Friday, 8 March 2013

ಆಧ್ಯಾತ್ಮ ---

ಆಧ್ಯಾತ್ಮ ಮನುಷ್ಯನನ್ನು ಸರ್ವಶಕ್ತಭಲಾಡ್ಯನನ್ನಾಗಿ ಮಾಡುತ್ತದೆ,,,,

ಏನಿದು ಸುಜಾತಾ ಹೀಗೆ ಹೇಳ್ತಿದಾಳೆ ! ಅನ್ಕೋಬೇಡಿ. ನನ್ನ ಅನುಭವವನ್ನು ಮಾತ್ರಾ ನಾ ಹೇಳೋದು. ವಯಸ್ಸಾಯ್ತು ಅಂತಲ್ಲಾ. ನಾಗರ ಹಾವು ತನ್ನ ಪೊರೆಯನ್ನು ಕಳಚುವಂತೆ ನಾವು ಕೂಡ ದಿನದಿನಕ್ಕೆ ನಮ್ಮ ಭಾವನೆಗಳ ಪೊರೆಯನ್ನು ಕಳಚುತ್ತಲೇ ಇರುತ್ತೇವೆ.ಹೊಸ ಹೊಸ ಭಾವನೆ ಹೊಸ ಹೊಸ ಮಾರ್ಗಗಳನ್ನು ಹೊಸ ಹೊಸ ಪಾಠ ವನ್ನು ಕಲಿಯುತ್ತಲೇ ಇರುತ್ತೇವ. ನಮ್ಮ ಮೆದುಳಿಗೆ ದೇಹದಂತೆ ವಯಸ್ಸು ಎನ್ನುವುದು ಇಲ್ಲ.ಅದಕ್ಕೆ ಅದು ಹೊಸದಾಗಿಯೇ ಇರುತ್ತದ. ಅದು ಭಾವನೆಗಳಿಗೆ ಜ್ಞಾನಕ್ಕೆ ಕಲಿಕೆಗೆ ಹೊಸ ಹೊಸ ಆಲೋಚನೆಗಳಿಗೆ ಆವಿಷ್ಕಾರಕ್ಕೆ ಹುಡುಕುವಿಕೆಗೆ ಎಂದೆಂದೂ ತೆರೆದುಕೊಳ್ಳುತ್ತಲೇ ಇರುತ್ತದೆ.

Saturday, 2 March 2013

ನನ್ನನಗಲಿ ಮಥುರೆಗೆ ಹೊರಟು ನಿಂತೆಯಲ್ಲಾ ....
ನಿನ್ನಿರವು ಇರದ ಇಲ್ಲಿ ನಾ ಹೇಗಿರಲೀ ?
ಕೇಳಿಸದೆ ನಿನ್ನ ಮುರಳೀ ....
ವಿರಹ ಯಮುನೆಯಂತೆ ಹರಿದೀತು ಕೃಷ್ಣಾ 
ತೊರೆದು ಹೋಗದಿರು ನನ್ನ ....
ಸದಾ ನಿನ್ನೊಡನೆಯೇ ನಾನಿರುವಾಸೆ ಕೃಷ್ಣಾ ... 
ನಿನ್ನೆದೆಯಲ್ಲಿ ಭದ್ರವಾಗಿರಿಸೋ .......
ಗೆಳೆಯ

ನನ್ನ ಪ್ರೀತಿಯ ಮುದ್ದು ಗೆಳೆಯ 
ಅದೆಷ್ಟು ಕ್ರೂರ ನಿನ್ನ ವಿದಾಯ !
ನೀ ಬಂದ ಸಂತಸಕೂ ಮಿಗಿಲಾಗಿ 
ಬಂದಲ್ಲಿಗೇ ಮರಳುತ್ತೀಯೆಂಬ ಭಾವನೆ .
ನಾ ತಾಳಲಾರೆ ನೀ ದೂರ ಹೋದಾಗ 
ನಿನ್ನ ಅಗಲಿಕೆಯ ವೇದನೆ .
ಅಳತೆಗೂ ಸಿಗದ ಅಗಾಧ ಪ್ರೀತಿ 
ಮಾತಿಗೆ ನಿಲುಕದ ಮಧುರ ಅನುಭವ .
ಹೇಗೆ ಹೇಳಲಿ ಗೆಳೆಯ ವಿರಹವ 
ಊಹೆಗೂ ಸಿಲುಕದ ನನ್ನ ನೋವ .
ನೀ ಮರೆಯಾಗುವಾಗಿನ ನೋಟ
ನನ್ನ ಕಂಬನಿಯಲಿ ಮಸುಕಾಯ್ತು .
ಸದಾ ನಿನ್ನೊಂದಿಗಿರುವ ಬಯಕೆ
ನಲ್ಲ,ನಿನ್ನೊಲವೇ ನನ್ನುಸಿರಾಯ್ತು .
ತೋಳಲಿ ಹುದುಗಿದಾಗಿನ ಮನದ ಪ್ರಶಾಂತತೆ
ಕಂಗಳಲಿ ತುಂಬಿದ ಪ್ರೀತಿ ಸರೋವರ
ಅಪ್ಪಿ ಚುಂಬಿಸಿದಾಗಿನ ಸವಿನೆನಪು
ಹೇಗೆ ಸರಿದೀತು ನನ್ನ ಹೃದಯದಿಂದ ?
ನಾ ನಿನ್ನೊಂದಿಗಿನ ಕಳೆದ ಕ್ಷಣಗಳನು
ಹುಡುಕುತ್ತಿರುವೆ ಕಣ್ಣೀರ ಹನಿಗಳಲಿ .
ಮತ್ತೆಂದು ಬರುವೆ ನೀನೊಂದಾಗಲು
ಕಾದಿರುವೆ ನಿನ್ನ ತೊಳ್ತೆಕ್ಕೆ ಸೇರಲು .
deepavali --

ಬರುತ್ತೇನೆಂದ ನನ್ನವ 
ಬರಲಿಲ್ಲ ದೀಪಾವಳಿಗೆ .
ಅವನ ಬಿಟ್ಟು ನಾನು 
ಸಿಹಿಯ ತಿನ್ನುವುದು ಹೇಗೆ?

ಅವನ ನೆನಪೇ ಕಚಗುಳಿ
ಇಡುತಿತ್ತು ಮನದಿ .
ಹಬ್ಬದಿ ಅವನಿಲ್ಲವೆಂದು 
ನೋವು ಹೃದಯದಿ .

ಪುಟ್ಟ ತಮ್ಮರಿಗೋ
ಪಟಾಕಿಯ ಸಂಭ್ರಮ ಬೆರಗು!
ನನಗೋ ನನ್ನವನಿಲ್ಲದ
ಬೇಸರ ,ಕೊರಗು.

ಸೊಗಸೇ ಇರಲಿಲ್ಲ
ಮುದುಡಿದ್ದ ಮನಸಿಗೆ
ಅಮ್ಮನಿತ್ತ ಹೊಳಿಗೆಯೂ
ಕಹಿಯೆನಿಸಿತ್ತು ಬಾಯಿಗೆ.

ಮನೆ ಮುಂದೆ ರಾತ್ರಿ
ಬೆಳಗಿದರೆ ಸಾಲು ದೀಪ
ನನ್ನ ಎದೆಗೆ ಮಾತ್ರಾ
ವಿರಹದುರಿ ತಾಪ .

ಯಾಕೆ ಬರಲಿಲ್ಲವೆಂದು
ನಾ ಚಿಂತಿಸುತ್ತಲಿ
ಮುಗಿಸಿಯೇ ಬಿಟ್ಟಿದ್ದೆ
ಅವನಿಲ್ಲದೇ ದೀಪಾವಳಿ .