು ಮಂಗಳೂರ ಗೆ ಹೋದೆ .ಪ್ರಜ್ಞಾ ಹೀನ ಸ್ಥಿತಿಯಲ್ಲಿ ನಮ್ಮತ್ತಿಗೆ ಅಂದ್ರೆ ಅವಳ ಅಕ್ಕ ! ಅಲ್ಲಿ ನಡೆದಿದ್ದ ವಿಷ್ಯ ಇಷ್ಟು -ಡೆಲಿವರಿ ಕಷ್ಟವಾಗಿ ಒಪೆರೇಶನ್ ಮಾಡಿ ಮಗು ತೆಗೆಯಬೇಕಾಗಿತ್ತಂತೆ .ಬ್ಲಡ್ ಲಾಸ್ ಆಗಿ ಚಿಂತಾಜನಕ ಸ್ತಿತಿಯಲ್ಲಿ ಅತ್ತಿಗೆ . ನೋಡಿ ಅಳು ಬಂತು . AB-ve ರಕ್ತ ಬೇಕಾಗಿತ್ತು .ಎಷ್ಟು ಹುಡುಕಿದರೂ ಸಿಗದೇ ಆಶಾ ನನ್ನಲ್ಲಿಗೆ ಬರಬೇಕಾಯ್ತು .ಹೇಗಿದೆ ನಾಟಕ ?ಆಕಸ್ಮಾತ್ ನಾನು ಆಗಲ್ಲಾ ಅಂದಿದ್ರೆ ?ಅವ್ರ ಶ್ರೀಮಂತಿಕೆಯಿಂದಾ ಏನು ಮಾಡಲಿಕ್ಕೆ ಸಾಧ್ಯವಾಗ್ತಿತ್ತು ? ಅವರ ಅದೃಷ್ಟ ನೋಡು .ಮೊನ್ನೆ ಕಾಲೇಜ್ ಕ್ಯಾಂಪಸ್ ನಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದ್ದರು .ನಾನೂ ಭಾಗವಹಿಸಿದ್ದೆ .ಆಗ ನನ್ನ ಗ್ರೂಪ್ ಚೆಕ್ ಮಾಡಿದ ಡಾಕ್ಟರು 'ನಿಮ್ಮದು ರೇರ್ ಬ್ಲಡ್ ಗ್ರುಪ್ ,ಈಗ ಕೊಡೋದು ಬೇಡ .ನಮಗೆ ಅವಶ್ಯವಿದ್ದಾಗ ಕರೆಸಿಕೊಳ್ತೆವೆ 'ಅಂದಿದ್ರು .ಅದಾದ ಎರಡೇ ದಿನಕ್ಕೆ ಹೀಗಾಯ್ತು .ಮೊದಲೇ ನಾನು ಸಪೂರ .ರಕ್ತ ಕೊಟ್ಟು ಏಳಬೇಕಾದ್ರೆ ನಿಶ್ಯಕ್ತಿ .,ನನಗೇ ಗ್ಲುಕೋಸ್ ಕೊಡಬೇಕಾಯ್ತಂತೆ .ಈಗ ಪರವಾಗಿಲ್ಲ ,ಕಾಲೇಜ್ ಗೆ ಹೋಗ್ತಿದ್ದೇನೆ .
ಅವಳಿಗೆ ಗಿಫ್ಟ್ ಕೊಡಲು ಬೇಕಾದ ಹಣ ಈಗ ಕೇಳಿದ್ರೆ ಎಷ್ಟ್ ಕೇಳಿದರೂ ಸಿಗುತಿತ್ತು ಆಲ್ವಾ ?ಒಂದು ಬಾಟ್ಲಿ ರಕ್ತ ! ಬೆಲೆ ?
ನಾನು ಆರಾಮಾಗಿ ದುಡ್ಡು ಕೇಳಿದ್ರೆ ಕೊಡುತಿದ್ರು ಆಲ್ವಾ ? ಮಗಳ ಜೀವಕ್ಕೆ ಬೆಲೆ! ನಾನೂ ಹಣವಂತ ಆಗ್ತಿದ್ದೆ . ಗಿಫ್ಟ್ ಕೊಡಿಸಬಹುದಿತ್ತು ಆಲ್ವಾ ?ಹೇಗಿದೆ ಐಡಿಯಾ :-)
ಅಕ್ಕಾ ಮತ್ತೆ ಬರೆಯುತ್ತೇನೆ .
--ನಿನ್ನ ಸೂರ್ಯ .
ನನ್ನ ಲೆಟರ್ ನೋಡಿದಾಗ ಎದೆ ಡವ ಡವ ಅಂತಾ ?ನಿನಗೆ ಮಾತ್ರಾ ಅಲ್ಲ ,ಜೀವವಿರೋ ಎಲ್ಲರಿಗೂ ಬಡಿದುಕೊಳ್ಳುತ್ತೆ .ನನ್ನ ಲೆಟರ್ ನೋಡದೆ ಇರುವಾಗಲೂ ಬಡಿಯುತ್ತಿರುತ್ತೆ .ಬೇಕಾದ್ರೆ ಪರೀಕ್ಷೆ ಮಾಡ್ಕೋ .
ಹೌದಕ್ಕಾ , ಆಶಾಳ ವಿಷಯದಲ್ಲಿ ನಾನು ತೀರಾ ಅಪ್ಸೆಟ್ ಆಗ್ತೀನಿ ,ಹಾಗಾಗಬಾರದು ಅಂತಾ ಎಷ್ಟೇ ಪ್ರಯತ್ನಪಟ್ರೂ ,ನನ್ನ ಮನಸನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಆಗ್ತಿಲ್ಲ .But any how it is a challenge to me and my personality . ಆಶಾ ನೇ ದುಃಖಕ್ಕೆ ಮೂಲ ಅಲ್ಲ ಸುಖಕ್ಕೆ ಮೂಲ ಅನ್ನೋದನ್ನು ಪ್ರೂವ್ ಮಾಡ್ತೇನೆ .
ನನ್ನ ತಕ್ಕ ಆಯ್ಕೆ ಅವಳಲ್ಲ .ನಾನು ಯಾವುದೇ ಆದರ್ಶಗಳಿಲ್ಲದ ಒಬ್ಬ ಸಾಧಾರಣ ಮನುಷ್ಯ .ಬಡವ . ಅವಳೋ ಶ್ರೀಮಂತೆ .ನಾನು ಸ್ವಾಭಿಮಾನಿ ಅಕ್ಕಾ .ಎಂತಹಾ ಸ್ರೀಮನ್ತಿಕೆಯಿನ್ದಾನೂ ನನ್ನ ಸ್ವಾಭಿಮಾನಕ್ಕೆ ಬೆಲೆ ಕಟ್ಟೋದು ಯಾರಿಂದನೂ ಸಾಧ್ಯವಿಲ್ಲ .ಶ್ರೀಮಂತಿಕೆ ಕನಸಿನ ಸಂಪತ್ತಿನಂತೆ .ಇಂದು ಲಕ್ಷಾಧಿಪತಿಯಾಗಿದ್ದವನು ನಾಳೆ ಭಿಕ್ಷಾಧಿಪತಿ ಆಗಬಹುದು ಯವ್ವನದ ಮದದಲ್ಲಿ ,ಶ್ರೀಮಂತಿಕೆಯ ಮದದಿಂದಾ ಏನನ್ನಾದರೂ ಮಾಡಬಹುದು ಅನ್ನೋ ಭ್ರಮೆಯಲ್ಲಿರ್ತಾರೆ .ಆದರೆ ಎಷ್ಟು ಶ್ರೀಮಂತಿಕೆಯೂ ಒಬ್ಬನಿಗೆ ಮನಶ್ಯಾನ್ತಿಯನ್ನು ತಂದುಕೊಡಲು ಸಾಧ್ಯನಾ ? ಮಾನವೀಯತೆಯಿಲ್ಲವಾದರೆ ಎಂತಹಾ ಶ್ರೀಮಂತಿಕೆಯೂ ಉಪಯೋಗವಾಗದು .ಸಂದರ್ಭ ಬಂದರೆ ಶ್ರೀಮಂತನೂ ನನ್ನಂತಹ ಬಡವನಲ್ಲಿ ಬೇಡಬೇಕಾದೀತು .ಆಗ ನಾನು ಅಮಾನವೀಯವಾಗಿ ನಡೆದುಕೊಂಡರೆ ?ಚ್ಛೆ ನಾಯಿ ಕಚ್ಚುತ್ತೆ ಅಂತಾ ನಾವೂ ಕಚ್ಚಲಿಕ್ಕೆ ಸಾಧ್ಯನಾ ? ನಮ್ಮ ವ್ಯಕ್ತಿತ್ವಕ್ಕೆ ಕುಂದು .
ನನ್ನ ಜೀವನದಲ್ಲಿ ಅಂತಹ ಘಟನೆ ಬಂದ್ರೆ ?ಹೇಗೆ ವರ್ತಿಸಬೇಕಾಗಿತ್ತು ?
surprise ....
ಇತ್ತೀಚೆಗಷ್ಟೇ ವ್ಯಾಲಂಟೈನ್ ಡೇ ಯಂದು ,ಒಂದು ಗಿಫ್ಟ್ ವಿಷಯಕ್ಕಾಗಿ ನನ್ನೊಂದಿಗೆ ಜಗಳವಾಡಿದ ,ಅದುವರೆಗೂ ಇದ್ದ ನಮ್ಮ ಪವಿತ್ರ (!) ಪ್ರೇಮವನ್ನು ತಿರಸ್ಕರಿಸಿ ಹೋಗಿದ್ದ 'ಆಶಾ ' ಮತ್ತೆ ನನ್ನ ಬಳಿ ಬಂದಳು .ಏನನ್ನೋ ಬೇಡಿದಾಗ ನನ್ನ ಪರಿಸ್ತಿತಿ ಹೇಗಿರಬಹುದು ಉಹಿಸಿದ್ದೀಯಾ ಅಕ್ಕಾ ?
ಸೋಮವಾರ ಅಂದು ,ಬೆಳಗ್ಗೆ ನನ್ನ ಕಾಲೇಜ್ ಬಳಿ ನಿಂತಿದ್ಲು .ನನ್ನನ್ನು ಕಂಡ ಒಡನೆಯೇ 'ಸೂರ್ಯ ಪ್ಲೀಸ್ ಒಂದು ನಿಮಿಷ .ಒಂದು ಹೆಲ್ಪ್ ಮಾಡ್ತೀಯಾ ? ಅಪ್ಪನೇ ನನ್ನನ್ನ ನಿನ್ನಲ್ಲಿಗೆ ಕಳಿಸಿದ್ದಾರೆ ' ಅಂದಳು .ನನಗರಿವಿಲ್ಲದೆಯೇ ನನ್ನ ಕೈ ಮೇಲೆ ಹೋಯ್ತು . ತಕ್ಷಣ ನನ್ನ ಒಳ ಪ್ರಜ್ಞೆ ಎಚ್ಚರಿಸಿ ಆಗುವ ಅನಾಹುತವನ್ನು ತಪ್ಪಿಸಿತು .
ಅವಳ ಬಗ್ಗೆ ಕನಿಕರ ಮೂಡಿತು .ಮೊನ್ನೆ ಮೊನ್ನೆಯಷ್ಟೇ ಒಂದು ಗಿಫ್ಟ್ ಎಂಬ ಮಾನದನ್ದದಿಂದಾ ನನ್ನನ್ನು ಅಳೆದು ತೊರೆದು ಹೋದ ಹುಡುಗಿ ಇವಳೇನಾ ಅನಿಸಿತು .ಆಗ ನನ್ನಲ್ಲಾದ ದ್ವಂದ್ವ !ಅದನ್ನು ಮಾತಿನಲ್ಲಿ ವಿವರಿಸಲಾರೆ ಅಕ್ಕ .'ಜೀವನವೊಂದು ನಾಟಕ ' ಎನ್ನುವ ಕಂಬಾರರ ಮಾತು ನೆನಪಾಯ್ತು .ನಿನ್ನಂತಹ ಶ್ರೀಮಂತೆಗೆ ನಾನು ಏನ್ ಸಹಾಯ ಮಾಡೋಕಾಗುತ್ತೆ ನಾಲಿಗೆಯಿಂದಾ ಜಾರಿತು .ಬಹುಷಃ ಕಥೆಯೊಂದನ್ನು ಓದಿದ ಹಾಗೇ ಆಗ್ತಿದೆ ಆಲ್ವಾ ಅಕ್ಕ್ಕಾ ?ಇದು ಕಥೇನೆ ಮಾತ್ರಾ ಸತ್ಯ ಕಥೆ .
ಸೂರ್ಯ ನಾನು ನಿನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ .ಈಗ ಹೆಚ್ಚು ಮಾತಾಡಿದ್ರೆ ನನ್ನಕ್ಕನ ಜೀವ ಹೋಗುತ್ತೆ ಸೂರ್ಯ ಎಂದಾಗ ಇದೇನು ಕನಸೋ ನನಸೋ ಎಂದು ನನಗೇ ಆಶ್ಚರ್ಯವಾಯ್ತು .ನನಗೇ ಅರಿವಿಲ್ಲದೇ ಕಾರಿನಲ್ಲಿ ಹೋಗಿ ಕುಳಿತು ಮಂಗಳೂರ ಗೆ ಹೋದೆ .ಪ್ರಜ್ಞಾ ಹೀನ ಸ್ಥಿತಿಯಲ್ಲಿ ನಮ್ಮತ್ತಿಗೆ ಅಂದ್ರೆ ಅವಳ ಅಕ್ಕ ! ಅಲ್ಲಿ ನಡೆದಿದ್ದ ವಿಷ್ಯ ಇಷ್ಟು -ಡೆಲಿವರಿ ಕಷ್ಟವಾಗಿ ಒಪೆರೇಶನ್ ಮಾಡಿ ಮಗು ತೆಗೆಯಬೇಕಾಗಿತ್ತಂತೆ .ಬ್ಲಡ್ ಲಾಸ್ ಆಗಿ ಚಿಂತಾಜನಕ ಸ್ತಿತಿಯಲ್ಲಿ ಅತ್ತಿಗೆ . ನೋಡಿ ಅಳು ಬಂತು . AB-ve ರಕ್ತ ಬೇಕಾಗಿತ್ತು .ಎಷ್ಟು ಹುಡುಕಿದರೂ ಸಿಗದೇ ಆಶಾ ನನ್ನಲ್ಲಿಗೆ ಬರಬೇಕಾಯ್ತು .ಹೇಗಿದೆ ನಾಟಕ ?ಆಕಸ್ಮಾತ್ ನಾನು ಆಗಲ್ಲಾ ಅಂದಿದ್ರೆ ?ಅವ್ರ ಶ್ರೀಮಂತಿಕೆಯಿಂದಾ ಏನು ಮಾಡಲಿಕ್ಕೆ ಸಾಧ್ಯವಾಗ್ತಿತ್ತು ? ಅವರ ಅದೃಷ್ಟ ನೋಡು .ಮೊನ್ನೆ ಕಾಲೇಜ್ ಕ್ಯಾಂಪಸ್ ನಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದ್ದರು .ನಾನೂ ಭಾಗವಹಿಸಿದ್ದೆ .ಆಗ ನನ್ನ ಗ್ರೂಪ್ ಚೆಕ್ ಮಾಡಿದ ಡಾಕ್ಟರು 'ನಿಮ್ಮದು ರೇರ್ ಬ್ಲಡ್ ಗ್ರುಪ್ ,ಈಗ ಕೊಡೋದು ಬೇಡ .ನಮಗೆ ಅವಶ್ಯವಿದ್ದಾಗ ಕರೆಸಿಕೊಳ್ತೆವೆ 'ಅಂದಿದ್ರು .ಅದಾದ ಎರಡೇ ದಿನಕ್ಕೆ ಹೀಗಾಯ್ತು .ಮೊದಲೇ ನಾನು ಸಪೂರ .ರಕ್ತ ಕೊಟ್ಟು ಏಳಬೇಕಾದ್ರೆ ನಿಶ್ಯಕ್ತಿ .,ನನಗೇ ಗ್ಲುಕೋಸ್ ಕೊಡಬೇಕಾಯ್ತಂತೆ .ಈಗ ಪರವಾಗಿಲ್ಲ ,ಕಾಲೇಜ್ ಗೆ ಹೋಗ್ತಿದ್ದೇನೆ .
ಅವಳಿಗೆ ಗಿಫ್ಟ್ ಕೊಡಲು ಬೇಕಾದ ಹಣ ಈಗ ಕೇಳಿದ್ರೆ ಎಷ್ಟ್ ಕೇಳಿದರೂ ಸಿಗುತಿತ್ತು ಆಲ್ವಾ ?ಒಂದು ಬಾಟ್ಲಿ ರಕ್ತ ! ಬೆಲೆ ?
ನಾನು ಆರಾಮಾಗಿ ದುಡ್ಡು ಕೇಳಿದ್ರೆ ಕೊಡುತಿದ್ರು ಆಲ್ವಾ ? ಮಗಳ ಜೀವಕ್ಕೆ ಬೆಲೆ! ನಾನೂ ಹಣವಂತ ಆಗ್ತಿದ್ದೆ . ಗಿಫ್ಟ್ ಕೊಡಿಸಬಹುದಿತ್ತು ಆಲ್ವಾ ?ಹೇಗಿದೆ ಐಡಿಯಾ :-)
ಅಕ್ಕಾ ಮತ್ತೆ ಬರೆಯುತ್ತೇನೆ .
--ನಿನ್ನ ಸೂರ್ಯ .
Thursday, 7 February 2013
ಸುಸಂಸ್ಕೃತ ಮನೆಯ ಹೆಣ್ಣು ಆಕೆ ,ನೋಡಲು ಸುಂದರಿ ಅಲ್ಲದಿದ್ರೂ ತೆಳ್ಳಗೆ ,ಬೆಳ್ಳಗೆ ಇದ್ಲು .ನಮ್ಮಪ್ಪ ದನದ ಡಾಕ್ಟ್ರು ,ಅವರಪ್ಪ ಮನುಷ್ಯರ ಡಾಕ್ಟ್ರು ಫ್ರೆಂಡ್ಸ್ ,ಅವರಮ್ಮ ನಮ್ಮಮ್ಮ ಇಬ್ರೂ ದೇವಸ್ಥಾನ ಸುತ್ತಿಬರೋದಕ್ಕೆ ಒಳ್ಳೆಯ ಫ್ರೆಂಡ್ಸ್ . ನಾ ಕಾಲೇಜ್ ಗೆ ಬಸ್ನಲ್ಲಿ ಹೋಗ್ತಾ ,ಬರ್ತಾ ಸಿಗ್ತಿದ್ಲು .ಅಂದ್ರೆ ಆಕೆನೂ ಕೆಲಸದಲ್ಲಿದ್ದವಳು .ಸಹಪ್ರಯಾಣಿಕಳು .ಸದಾ ಭಗವದ್ಗೀತೆ ,ಲಲಿತಾ ಸಹಸ್ರನಾಮ ....ಮತ್ಯಾವುದೋ ಮಂತ್ರಗಳ ಪುಸ್ತಕ ಹಿಡಿದುಕೊಂಡು , ಕೂರೋಕೆ ಜಾಗ ಸಿಗದಿದ್ರೆ ನಿಂತಲ್ಲೇ ಓದುತಿದ್ಲು .ಯಾರೊಡನೆಯೂ ಅನಾವಶ್ಯಕವಾಗಿ ಮಾತಾಡದ ಅವಳು ಆಡಿದರೆ ,ಅವಳು ಓದುವ ಪುಸ್ತಕದ ಬಗ್ಗೆನೇ ಅಷ್ಟೇ . ಒಳ್ಳೆಯ ಹುಡುಗಿ ,ನನ್ನಮ್ಮ ಎಷ್ಟೋ ಸಲ ,ಇಲ್ಲದ ಮಗನ ಬಗ್ಗೆ ಕಣ್ಣೀರು ಹಾಕಿದಾಗ ದೊಡ್ಡವರಿಗೂ ಸಾಂತ್ವನ ಹೇಳಿದಾಕೆ .ಆದರೆ .......
ನಾಗರತ್ನ ನೇಣು ಹಾಕಿಕೊಂಡಳಂತೆ ಎಂದು ವಾರ್ತೆ .ಶಾಕ್ !
ಸತ್ತ ಕಾರಣ ಇನ್ನೂ ಶಾಕ್ !
ಸಹೋದ್ಯೋಗಿ ಒಬ್ಬನನ್ನು ಮೆಚ್ಚಿದ್ದಳು . ಆತ ಹರಿಜನರ ಹುಡುಗ .ಇವಳೋ ಸದಾ ಮಂತ್ರ ಓದುವ ಬ್ರಾಹ್ಮಣರ ಹುಡುಗಿ .ನಿರಾಕರಿಸಿದ .ಇಂತಹ ಹುಡುಗಿಗೆ ತಡೆದುಕೊಳ್ಳಲು ಆಗಲಿಲ್ಲ ,ನೇಣಿಗೆ ಶರಣಾದಳು .
ಮಾಮ ಎಂದು ಕರೆಸಿಕೊಳ್ಳುವ ಆತ ಸೋಮ ಶೇಖರ ,ತುಂಬಾ ಓದಿಕೊಂಡಿದ್ದ .ಒಳ್ಳೆಯ ಬರಹಗಾರ ,ಕವಿ .ಅವನಿಗೆ ವಿಜ್ಞಾನ ,ಜ್ಯೋತಿಷ್ಯ ,ಹಾಡು ........ಏನ್ ಹೇಳೋದು ?ಇಂತಹದ್ದು ಗೊತ್ತಿಲ್ಲ ಅನ್ನೋ ಹಾಗಿಲ್ಲ .ಎಲ್ಲರೂ ಬಯಸುವ ಸ್ನೇಹ ಜೀವಿ .ಆದರೆ ಬದುಕಲ್ಲಿ ಸೋತ .ಬಹುಷಃ ಅವನು ಪ್ರೀತಿಸಿದ ಹುಡುಗಿ ಅವನಿಗೆ ಸಿಗಲಿಲ್ಲ .ಅವನೂ ನೇಣಿಗೆ ಕೊರಳು ಕೊಟ್ಟ .
ಸಾಮಾನ್ಯವಾಗಿ ನಾನು ಸಾವಿಗೆ ಹೋಗುವವಳಲ್ಲ .ಆತ್ಮೀಯರು ,ಪರಿಚಿತರು ನಮ್ಮೊಡನೆ ಇಲ್ಲಾ ಎಂದುಕೊಳ್ಳುವುದು ಕಷ್ಟ .ಆದರೆ ಹೋಗಿದ್ದೆ .
ನಾನು ಓದಿರುವವರು -ಬುದ್ದಿವಂತರು ಅಂದುಕೊಂಡಿದ್ದೆ .ಇವರುಗಳ ವರ್ತನೆಯೂ ಹಾಗಿತ್ತು ,ಆದರೆ ತಮ್ಮ ಜೀವವನ್ನು ತಾವೇ ಕೊನೆಗಾಣಿಸಿಕೊಂಡ ಇವರ ಬಗ್ಗೆ ಏನು ಹೇಳೋದು ?
ಏನ್ ಓದಿದರೇನು ?
ಒಂದು ಕೆಟ್ಟ ಘಳಿಗೆ ಆಲ್ವಾ ?
ನಾನೂ ಅನಾರೋಗ್ಯದಿಂದಾ ಮಲಗಿದಲ್ಲೇ ಮಲಗಿದ್ದಾಗ ---
ನಾನು ನಿರುಪಯೋಗಿ ,ನನ್ನಿಂದಾ ದುಡ್ಡು ಖರ್ಚು ......ಎಂದೆಲ್ಲಾ ನೊಂದು ಸಾಯುವ ಮನಸ್ಸು ಮಾಡಿದ್ದೆ .ದೇಹ ,ಮನಸ್ಸು ಎರಡೂ ಹಾಳಾಗಿದ್ದ ಯಾತನೆ .ನೋವುನ್ದವರಿಗೆ ಮಾತ್ರಾ ಬೇರೆಯವರ ನೋವು ಅರಿವಾಗುತ್ತೆ ,ಮರಗುತ್ತಾರೆ ಅಂತಾರೆ .ನನ್ನ ಬಳಿ ಯಾರಾದರೂ ಕಷ್ಟ ಹೇಳಿಕೊಂಡರೆ ---
ಅದನ್ನೆಲ್ಲಾ ನಾನು ಅನುಭವಿಸಿದ್ದೇನೆ ಬಿಡಿ ಅಂತಾ ನಕ್ಕು ಬಿಡ್ತೇನೆ .
ಇಂದು -----
ಮುದ್ದು ಮುದ್ದು ಮಕ್ಕಳು 'ಅಮ್ಮಾ ನೀನು ನಮಗೆ ಬೇಕು ' ಎನ್ನುವಾಗ ,
ನೀ ನಗು ನಗುತ್ತಾ ಓಡಾಡಿಕೊಂಡಿರು ಸಾಕು ಎಂದು, ನಾ ಬಯಸಿದ್ದನೆಲ್ಲಾ ನನ್ಮುಂದೆ ಸುರಿಯುವ ಗಂಡ ಇರುವಾಗ ,
ಸುಧಾ ನೀವು ಸತ್ತು ಬದುಕಿದ್ದೀರಿ ,ಚೆನ್ನಾಗಿರಿ .ನಿಮಗಿಷ್ಟ ಬಂದ ಹಾಗೇ .....ಎನ್ನುವ ಸ್ನೇಹ ವೃಂದ ,
ಅಬ್ಭಾ ನಮ್ ಸುಧಾ ಈಗೆಷ್ಟು ನಗ್ತಾಳೆ ! ಹೀಗೆ ನೋಡ್ತೀವಾ ಅನ್ಕೊಂಡಿದ್ವಿ ಎನ್ನುವ ನನ್ನ ಬಂಧುಗಳ ಬೆಟ್ಟಿಯಾದಾಗ ,
ನಾನು ಹೀಗೆ ಬದಲಾದೆನಾ !!!!!
ಇನ್ನೇನು ಕೆಲವೇ ದಿವಸ ನನ್ನ ಜನುಮ ದಿನ .ನಾನು ಬದುಕಿದ್ದೇನೆ ಇಷ್ಟು ದಿನ ಎಂದುಕೊಳ್ಳುವ ಸಂಭ್ರಮ .
ಸಾವಿನ ಸಮೀಪ ಹೋದವಳಿಗೆ ಬದುಕಿನ ಮಹತ್ವ ತಿಳಿದಿದೆ .
ನಿಮಗೆ ಎಂದಾದರೂ ,ತನ್ನನ್ನು ತಾನು ಕೊನೆಗೊಳಿಸುವ ನಿರ್ಧಾರ ಏನಾದರೂ ಬಂದಿದ್ದರೆ ನನ್ನನೊಮ್ಮೆ ನೋಡಿ ಫ್ರೆಂಡ್ಸ್ .
ಇಂದು ಇದ್ದ ಕೆಟ್ಟ ಘಳಿಗೆ ಮುಂದೆಯೂ ಇರೋಲ್ಲ .
ನಾಗರತ್ನ ನೇಣು ಹಾಕಿಕೊಂಡಳಂತೆ ಎಂದು ವಾರ್ತೆ .ಶಾಕ್ !
ಸತ್ತ ಕಾರಣ ಇನ್ನೂ ಶಾಕ್ !
ಸಹೋದ್ಯೋಗಿ ಒಬ್ಬನನ್ನು ಮೆಚ್ಚಿದ್ದಳು . ಆತ ಹರಿಜನರ ಹುಡುಗ .ಇವಳೋ ಸದಾ ಮಂತ್ರ ಓದುವ ಬ್ರಾಹ್ಮಣರ ಹುಡುಗಿ .ನಿರಾಕರಿಸಿದ .ಇಂತಹ ಹುಡುಗಿಗೆ ತಡೆದುಕೊಳ್ಳಲು ಆಗಲಿಲ್ಲ ,ನೇಣಿಗೆ ಶರಣಾದಳು .
ಮಾಮ ಎಂದು ಕರೆಸಿಕೊಳ್ಳುವ ಆತ ಸೋಮ ಶೇಖರ ,ತುಂಬಾ ಓದಿಕೊಂಡಿದ್ದ .ಒಳ್ಳೆಯ ಬರಹಗಾರ ,ಕವಿ .ಅವನಿಗೆ ವಿಜ್ಞಾನ ,ಜ್ಯೋತಿಷ್ಯ ,ಹಾಡು ........ಏನ್ ಹೇಳೋದು ?ಇಂತಹದ್ದು ಗೊತ್ತಿಲ್ಲ ಅನ್ನೋ ಹಾಗಿಲ್ಲ .ಎಲ್ಲರೂ ಬಯಸುವ ಸ್ನೇಹ ಜೀವಿ .ಆದರೆ ಬದುಕಲ್ಲಿ ಸೋತ .ಬಹುಷಃ ಅವನು ಪ್ರೀತಿಸಿದ ಹುಡುಗಿ ಅವನಿಗೆ ಸಿಗಲಿಲ್ಲ .ಅವನೂ ನೇಣಿಗೆ ಕೊರಳು ಕೊಟ್ಟ .
ಸಾಮಾನ್ಯವಾಗಿ ನಾನು ಸಾವಿಗೆ ಹೋಗುವವಳಲ್ಲ .ಆತ್ಮೀಯರು ,ಪರಿಚಿತರು ನಮ್ಮೊಡನೆ ಇಲ್ಲಾ ಎಂದುಕೊಳ್ಳುವುದು ಕಷ್ಟ .ಆದರೆ ಹೋಗಿದ್ದೆ .
ನಾನು ಓದಿರುವವರು -ಬುದ್ದಿವಂತರು ಅಂದುಕೊಂಡಿದ್ದೆ .ಇವರುಗಳ ವರ್ತನೆಯೂ ಹಾಗಿತ್ತು ,ಆದರೆ ತಮ್ಮ ಜೀವವನ್ನು ತಾವೇ ಕೊನೆಗಾಣಿಸಿಕೊಂಡ ಇವರ ಬಗ್ಗೆ ಏನು ಹೇಳೋದು ?
ಏನ್ ಓದಿದರೇನು ?
ಒಂದು ಕೆಟ್ಟ ಘಳಿಗೆ ಆಲ್ವಾ ?
ನಾನೂ ಅನಾರೋಗ್ಯದಿಂದಾ ಮಲಗಿದಲ್ಲೇ ಮಲಗಿದ್ದಾಗ ---
ನಾನು ನಿರುಪಯೋಗಿ ,ನನ್ನಿಂದಾ ದುಡ್ಡು ಖರ್ಚು ......ಎಂದೆಲ್ಲಾ ನೊಂದು ಸಾಯುವ ಮನಸ್ಸು ಮಾಡಿದ್ದೆ .ದೇಹ ,ಮನಸ್ಸು ಎರಡೂ ಹಾಳಾಗಿದ್ದ ಯಾತನೆ .ನೋವುನ್ದವರಿಗೆ ಮಾತ್ರಾ ಬೇರೆಯವರ ನೋವು ಅರಿವಾಗುತ್ತೆ ,ಮರಗುತ್ತಾರೆ ಅಂತಾರೆ .ನನ್ನ ಬಳಿ ಯಾರಾದರೂ ಕಷ್ಟ ಹೇಳಿಕೊಂಡರೆ ---
ಅದನ್ನೆಲ್ಲಾ ನಾನು ಅನುಭವಿಸಿದ್ದೇನೆ ಬಿಡಿ ಅಂತಾ ನಕ್ಕು ಬಿಡ್ತೇನೆ .
ಇಂದು -----
ಮುದ್ದು ಮುದ್ದು ಮಕ್ಕಳು 'ಅಮ್ಮಾ ನೀನು ನಮಗೆ ಬೇಕು ' ಎನ್ನುವಾಗ ,
ನೀ ನಗು ನಗುತ್ತಾ ಓಡಾಡಿಕೊಂಡಿರು ಸಾಕು ಎಂದು, ನಾ ಬಯಸಿದ್ದನೆಲ್ಲಾ ನನ್ಮುಂದೆ ಸುರಿಯುವ ಗಂಡ ಇರುವಾಗ ,
ಸುಧಾ ನೀವು ಸತ್ತು ಬದುಕಿದ್ದೀರಿ ,ಚೆನ್ನಾಗಿರಿ .ನಿಮಗಿಷ್ಟ ಬಂದ ಹಾಗೇ .....ಎನ್ನುವ ಸ್ನೇಹ ವೃಂದ ,
ಅಬ್ಭಾ ನಮ್ ಸುಧಾ ಈಗೆಷ್ಟು ನಗ್ತಾಳೆ ! ಹೀಗೆ ನೋಡ್ತೀವಾ ಅನ್ಕೊಂಡಿದ್ವಿ ಎನ್ನುವ ನನ್ನ ಬಂಧುಗಳ ಬೆಟ್ಟಿಯಾದಾಗ ,
ನಾನು ಹೀಗೆ ಬದಲಾದೆನಾ !!!!!
ಇನ್ನೇನು ಕೆಲವೇ ದಿವಸ ನನ್ನ ಜನುಮ ದಿನ .ನಾನು ಬದುಕಿದ್ದೇನೆ ಇಷ್ಟು ದಿನ ಎಂದುಕೊಳ್ಳುವ ಸಂಭ್ರಮ .
ಸಾವಿನ ಸಮೀಪ ಹೋದವಳಿಗೆ ಬದುಕಿನ ಮಹತ್ವ ತಿಳಿದಿದೆ .
ನಿಮಗೆ ಎಂದಾದರೂ ,ತನ್ನನ್ನು ತಾನು ಕೊನೆಗೊಳಿಸುವ ನಿರ್ಧಾರ ಏನಾದರೂ ಬಂದಿದ್ದರೆ ನನ್ನನೊಮ್ಮೆ ನೋಡಿ ಫ್ರೆಂಡ್ಸ್ .
ಇಂದು ಇದ್ದ ಕೆಟ್ಟ ಘಳಿಗೆ ಮುಂದೆಯೂ ಇರೋಲ್ಲ .
Sunday, 3 February 2013
ಪ್ರತಿಯೊಬ್ಬರಿಗೂ ಅವರದೇ ಆದ ನೋವಿನ ಕಥೆಯಿರುತ್ತೆ .ನಮ್ಮದೇ ಬಹಳಾ ನೋವು ಅಂದುಕೊಂಡು ,ಆಗ ಹಾಗೆಲ್ಲಾ ಆಗಿತ್ತು ಈಗ ಹೀಗಾಗೋಯ್ತು ಎಂದು ಕೊರಗ್ತಾ ವರ್ತಮಾನವನ್ನೂ ಹಾಳುಮಾಡಿಕೊಂಡು ,ಮುಂದೆ ಹೇಗೋ ಎಂದು ಯೋಚಿಸ್ತಾನೇ ಬದುಕುವವರನ್ನು ಕಂಡರೆ ಅಯ್ಯೋ ಅನಿಸುತ್ತೆ . ವಯಸಾಗ್ತಾ ಆಗ್ತಾನಾದರೂ ಆಸೆಗಳಿಗೆ ಕಡಿವಾಣ ಹಾಕಿಕೊಳ್ಳದೇ, ನಿರೀಕ್ಷೆಗಳನ್ನು ಮಾಡದೇ , ಮೋಹಗಳಲ್ಲಿ ಸಿಲುಕದೇ ,ಜವಾಬ್ದಾರಿಗಳನ್ನು ನಿಭಾಯಿಸುತ್ತಾ ನೆಮ್ಮದಿಯಿಂದಾ ಬದುಕಬಾರದೇ ? ಭೂತಗಳ ನೆನಪುಗಳಲ್ಲಿ ವರ್ತಮಾನ ಹಾಳುಗೆಡವದೆ ,ಇರೋದನ್ನು ಒಪ್ಪಿಕೊಳ್ಳುವುದನ್ನು ಮೊದಲು ಕಲಿಯಬೇಕು .ನಮ್ಮ ಕೈನಲ್ಲೇನಿದೆ ? ಏನೇನ್ ಆಗಬೇಕೋ ಅದೇ ಆಗೋದು .ಎಲ್ಲವೂ ಪೂರ್ವನಿಯೋಜಿತ .ಬೊಮ್ಮನಾಟ ಅಂದುಕೊಂಡರೆ ?
ನಿರಾಳ .
ನಿರಾಳ .
Saturday, 2 February 2013
ನಂಬಿಕೆಗಳು ----
ನನ್ನ ದೇಹಕ್ಕೆ ಒಂದು ಚೂರು ನೋವಾದರೂ ತಡೆದುಕೊಳ್ಳುವುದಕ್ಕೆ ಆಗೋಲ್ಲ .ತಕ್ಷಣ ಪರಿಹಾರ ಹುಡುಕ್ತೇನೆ .ಇನ್ನು ಮನಸ್ಸಿಗೆ ? ಹಂಗೆನಾಗಲ್ಲ ,ದೇವರ ಹತ್ರ ಮಾತಾಡ್ತಾ ಇರ್ತೆನಲ್ವಾ ? ಆದರೆ ......
ನಮ್ಮ ಕಡೆ ದೇವರು ,ದೇವಸ್ಥಾನಗಳಿವೆ .ನಮ್ಮೂರ ಕಡೆ ಜನ ಹೇಗೆ ಅಂದ್ರೆ ,ಏನೇ ಒಳ್ಳೆಯ ಕೆಲಸ ಮಾಡಲೀ ,ದೇವರ ಅಪ್ಪಣೆ ಕೇಳದೇ ಮಾಡೋದಿಲ್ಲ .ಏನೇ ಸಮಸ್ಯೆಗಳಾದ್ರೂ ದೇವರೇ ಪರಿಹಾರ ಕೊಡಬೇಕು .ಅಂದ್ರೆ ಹುಷಾರಿಲ್ಲ ಅಂತಾದ್ರೆ ,ಯಾಕೆ ?ಏನು ಮಾಡಬೇಕು ?ನೀನೇ ನೋಡ್ಕೊತೀಯಾ ಅತ್ವಾ ಆಸ್ಪತ್ರೆ ಮದ್ದು ಮಾಡಬೇಕಾ ಅಂತಾ ದೇವರಲ್ಲಿ ಕೇಳಿ ತೀರ್ಮಾನಿಸ್ತಾರೆ . ಕೊನೆಗೆ ,ಹುಶಾರಿಲ್ಲದವರನ್ನು ದೇವಸ್ಥಾನಕ್ಕೆ ಹಾಕಿಬಿಡ್ತಾರೆ .ಹುಶಾರಾದ್ರೆ ದೇವರ ದಯೆ ,ಇಲ್ಲಾಂದ್ರೆ ಆಯಸ್ಸು ಮುಗೀತು ,ದೇವರ ಹತ್ರ ಪ್ರಾಣ ಹೋಯ್ತು ಅಂತಾ .
ಇನ್ನು ಮದುವೆ ಮಾಡಬೇಕಾ ?ದೇವರು ಅಪ್ಪಣೆ ಕೊಡಬೇಕು .ಹೇಗೆ ಅಂತೀರಾ ? ದೇವರಿಗೆ ಪೂಜಿಸಿ ,ಹೂವು ಬಲಕ್ಕೆ ಬೀಳುತ್ತೋ ,ಎಡಕ್ಕೆ ಬೀಳುತ್ತೋ ಕಾಯ್ಕೊಂಡು ಕೂರೋದು .ಅದರಿಂದಾ ತೀರ್ಮಾನಿಸುವುದು .ಇನ್ನು ದೇವರ ಪಲ್ಲಕ್ಕಿ ಹೊತ್ತು ತೂಗಾಡುವಾಗ ಅದರ ತುದಿಯಿಂದಾ ಗೋಡೆ ಮೇಲೆ ಗೀಚಿರುತ್ತಲ್ಲಾ ಅದನ್ನು ಓದಿ ಪರಿಹಾರ ತಿಳಿಯುವುದು .
ಹಾಗೇ ಅಪ್ಪಣೆ ಕೇಳುವ ದೇವಸ್ಥಾನ ಅಂದರೆ ನಾ ನೋಡಿದ್ದು -ನಮ್ಮೂರ ಕಲ್ಲಮರಡಿ ಅಜ್ಜಯ್ಯನಾ ಮಠ .ಅಲ್ಲಿ ಮೂರು ಹೊತ್ತು ಪೂಜೆ .ತುಂಬೆ ಹೂ ಮುಡಿಸಿ ದೇವರ ಹತ್ರ ಅಪ್ಪಣೆ ಕೇಳೋಕೆ ಜನ ಕುಳಿತಿರ್ತಾರೆ .
ಪುಷ್ಪಗಿರಿ ಮಲ್ಲಿಕಾರ್ಜುನ -ಹಳೇಬೀಡು .
ಯಗಟಿ ಮಲ್ಲಿಕಾರ್ಜುನ -ಯಗಟಿ ,ಕಡೂರು ಬಳಿ ಇದೆ.
ಪ್ರತಿಯೊಂದು ನಿರ್ಧಾರಗಳಿಗೆ ,ಸಮಸ್ಯೆಗಳಿಗೆ ದೇವರು .
ಕಷ್ಟ ಬಂದಾಗ ,ಕುಲದೇವರನ್ನೋ ,ಗ್ರಾಮದೇವತೆಯನ್ನೋ ಮನೆಗೆ ಕರೆದುಕೊಂಡು ಬಂದು ಒಂದಷ್ಟು ದಿನ ಪೂಜಿಸಿ ಕಳಿಸುವುದುಂಟು .
ಈ ತರಹದ ನಮ್ಬಿಕೆಗಳನ್ನು ನಾನು ತೆಗಳುತ್ತಿಲ್ಲ .ನಮ್ಮ ಬದುಕಲ್ಲಿ ದೇವರು ಜೊತೆ ಜೊತೆಯಲ್ಲಿ ಆಲ್ವಾ ?
ನಾ ದೇವರಲ್ಲಿ ಬೇಡೋದು ಏನಿಲ್ಲ ಅಂತನೋ ಏನೋ ದೇವಸ್ಥಾನಕ್ಕೆ ಹೋಗೋದು ಕಡಿಮೆ . ಹಾಗೇ ನಾನೊಮ್ಮೆ ಹಳೇಬೀಡು ಸಮೀಪದ 'ಪುಷ್ಪಗಿರಿ' ಗೆ ಹೋದಾಗ ,ನನಗೆ ಕುತೂಹಲ ,ಅಲ್ಲಿ ಚೆನ್ನಮಲ್ಲಿಕಾರ್ಜುನನನ್ನು ನಾನೂ ಅಪ್ಪಣೆ ಕೇಳಿದ್ದೆ . ನನ್ನ ಮೆಚ್ಚಿದವನ ಜೊತೆಗೇ ಈ ಫೆಬ್ರವರಿಲಿ ಮದ್ವೆ ಆಗುತ್ತಾ ಅಂತ :-)ಬಲಕ್ಕೆ ಪ್ರಸಾದವಾಗಿ ಖುಷಿಯಾಗಿಬಿಟ್ಟಿತ್ತು .ಅದು ನಿಜವೂ ಆಯ್ತು .ಇದೆಲ್ಲಾ ಒಂಥರಾ ಹೇಳ್ಕೊಬೇಕು ಅನಿಸ್ತು ಹೇಳಿದೆ .
ನೀವು ನಂಬುತ್ತೀರಾ ?
ನನ್ನ ದೇಹಕ್ಕೆ ಒಂದು ಚೂರು ನೋವಾದರೂ ತಡೆದುಕೊಳ್ಳುವುದಕ್ಕೆ ಆಗೋಲ್ಲ .ತಕ್ಷಣ ಪರಿಹಾರ ಹುಡುಕ್ತೇನೆ .ಇನ್ನು ಮನಸ್ಸಿಗೆ ? ಹಂಗೆನಾಗಲ್ಲ ,ದೇವರ ಹತ್ರ ಮಾತಾಡ್ತಾ ಇರ್ತೆನಲ್ವಾ ? ಆದರೆ ......
ನಮ್ಮ ಕಡೆ ದೇವರು ,ದೇವಸ್ಥಾನಗಳಿವೆ .ನಮ್ಮೂರ ಕಡೆ ಜನ ಹೇಗೆ ಅಂದ್ರೆ ,ಏನೇ ಒಳ್ಳೆಯ ಕೆಲಸ ಮಾಡಲೀ ,ದೇವರ ಅಪ್ಪಣೆ ಕೇಳದೇ ಮಾಡೋದಿಲ್ಲ .ಏನೇ ಸಮಸ್ಯೆಗಳಾದ್ರೂ ದೇವರೇ ಪರಿಹಾರ ಕೊಡಬೇಕು .ಅಂದ್ರೆ ಹುಷಾರಿಲ್ಲ ಅಂತಾದ್ರೆ ,ಯಾಕೆ ?ಏನು ಮಾಡಬೇಕು ?ನೀನೇ ನೋಡ್ಕೊತೀಯಾ ಅತ್ವಾ ಆಸ್ಪತ್ರೆ ಮದ್ದು ಮಾಡಬೇಕಾ ಅಂತಾ ದೇವರಲ್ಲಿ ಕೇಳಿ ತೀರ್ಮಾನಿಸ್ತಾರೆ . ಕೊನೆಗೆ ,ಹುಶಾರಿಲ್ಲದವರನ್ನು ದೇವಸ್ಥಾನಕ್ಕೆ ಹಾಕಿಬಿಡ್ತಾರೆ .ಹುಶಾರಾದ್ರೆ ದೇವರ ದಯೆ ,ಇಲ್ಲಾಂದ್ರೆ ಆಯಸ್ಸು ಮುಗೀತು ,ದೇವರ ಹತ್ರ ಪ್ರಾಣ ಹೋಯ್ತು ಅಂತಾ .
ಇನ್ನು ಮದುವೆ ಮಾಡಬೇಕಾ ?ದೇವರು ಅಪ್ಪಣೆ ಕೊಡಬೇಕು .ಹೇಗೆ ಅಂತೀರಾ ? ದೇವರಿಗೆ ಪೂಜಿಸಿ ,ಹೂವು ಬಲಕ್ಕೆ ಬೀಳುತ್ತೋ ,ಎಡಕ್ಕೆ ಬೀಳುತ್ತೋ ಕಾಯ್ಕೊಂಡು ಕೂರೋದು .ಅದರಿಂದಾ ತೀರ್ಮಾನಿಸುವುದು .ಇನ್ನು ದೇವರ ಪಲ್ಲಕ್ಕಿ ಹೊತ್ತು ತೂಗಾಡುವಾಗ ಅದರ ತುದಿಯಿಂದಾ ಗೋಡೆ ಮೇಲೆ ಗೀಚಿರುತ್ತಲ್ಲಾ ಅದನ್ನು ಓದಿ ಪರಿಹಾರ ತಿಳಿಯುವುದು .
ಹಾಗೇ ಅಪ್ಪಣೆ ಕೇಳುವ ದೇವಸ್ಥಾನ ಅಂದರೆ ನಾ ನೋಡಿದ್ದು -ನಮ್ಮೂರ ಕಲ್ಲಮರಡಿ ಅಜ್ಜಯ್ಯನಾ ಮಠ .ಅಲ್ಲಿ ಮೂರು ಹೊತ್ತು ಪೂಜೆ .ತುಂಬೆ ಹೂ ಮುಡಿಸಿ ದೇವರ ಹತ್ರ ಅಪ್ಪಣೆ ಕೇಳೋಕೆ ಜನ ಕುಳಿತಿರ್ತಾರೆ .
ಪುಷ್ಪಗಿರಿ ಮಲ್ಲಿಕಾರ್ಜುನ -ಹಳೇಬೀಡು .
ಯಗಟಿ ಮಲ್ಲಿಕಾರ್ಜುನ -ಯಗಟಿ ,ಕಡೂರು ಬಳಿ ಇದೆ.
ಪ್ರತಿಯೊಂದು ನಿರ್ಧಾರಗಳಿಗೆ ,ಸಮಸ್ಯೆಗಳಿಗೆ ದೇವರು .
ಕಷ್ಟ ಬಂದಾಗ ,ಕುಲದೇವರನ್ನೋ ,ಗ್ರಾಮದೇವತೆಯನ್ನೋ ಮನೆಗೆ ಕರೆದುಕೊಂಡು ಬಂದು ಒಂದಷ್ಟು ದಿನ ಪೂಜಿಸಿ ಕಳಿಸುವುದುಂಟು .
ಈ ತರಹದ ನಮ್ಬಿಕೆಗಳನ್ನು ನಾನು ತೆಗಳುತ್ತಿಲ್ಲ .ನಮ್ಮ ಬದುಕಲ್ಲಿ ದೇವರು ಜೊತೆ ಜೊತೆಯಲ್ಲಿ ಆಲ್ವಾ ?
ನಾ ದೇವರಲ್ಲಿ ಬೇಡೋದು ಏನಿಲ್ಲ ಅಂತನೋ ಏನೋ ದೇವಸ್ಥಾನಕ್ಕೆ ಹೋಗೋದು ಕಡಿಮೆ . ಹಾಗೇ ನಾನೊಮ್ಮೆ ಹಳೇಬೀಡು ಸಮೀಪದ 'ಪುಷ್ಪಗಿರಿ' ಗೆ ಹೋದಾಗ ,ನನಗೆ ಕುತೂಹಲ ,ಅಲ್ಲಿ ಚೆನ್ನಮಲ್ಲಿಕಾರ್ಜುನನನ್ನು ನಾನೂ ಅಪ್ಪಣೆ ಕೇಳಿದ್ದೆ . ನನ್ನ ಮೆಚ್ಚಿದವನ ಜೊತೆಗೇ ಈ ಫೆಬ್ರವರಿಲಿ ಮದ್ವೆ ಆಗುತ್ತಾ ಅಂತ :-)ಬಲಕ್ಕೆ ಪ್ರಸಾದವಾಗಿ ಖುಷಿಯಾಗಿಬಿಟ್ಟಿತ್ತು .ಅದು ನಿಜವೂ ಆಯ್ತು .ಇದೆಲ್ಲಾ ಒಂಥರಾ ಹೇಳ್ಕೊಬೇಕು ಅನಿಸ್ತು ಹೇಳಿದೆ .
ನೀವು ನಂಬುತ್ತೀರಾ ?
Subscribe to:
Posts (Atom)