Thursday, 25 December 2014


ಎಲ್ಲವೂ ಸುಳ್ಳಾದರೂ. ....
ನಿನ್ನ ಇರುವಿಕೆಯ ಮಧುರಾನುಭೂತಿ ನಿಜಾ. ...
ಯಾವುದೂ ಶಾಶ್ವತವಲ್ಲ. ..ಆದರೂ
ಬಯಸುತಿದೆ ನಿನ್ನ, ನನ್ನುಸಿರು ನಿಜಾ...
ಹಿಂತಿರುಗಿ ನೋಡಿದಾಗ ..ನನ್ನ ಹೆಜ್ಜೆಗಳೊಡನೆ ನಿನ್ನದೂ ಗುರುತು! !!!
 ಜೊತೆಯಲ್ಲೇ ನಡೆದರು ಗಮನಿಸಿರಲಿಲ್ಲ !!!
ಅದು ಬದುಕಿದ್ದೆ,  ನೀ ಸಿಕ್ಕ ಮೇಲೆ ಸಂತೋಷದಿಂದ ಬದುಕುತಿದ್ದೇನೆ.
ಪ್ರೀತಿಯೋ. ...ಪ್ರೇಮವೋ. ..ಸ್ನೇಹವೋ. ...ಎಲ್ಲವೂ....
ಹುಡುಕಾಟದ ಹಂಬಲವಿಲ್ಲ.

ನನ್ನ ಪದ್ಯಗಳು,
ಬರಿಯ ಸುಂದರ ಪದಗಳ ಜೋಡಣೆಗಳಲ್ಲ
ನನ್ನ ಎದೆಯೊಳಗೆ ನಿನಗಾಗಿ ಬಚ್ಚಿಟ್ಟ ಪಿಸುನುಡಿಗಳು
ಅದರಲ್ಲಿನ ಗಾಢ ಒಲವ ಓದದೇ, ಅರ್ಥೈಸದೇ, ಅನುಭವಿಸದೇ ...
ದೂರ ಇರುವ ಮೂಢ ಅನಕ್ಷರಸ್ತ ನೀನು .

ಇರಲಿ ಬಿಡು ಪ್ರೀತಿಯಾಳವ ತೋರುವ ವಿರಹದ ಅನುಭವ 
ದುಪ್ಪಟ್ಟು ಮುದ್ದಿಸುವೆಯಲ್ಲಾ ಬಂದಾಗ ನೀ ಸನಿಹ 




ಎದೆಯ ನೋವುಗಳು ಕಣ್ಣೀರಾದಾಗ , ಬೆರಳ ತುದಿ ಹಿಡಿದವನು ಕಾರಣವ ಕೇಳದೇ .. .ತಬ್ಬಿ ನಾನಿದ್ದೇನೆ ಎನಬಾರದೇ. ..... ನನ್ನ ನಗುವಿಗೆ ನೀಡು ನಿನ್ನ ಸ್ನೇಹದ ತಂಪನು ಜೀವನದಲ್ಲಿ ಒಂದರ ಮುಕ್ತಾಯವೇ. ..ಮತ್ತೊಂದರ ಆರಂಭ ತಿಳಿಯದೇ
ಕಾಯುವ ಸುಖ ....

ಕಾಯುವುದು ಕಷ್ಟ
ಆದರೂ .....
ನಿನಗಾಗಿ ನಾನು ಕಾಯುವುದು ಇಷ್ಟ
ಕಾದಿದ್ದೇನೆ ನಾನು ....
ನೀನು ಸಿಗಲೆಂದು
 ನೀನು ನನ್ನವನೇ ಆಗಲೆಂದು
ಕಾದಿದ್ದೇನೆ ಮಧುರ  ನೆನಪುಗಳೊಂದಿಗೆ
ನಿನಗಾಗೇ  ದಿನವೂ , ಅನು  ಕ್ಷಣವೂ.
ಕಾದಿದ್ದೇನೆ ನಿನ್ನ ಕಿರುನಗೆಗಾಗಿ
ಅದ(ಧ)ರ  ಜೇನಿಗಾಗಿ
ಕಾದಿದ್ದೇನೆ ನಿನ್ನ ಕಣ್ಣ  ಬೆಳಕಿಗಾಗಿ
ನನ್ನ ಬದುಕಿಗಾಗಿ
ಕಾದಿದ್ದೇನೆ ನಿನ್ನ  ಮಾತಿಗಾಗಿ
ಅದರಲ್ಲಿ ಒಲವಿಗಾಗಿ
ಕಾದಿದ್ದೇನೆ ನಿನ್ನ ಅಪ್ಪುಗೆಗಾಗಿ
ನನ್ನೇ  ನಾ  ಒಪ್ಪಿಸಿಕೊಳ್ಳುವುದಕಾಗಿ
ಕಾದಿದ್ದೇನೆ ನಮ್ಮ ಮಿಲನಕಾಗಿ
ನಿನ್ನೊಳು ನಾನೊಂದಾಗುವುದಕಾಗಿ.
ಕಾಯುವಿಕೆಗಿಂತ ಮಿಗಿಲಾದ ತಪವಿಲ್ಲ
ಒಲಿಯದಿಹೆಯಾ  ನನಗಾಗಿ ?


Sunday, 21 December 2014

ನನಗರಿವಿದೆ ...
ನಾ ನಿನ್ನ ಪ್ರೀತಿಸಿದರೇ ....
ರಾಧೆಯ ವಿರಹವನೇ ಅಪ್ಪಿಕೊಳ್ಳಬೇಕೆಂದು
ಆದರೇ......
ಹೇಳು 
ಪ್ರೀತಿಸುವ ಸುಖದಿಂದ
ನಾನೇಕೆ ವಂಚಿತಳಾಗಲೀ?
  • ಯಾಕೆ ಬಂದೇ ಒಬ್ಬನೇ ? ಏನ್ ಮಾಡ್ತೀ ? ನಿಂಗೆ ಬೋರ್ ಆಗೋಲ್ವಾ ? ಬೆಳ್ಳಗೆ ಚೆನಾಗಿದ್ದೀಯಾ ? ಆಚೆ ಹೋಗು, ಫ್ರೆಂಡ್ಸ್ ಸಿಗ್ತಾರೆ ........ ಹಿತ್ತಲಲ್ಲಿ ವಾಷಿಂಗ್ ಮೆಶೀನ್ ಗೆ ಬಟ್ಟೆ ತುಂಬಿಸುತ್ತಾ, ಮಾತಾಡ್ತಾ ಇದ್ದೆ. ಯಾರ ಜೊತೆ ಮಾತಾಡ್ತೀ ಅಮ್ಮಾ ಅಂದಳು ಮಗಳು. ಯಾರಿಲ್ವೆ ಮಗಳೇ ಇಲ್ಲೊಂದು ಹಲ್ಲಿ ಬಂದು ಸೇರ್ಕೊಂಡಿದೆ ಅದರ ಜೊತೆ ಅಂದೇ. ಥೂ ನಿನಗೇನಾಗಿದ? ದೇವರ ಮನೇಲಿ ಕೂತು, ಅದರ ಮುಂದೆ ಮಾತಾಡ್ತಿರ್ತೀಯ ಓಕೆ, ಭಗವಾನರ ಫೋಟೋ ಜೊತೆ, ಹಸು, ಬೀದಿನಾಯಿಮರಿ, ಬೆಕ್ಕಿನಮರಿ, ಅವರೇಕಾಳು ಹುಳ, ಸೊಳ್ಳೆ, ಹೂವ, ಪಾರಿವಾಳ ಅಮ್ಮಾ ಅವುಗಳ ಜೊತೆಯೆಲ್ಲಾ ಮಾತಾಡ್ತೀಯಲ್ಲಾ ? ನಿದ್ರೆಯಲ್ಲಿ ಸಹಾ ಮಾತಾಡ್ತೀಯ ? ನಕ್ಕಳು. ಹೌದು, ಪಕ್ಕದ ಸೈಟ್ ನಲ್ಲಿ ಹುಲ್ಲು ಬೆಳದಿದೆ ಅಂತಾ, ಹಸು ಕಟ್ಟಿರ್ತಾರೆ. ಅದು ಬಾಯಾರಿಕೆಗೆ ಅಂಬಾ ಎನ್ನುವುದುಂಟು. ಇರೋ ಬಂದೇ ಬೂಚಿ ಎಂದು ನೀರಿನ ಬಕೆಟ್ ತೆಗೆದುಕೊಂಡುಹೋದ್ರೆ , ಅಮ್ಮಾ ನಂಗೆ ಬೂಚಿ ಭಯಾ ಮನೆಗೆ ಕರೀಬೇಡಾ ಪ್ಲೀಸ್ ಅಂತಾನೆ ಮಗರಾಯ ಇನ್ನು ವಾಕಿಂಗ್ ಹೋದ್ರೆ ಬೀದಿನಾಯಿಗಳು ಫ್ರೆಂಡ್ಸ್, ಸಿಕ್ಕಿದವುಗಳಿಗೆ ಏನಾರೂ ಚೂರು ತಿಂಡಿ ಕೊಟ್ಟು, ಮಾತಾಡಿಸುವುದುಂಟು. ಅವು ಬಾಲ ಅಲ್ಲಾಡಿಸಿ , ಮೈಮೇಲೆ ಕಾಲಿಟ್ಟು ಪ್ರೀತಿ ತೋರಿಸುವುದು ಮಜಾ ಸಖತ್ ಪಾರಿವಾಳಗಳು ನಮ್ಮನೆ ಟೆರೇಸ್ ನ ನೀರಿನ ಟ್ಯಾಂಕ್ ಹತ್ರ ಉಂಟು. ಅವುಗಳ ಚೆಂದ ನೋಡ್ತಾ ಕಾಳು-ಅಕ್ಕಿ ಎಸೆದು ಸ್ವಲ್ಪ ಹೊತ್ತು ಮಾತಾಡೋದು ಅಭ್ಯಾಸ . ಅವರೆಕಾಯಿ ಕಾಲ , ಮೊನ್ನೆಯೊಮ್ಮೆ ಒಂದು ಹುಳ ಸಣ್ಣ ಮಗು ಅಂಬೆಗಾಲಿಟ್ಟ ಹಾಗೆ ವೇಗವಾಗಿ ಮಗಳ ರೂಂ ನತ್ತ ಹೋಗ್ತಿತ್ತು. ಇರೂ ಪುಟ್ಟಾ ಅಕ್ಕನ ರೂಂ ಗೇ ಹೋದ್ರೆ ಅಕ್ಕ ಬಯ್ತಾಳೆ ಅಂತಾ ಅದನ್ನು ಎತ್ತಿ ಆಚೆ ಹಣಿದೆ. ಅಮ್ಮಾ .....ನಾನು ಅವರೇಕಾಳು ಹುಳಕ್ಕೂ ಅಕ್ಕನಾ ? ಮಗಳಿಗೆ ಕೋಪ -ನಗು ಎರಡೂ ಹೂವು -ಪ್ರಾಣಿ -ಪಕ್ಷಿ .....ಇವುಗಳ ಹತ್ರ ಮಾತಾಡೋದು ಒಂಥರಾ ಖುಷಿನೇ . ಅವು ತೀಕ್ಷ್ಣವಾದ ಮಾತುಗಳಿಂದಾ ಹರ್ಟ್ ಮಾಡೋಲ್ಲ, ಕೆಲವು ಸ್ಪಂದನೆ ಗೊತ್ತಾಗುತ್ತೆ , ಖುಶೀ ಅನಿಸುತ್ತೆ. ಆದರೇ ........ ಮನುಷ್ಯರ ಜೊತೆ ಮಾತಾಡೋದು ? ನನಗಂತೂ ಪ್ರೀತಿ ಅವಶ್ಯ .ಭಾಷೆಯನ್ನು ಪ್ರೀತಿ ವ್ಯಕ್ತಪಡಿಸಲು ಬಳಸಿದಷ್ಟು ಹೊತ್ತೂ ಅದು ಬೇಕು ಅನಿಸುತ್ತೆ, ಪ್ರೀತಿಯನ್ನು ಬಯಸಿದಾಗ .....ಅವರಿಂದಾ ಬಿರುನುಡಿಗಳು ಬಂದರೆ ? ಈ ಸಂಭ್ರಮಕ್ಕೆ ನಾ ಯಾಕೆ ಇವರ ಹತ್ತಿರ ಮಾತಾಡಿದೆ ? ಅನಿಸಿ ಕಣ್ಣೀರುಗರೆಯುವ ಬದಲು ಸುಮ್ಮನಿರೋದೆ ವಾಸಿ

Edeya Novugalu kanniiraadaaga , berala tudi hididavanu Kaaranava keladeE ...tabbi naaniddene enabaaradeE. ..... nanna naguvige niidu niinna snehada tampanu Jiivanadalli ondara muktaayave. ..mattondara aarambha. ಏನ್ನೆಂದು ಕರೆಯಲಿ ನಿನ್ನ ಹೇಳು ನಾನು, ಹೆಸರಿಗೆ ಸಿಗದಷ್ಟು ಎತ್ತರದ ಸಂಬಂದವನ್ನು... ಚಿನ್ನ ಬಂಗಾರ ಎಂದು ನಿನಗೆ ಬೆಲೆ ಕಟ್ಟಲಾಗುವುದೇನು, ಹುಣ್ಣಿಮೆಯೆಂದು ದೂರದಿಂದಲೇ ನಿನ್ನ ನೋಡಲಾಗುವುದೇನು, ಎಂದಾದರೊಮ್ಮೆ ನನ್ನ ಬಿಟ್ಟು ಹೋಗುವ ಜೀವ ನೀನ್ನಲೇನು, ನಿನಗೇ ನನ್ನ ಹೃದಯ ನೀಡಿದ ಮೇಲೂ ನನ್ನ ಹೃದಯವೆನ್ನಲೇನು,
Aa beladingala ratriya li Hitavaada kulirgaaliyali Tabbida ninna tolugalali naanu Pisuguttida ninna savinudiya mareyalaarenu
Endenduu jothegiruve, usiriddaruu. .illadiddaruu. . Nija, Kanmuchchi mannu seridaruu. . Nanna nenapinalli sthiravaagiruve Ninna olavanneE nannusiraagirisiruve ಎತ್ತಲೋ ಹರಿದಂತಿದೆ ಚಿತ್ತ ನೋಟ ನೆಟ್ಟಿದೆ ಶೂನ್ಯದತ್ತ ಯಾರನ್ನು ಹುಡುಕುತಿರುವೆ ಮನವೇ ಕಾಲವ ತಡೆಯಿಡಿದು ನಿಲ್ಲಿಸಲು ಸಾದ್ಯವೇ ಮರೆತು ಬಿಡು ಕಳೆದ ದಿನಗಳ ಕಹಿಘಟನೆ ಮುನ್ನೆಡೆಯಬೇಕಿದೆ ಜೀವನ ಇರುವವರೊಡನೆ ನೀ ಹೀಗೆ ದಿಟ್ಟಿಸಿ ನೋಡಿದರೂ ಬರಲಾರೆ ನಾ ನಿನ್ನೆಡೆಗೆ ನಿನ್ನ ಜೀವನದಿ ಮುಗಿದ ಪಾತ್ರ ನಾನು ಸಾಗಿರುವೆ ದಿಗಂತದೆಡೆಗೆ
Maathugalu bekilla. .. Ariyalu obbaranobbaru Ariyuva munnaveE Naavu hattiravaadavaru .
ಕಂಡ ಕನಸುಗಳೆಲ್ಲ ನನಸಾಗುವ ಸಮಯ ಮತ್ತೆ ಸವಿರಾಗವ ಮಿಡಿಯುತ್ತಿದೆ ಹೃದಯ ನೂರೆಂಟು ಬಯಕೆಗಳು ಏನಿಲ್ಲ ಮನಸಿಗೆ ಒಂದು ಹೂಮುತ್ತು ಸಾಕು ಒಂದು ಬಿಗಿ ಅಪ್ಪುಗೆ... boಗಸೆಯಲ್ಲಿ ನಿನ್ನ ಮೊಗವಿಡಿದು ಕಣ್ತುಂಬ ನಿನ್ನ ತುಂಬಿಕೊಂಡೆ ನಿನ್ನಧರಗಳ ಜೇನನ್ನು ಧಾರೆಯೆರೆದು ನನ್ನ ಮನದಲ್ಲಿ ನೀ ತುಂಬಿಕೊಂಡೆ ಯಾವುದೂ ಸಿಹಿ ಎನಿಸುತ್ತಿಲ್ಲ .... ಬೆಲ್ಲ, ಸಕ್ಕರೆ, ಜೇನು. ನನ್ನ ಅಧರಗಳ ಚುಂಬಿಸಿದ ಬಳಿಕ. ....ನೀನು . ಹಳೆಯ ನೊವುಗಳೀಗ ನೆನಪಿಲ್ಲ ಯಾವುದೇ ಗಾಯದ ಗುರುತಿಲ್ಲ ಸಾಕಷ್ಟು ಮಾಗಿ ಹಣ್ಣಾಗಿದೆ ನೋಡೆನ್ನ ಮನಸು ಇನ್ನು ಮುಂದಿನ ಜೀವನ ಹಿಂದೆಂದಿಗಿಂತಲೂ ಸೊಗಸು... Tadeyalaare Tunturu maleyalli ... Ninna tuntaatada Nenapugala kaata. Bisiyappugeyali , sihimuttinali shamana. Bandubido, maleyanu nillisalaare, niinuu bekembaaseyanuu sahaa. ..
nannolave....

Ellavuu sullaadaruu. .... Ninna iruvikeya madhuraanubhuthi nijaa. ... yaavuduu shaasvhathavalla. ..aadruu Bayasutide ninna , nannusiru nijaaaaa.
Hinthirugi Nodidaaga ..nanna hejjegalodane ninaduu gurthu! !!! jotheyalle nadedaruu gamanisiralilla !!! Aduu badukidde, nii sikka mele santhoshadindaa badukutiddene. Priithiyo. ...premavo. ..snehavo. ...ellavuu.... Hudukaatada hambakavilla.
ಎಲ್ಲಿ ನಾರಿಯು ಪೂಜಿಸಲ್ಪಡುತ್ತಾಳೆಯೋ ಅಲ್ಲಿ ದೇವಾನುದೇವತೆಗಳು ನೆಲೆಸುವರೆಂಬ ನಮ್ಮ ಸಂಸ್ಕೃತಿ ಮಾನಿನಿಯರು ಅರ್ಧರಾತ್ರಿಯಲಿ ನಿರ್ಭಯವಾಗಿ ತಿರುಗಾಡುವಂತಹ ಮಹಾತ್ಮನ ಕನಸಿನ ಸ್ವಾತಂತ್ರ್ಯದ ನಮ್ಮ ನಾಡಿನಲಿ ರಕ್ತ-ಮಾಂಸಗಳ ಬಸಿದು, ನವಮಾಸ ಬಸಿರ ಹೊತ್ತು ಜನ್ಮದಾತೆಯಾಗಿ ಮೊಲೆಹಾಲನುಣಿಸಿ, ಪ್ರೀತಿಯನುಸಿರು ಕೊಟ್ಟು ಜೀವನರಳಿಸುವ ಕ್ರಿಯೆಯಲಿ ಮರುಜೀವ ತಳೆದು ಹೆಣ್ತನವ ಮೆರೆದ ಭಾಗ್ಯಕೆ ಹೆಮ್ಮೆ ಪಡಲಾ....
ಮಾಧ್ಯಮಗಳಲಿ ಪ್ರಸಾರ, ದಿನಬೆಳಗಾದರೆ ಅತ್ಯಾಚಾರ ತಡೆಗಟ್ಟುವಲಿ ಸೋತಿರುವ ಸರಕಾರ ಅತ್ಯಾಚಾರವೆಸಗಿದ ಪುರುಷನೆಂಬ ಪ್ರಾಣಿ ಮಾನಸಿಕ ರೋಗಿಯಂತೆ ತೀಟೆ ತೀರಿಸುವ ಜೀವ ಹೆಣ್ಣಾದರೆ ಸಾಕಂತೆ ಹಸುಳೆಯಾದರೇನು, ಸುಕ್ಕುಗಟ್ಟಿದ ಮೊಗದ ಹಣ್ಣು ಮದುಕಿಯಾದರೇನು ಸಲಿಂಗ ಕಾಮವೂ ಸರಿಯೆಂದ ಅಸಂಸ್ಕೃತ ಮಾ(ದಾ)ನವ ವೇಶ್ಯಾವೃತ್ತಿಗೆ ಮಾನ್ಯತೆ ಬೇಕು, ದೇವದಾಸಿ ಪದ್ಧತಿ ನಿರ್ಮೂಲವಾಗಬೇಕು ಮುಟ್ಟಾದರೇ ಮುಟ್ಟಿಸಿಕೊಳ್ಳಬಾರದಂತೆ ಮದುವೆ ಕಟ್ಟುಪಾಡುಗಳ ಕಿತ್ತೆಸೆದು ಬೆಂಕಿ-ಬೆಣ್ಣಿಯ ಸಂಗವೂ ಸರಿಯಂತೆ ಯಾವುದು ಸರಿಯೋ, ಯಾವುದು ತಪ್ಪೋ.....
ಕೆಲವರ ಅಂಬೋಣ, ದುರಾಚಾರಗಳಿಗೆ ತುಂಡುಡುಗೆ ಕಾರಣ ಹಾಗಾದರೇ, ಅತ್ಯಾರದ ಮಾರಿಗೆ ಬಲಿಯಾದ ಹಸುಗೂಸುಗಳು, ಶಾಲಾ ಮಕ್ಕಳೂ ಗದ್ದೆಯಲಿ ಬೆವರು ಬಸಿದು ದುಡಿಯುವ ಹೆಣ್ಣು ಜೀವಗಳ ನೋವುಗಳ ಗೋಳು ಕೇಳುವವರಾರು, ಯಾವ ತಪ್ಪಿಗೆ ಯಾರಿಗೆಲ್ಲಾ ಶಿಕ್ಷೆ ಅತ್ಯಾಚಾರಿಗೆ ಯಾವ ಶಿಕ್ಷೆ !!! ಯಾರನ್ನು ಹೊಣೆಯಾಗಿಸಲಿ !!! ಕಣ್ಣುಮುಚ್ಚಿದ ಸರಕಾರವನ್ನೋ, ಪ್ರತಿಭಟಿಸದ ಸಾರ್ವಜನಿಕರನ್ನೋ ನೈತಿಕತೆಯ ಕಲಿಸದ ಪೋಷಕರ ಬೇಜವಾಬ್ದಾರಿಯನ್ನೋ......
ಹೆಣ್ಣಾಗಿ ಹುಟ್ಟಿದುದೇ ನರಕವೆಂಬಂತೆ ಜಗವನೆಲ್ಲಾ ಪಸರಿಸಿರುವ ೋ ವಿಕೃತ ಮನಸುಗಳೇ

olavigaagi...

Naalku godegala naduve naa obbaleE
naaneke koragali
Sonu nigam na romantic songs
Jothege ninna madhura nenapugalive
Khushiyagiralu innenu bekide nannolaveE ? ಮಾತುಗಳೇಕೆ ಬೇಕು ನೀ ಬಳಿಯಿರಲು ?
ನಿನ್ನ ಹೂನಗೆಯ ಕಂಡಾಗ ಮೂಗಳಾಗುವುದೇ ಮಿಗಿಲು.
ತುಂಟತನ, ಚೆಲ್ಲಾಟ ಎಲ್ಲಾ ನಿನಗೇ ಮೀಸಲು
ಅದು...ನೀ ನನ್ನ ಎಂದೂ ಅಗಲದಂತೆ ಪ್ರೀತಿಸಲು. ಮರೆಯಬೇಕೆಂದೇ ನಿನ್ನ ಮತ್ತೇರುವಷ್ಟು ಕುಡಿದೆ
ಮತ್ತಿನಲ್ಲೂ ನಿನ್ನ ಹೆಸರನೇ ತೊದಲಿದೆ.
ಕನಸಾಗಿ ಕಾಡುವೆ ನೀ ನಿದಿರೆಯಲೂ ...
ಚಿರನಿದ್ರೆಯೇ ಬೇಕೇನೋ ನಿನ್ನ ನೆನಪಾಗದಿರಲು.

ನಿಮ್ಮ ನಿಟ್ಟುಸಿರು ನನ್ನೆದೆಯ ಸುಡುತ್ತಿದೆ ನನ್ನೊಲವೇ. ....
ತಬ್ಬಿ ಸಂತೈಸಲು ನಾ ಬೇಡವೇ? ಭೂತ-ಭವಿಷ್ಯದ ಗೊಡವೆ ಮರೆಸುವ
ನಿನ್ನೊಡನೆಯ ವರ್ತಮಾನದ ಸುಖ ಸ್ಥಿರವಾಗಬಾರದೇ ನನ್ನೊಲವೇ ?

ನಿನಗೊಂದು ಮುದ್ದಾದ ಹೆಸರನಿಡಲೇ
ಮುದ್ದು ಹೆಚ್ಚಾದಾಗಲೆಲ್ಲ ಪೆದ್ದು ಎನ್ನಲೇ? ನಿನ್ನ ನಗುವಿಗೆ ನನ್ನ ನಗುವೆ ಕಾರಣವಾದರೆ ಹೇಳಿಬಿಡು
ನೋವಿನಲ್ಲೂ ನಗುವುದ ರೂಡಿಸಿಕೊಳುವೆ ನಾನು...
ondashtu ....olava hanigalu

1.ನಿನಗಾಗೇ ಮಿಡಿದ ಹೃದಯದಲ್ಲಿ 
ಬರಿಯ ನೋವುಗಳೇ 
ತುಂಬಿ ನೀ ದೂರಾದೆಯಲ್ಲ? 
ಉಸಿರಾಡುತ್ತಿರುವೆ ನಾ
ಆ ಉಸಿರೂ ನನದಲ್ಲ.

2.
ಓಹ್ ಅದೆಂತಹ ವರ್ಣ!
ಸುಂದರ ದೇಹ!
ಎಲ್ಲೆಲ್ಲೂ ನೀನೇ ...
ನನಗೇ ಬೇಕೆಂದು ಆಸೆಪಟ್ಟೆ 
ಹೂವಿಂದ ಹೂವಿಗೆ ಹಾರುವುದು 
ನಿನ್ನ ಗುಣ
ನಾ ಬಯಸುವ ಮುನ್ನ
ಮರೆತುಬಿಟ್ಟೆ
ನೀ ಚಿಟ್ಟೆ .

3.
ನೀ 
ನನ್ನನಗಲಿ 
ನಿನ್ನ ಪ್ರೀತಿಸಿದ 
ಹೃದಯವ 
ಮಾಡಿದೆಯಲ್ಲ 
ನೀನಿಂದು
ಚೂರು ಚೂರು
ಆದರೆ
ಬಲ್ಲೆಯಾ
ಅದರ ಪ್ರತೀ
ಚೂರಿನಲ್ಲೂ
ಮಿಡಿದಿದೆ
ನಿನ್ನದೇ
ಹೆಸರು .
1.ನನ್ನ ಕಣ್ಣು ಕಂಡು
ನಿನ್ನ ಮೊಗದಲ್ಲಿ ಕಿರುನಗೆ
ಮತ್ತೆ-ಮತ್ತೆ ನೋಡುವಂತೆ
ಮನದಲ್ಲಿ
ಅರಿಯಲಾರದ ತಲ್ಲಣ
ಮುದ್ದು ವದನ ನಿನ್ನದು
ತಿಳಿನೀರ ಕೆಂದಾವರೆ
ನುಡಿಸಿತೆನ್ನ ದೇಹವೀಣೆ
ಹಿತವಾದ ಕಂಪನ
ಬಾಳ ಹಾದಿಯಲಿ
ಸಿಕ್ಕ ಗೆಳೆಯನೆ ನೀನು
ಒಂದಷ್ಟು ದೂರ ಕೈಹಿಡಿದು
ಜೊತೆ ಬರುವೆಯೇನು
ಇದ್ದಷ್ಟು ಸಮಯ ಜೊತೆಯಾಗಿ
ಬದುಕುವ
ನಾ ನಿನಗೆ, ನೀ ನನಗೆ
ಒಪ್ಪಿಗೆಯಾದರೆ ಕರಾರು
ನೀಡೊಂದು ಮುಗುಳ್ನಗೆ.

2.
ನಾ ನಕ್ಕಾಗೆಲ್ಲಾ ಅಮ್ಮ ಕೇಳುತ್ತಾರೆ
ಯಾಕೆ ಮಗು, ಸುಮ್ಮನೆ ಈ ನಗು? 
ಹೇಳುವುದಾದರೂ ಹೇಗೆ ನಾ 
ನಿನ್ನ ಸವಿ ನೆನಪುಗಳ ಕಚಗುಳಿ ಕಾರಣವೆಂದು.
1.ಮಾತುಗಳ ಮುಚ್ಚಿಟ್ಟು
ಭಾವನೆಗಳ ಬಚ್ಚಿಟ್ಟು
ನಗುತ್ತಾ ಹಾಡುಗಳಲಿ ತೇಲಿಸುವ
ತಬ್ಬಿ ಮುತ್ತಿನಲಿ ಮೈಮರೆಸುವ
ನನ್ನವ--
ಶಾಮಸುಂದರ ಚೆಲುವ.

2.
ಮನಸಿನ ಮೂಲೆಯಲ್ಲಿ ಮುದುರಿ ಮಲಗಿದ್ದ ಮುದ್ದು ಸ್ವಪ್ನಗಳು ಗರಿ ಬಿಚ್ಚಿ ಹಾರಲಿಚ್ಚಿಸಿವೆ...
ನಿನ್ನ ಅಗಮನ ಅನಿರೀಕ್ಷಿತವಾದರೂ ಸಾವಿನ ಹೊಸ್ತಿಲಲ್ಲಿದ್ದ ನನ್ನ ಬದುಕನ್ನು ಹಿಂದೆ ಕರೆಸಿದೆ..
ನಿನ್ನ ಅಗಾಧ ಒಲವು, ಆಗಾಗ ಮುನಿಸಿಕೊಳ್ಳುವ ಮನವು, ಅಕ್ಕರೆಯ ಹೃದಯ ಮಿಕ್ಕೆಲ್ಲವನ್ನು ಮರೆಸಿದೆ...ಮತ್ತೆ ಪ್ರೀತಿಯ ಚಿಗುರಿಸಿದೆ...ಬದುಕಲಿಚ್ಛಿಸಿದೆ.
3.ಮೊದಮೊದಲ ಒಲವು ಸಿಗಲಿ ಸಿಗದಿರಲಿ...
ಸದಾ ನೆನಪಾಗಿ ಉಳಿಯುವುದು ಮನದಲ್ಲಿ...
ಕಾನನದಿ ಒಣಗಿದ ತರಗೆಲೆಗಳ ನಡುವಲ್ಲಿ...
ನಿನ್ನ ನೆನಪುಗಳು ಹಚ್ಚಹಸಿರಾಗಿ ನಗುವ ಹೂಬಳ್ಳಿ.... 
ಮೊದಮೊದಲ ಒಲವು ಸಿಗಲಿ ಸಿಗದಿರಲಿ...
ಸದಾ ನೆನಪಾಗಿ ಉಳಿಯುವುದು ಮನದಲ್ಲಿ...
ನಿನ್ನದೇ ನಗುವಿನ ನೆನಪು ಅಂಗಳದಿ ನಕ್ಕಾಗ ಹೂ ಅರಳಿ...
ನಿನ್ನ ತನುವಿನದೆ ಗಂಧ ಮೊದಲ ಮಳೆಯ ಮಣ್ಣ ಸೊಗಡಲ್ಲಿ...
ಮೊದಮೊದಲ ಒಲವು ಸಿಗಲಿ ಸಿಗದಿರಲಿ...
ಸದಾ ನೆನಪಾಗಿ ಉಳಿಯುವುದು ಮನದಲ್ಲಿ...
ನೀ ನನ್ನ ಕರೆದಂತೆ ಭಾಸ ಎಲ್ಲೊ ಕೂಗುವ ಕೋಗಿಲೆ ದನಿ ಕೇಳಿ...
ನೀ ನನ್ನ ಸೋಕಿ ಮುತ್ತಿಟ್ಟ ಭಾವ ತಂದಿದೆ ತಂಪುತಂಗಾಳಿ...
1.ನಾನ್ಯಾರು ನಿನಗೆ ಎಂದು ನೀ ಕೇಳದಿರು ಮತ್ತೆ ಮತ್ತೆ
ನೀನು ನನ್ನ ಮನದ ಅಂಧಕಾರವ ಅಳಿಸಿದ ಪ್ರೇಮದ್ಹಣತೆ
ಬತ್ತಿದ ನನ್ನೆದೆಯ ಭಾವನೆಗಳಿಗೆ ಒಲವಿನ ಒರತೆ.


2.ಮರೆಯಬೇಕೆಂದೇ ನಿನ್ನ ಮತ್ತೇರುವಷ್ಟು ಕುಡಿದೆ
ಮತ್ತಿನಲ್ಲೂ ನಿನ್ನ ಹೆಸರನೇ ತೊದಲಿದೆ.
ಕನಸಾಗಿ ಕಾಡುವೆ ನೀ ನಿದಿರೆಯಲೂ ...
ಚಿರನಿದ್ರೆಯೇ ಬೇಕೇನೋ ನಿನ್ನ ನೆನಪಾಗದಿರಲು.

3.ಕದ್ದಿದ್ದಾನೆ ನನ್ನ ಹೃದಯ
ತುಂಬಾ ತಡವಾಗಿ ಅರಿವಾಗಿದೆ
ಕದ್ದವನು ಇಲ್ಲೇ ಎಲ್ಲೋ ಇದ್ದಾನೆ
ಹಾ!! ಅವನೇ ಇರಬೇಕು ಗುಮಾನಿ ಇದೆ
ಚಹರೆ ಹೀಗಿದೆ---
ಶ್ಯಾಮಲವರ್ಣ, ಎತ್ತರ ನಿಲುವು
ಹರವಾದ ಎದೆ, ಆಜಾನುಬಾಹು
ದುಂಡನೆಯ ಮೊಗ, ತಿದ್ದಿಟ್ಟ ತುಟಿಗಳಲಿ ಮುಗುಳ್ನಗು,
ಮೆಲುಮಾತು ಗಂಭೀರ
ಹೌದು, ಅದೇ ಗೊಮ್ಮಟನ ತೆರದಿ ಶಾಂತಭಾವ
ನಾನೇ ಕೊಟ್ಟೆನೋ? ಅವನೇ ಕದ್ದನೋ?
ಹೋಗಲಿ ಬಿಡಿ ಹುಡುಕಬೇಡಿ ಯಾರೂ. ...
ನನ್ನ ಹೃದಯ ಅವನಲ್ಲೇ ಇರಲಿ.
ನಮ್ಮೂರಿನಲ್ಲಿ, Mixi ಕೈ ಕೊಟ್ಟರೇ, ಪಕ್ಕದ ಮನೆಗೆ ಹೋಗಿ, ರುಬ್ಬಿಕೊಂಡು ಬರೋಕೆ ನನಗೆ ಮುಜುಗರ. ಅಂತಾದರಲ್ಲಿ ಇವತ್ತು ನಮ್ಮನೆ washing machine ಕೈಕೊಡಬೇಕಾ? 
ರಾಶಿ ಬಟ್ಟೆಗಳು ಬಿದ್ದಿದೆ, ನೆನೆದ ಬಟ್ಟೆಯೂ ಇದೆ. ರಿಪೇರಿ ಮಾಡಲು ಬರುವ ತನಕ ಎಂತಾ ಮಾಡೋದು ಅಯ್ಯೋ. ....
ನನ್ನ ಪುಟ್ಟ, ಮೇಲಿನ ಮನೆಗೆ ಆಟಕ್ಕೆ ಹೋದಾಗ, ಅವರು ಅಮ್ಮ ಏನು ಮಾಡ್ತಾ ಇದ್ದಾರೆ ಎಂದು ಕೇಳಿದಾರೆ, washing machine ಹಾಳಾಗಿದೆ ಅಂತ ಚಿಂತಾ ಮಾಡ್ತಾ ಕೂತಿದಾರೆ ಅಂದಿದಾನೆ.
ಕೆಳಗೆ ಇಳಿದು ಬಂದು ಅವರು ವಿಚಾರಿಸಿ, ರಿಪೇರಿ ಮಾಡುವ ತನಕ ನಮ್ಮನೇದು use ಮಾಡಿರಿ ಪರವಾಗಿಲ್ಲ ಅಂತ ಹುಡುಗರ ಕೈಲಿ washing machine ಕಳಿಸೋದಾ !!!
ದೊಡ್ಡ problem easy ಆಗಿ solve ಆಯಿತು ಉಫ್!!!!!
ನಂಬೋಕಾಗ್ತಿಲ್ಲ!!!!
ಅರಮನೆಯಲಿದ್ರೂ ನೆರೆಮನೆಯವರ ಹತ್ತಿರ ಚೆನ್ನಾಗಿರಬೇಕು ಅಲ್ವಾ ????
ನಿರೀಕ್ಷೆ, ಕನಸುಗಳನ್ನು ಚಿಗುರಿಸಿದ
ನನ್ನೊಲವೇ. ..
ಹೀಗೆ ಮೌನವಾಗಿ 
ನನ್ನ ಕೊಲ್ಲುವುದು ತರವೇ???
ಹಂಚಿಕೊಂಡ ಮೇಲೂ ....
ಮನಸ್ಸು, ಕನಸು... ಎಲ್ಲವನೂ
ಹೇಗೆ ತಾನೇ ಸಹಿಸಲಿ
ಈ ಅಗಲಿಕೆಯನು ???
ಮನಸು ಬಯಸಿದಾಗಲೆಲ್ಲಾ ...
ನಿನಗೆ ಕರೆನೀಡುವೆ
ನಾನಿರುವೆಡೆ ಬಂದು ಅಪ್ಪಿಕೊಳ್ಳಬಾರದೇ ನನ್ನೊಲವೆ ?
ನಿನ್ನ ಮನದಾಳದಲ್ಲಿಯೇ ಇದ್ದು ಕೊನೆಯುಸಿರಿನವರೆಗೆ
ನಿನ್ನ ಜೊತೆ ಸಾಂಗತ್ಯ ನಿಭಾಯಿಸುವೆ.

Tuesday, 15 July 2014

ಅಮ್ಮನಿಗೆ ಹನ್ನೊಂದಕ್ಕೆ ಮದ್ವೆಯಾಗಿ ಹದಿನೆಂಟಕ್ಕೆ ಹುಟ್ಟಿದ ಅಣ್ಣ ಬೆಳ್ಳಗೆ ಸುಂದರ, ಮೊದಲನೆಯ ಮಗ ಸಹಜವಾಗೇ ಅಪಾರ ಪ್ರೀತಿ. ಅವನ ನಂತರ ೭ ವರ್ಚಕ್ಕೆ ಅಕ್ಕ, ಸುಂದರಿ. ಮಗ -ಮಗಳು ಸಾಕಿತ್ತು, ಆದ್ರೆ ನಾ ಹುಟ್ಟಿದ್ದು ೫ ವರ್ಷಗಳ ನಂತರ. ನಾ ಬಣ್ಣದಲ್ಲಿ ಕಪ್ಪು, ಮೊಂಡು ಮೂಗು, ಸ್ವಲ್ಪ ಡುಮ್ಮಗೆ. ತೀರಾ ಸೈಲೆಂಟ್. ನೀನು ನಮ್ಮ ಮಗುವಲ್ಲ ಎಂದು ನಗ್ತಿದ್ರು. ನಾ ಎಷ್ಟೋ ದಿನಗಳು ಹಾಗೇ ಅನ್ಕೊಂಡಿದ್ದೆ. ಯಾವುದನ್ನೂ ನನಗೆ ಬೇಕು ಎಂದು ಎಂದೂ ಕೇಳಲಿಲ್ಲ. ಆದರೇ.....
ನನ್ನನ್ನೂ ಸಹ ನನ್ನ ಹದಿನಾರರಲ್ಲಿ ಒಬ್ಬ ಪ್ರೀತಿಸಿದ  ಆಗ ಅವನಿಗೆ ಹದಿನೇಳು. ಮದುವೆಯೂ ಆಯ್ತು,ಮುದ್ದಾದ ಎರಡು ಮಕ್ಕಳೂ ಸಹ. ಭಗವಂತ ಸುಖ, ಸಂಪತ್ತು ......ಸಕಲವನ್ನೂ ನೀಡಿದ.
ನಾನೂ ಒಂದಿಷ್ಟು ಅರಳಿದೆ, ಬೀಗಿದೆ.
ನಾನು ಹದಿನಾರು ಸ್ವಲ್ಪ ಚೆಂದ ಆಗಿದ್ದೆ. ನಮ್ಮ ಹಳೆಯ ದಿನಗಳ ಫೋಟೋ ನೋಡಿ, ಅತ್ತಿಗೆ ಅದು ಹೆಂಗೆ ನಮ್ಮಣ್ಣನನ್ನು ಲವ್ ಮಾಡಿದರೋ ಎಂದು ನಗ್ತಾನೆ ನನ್ ಮೈದುನ. ಹೌದು ನನ್ನವ ನೋಡೋಕೆ ಚೆಂದ ಅನಿಸ್ತಿರಲಿಲ್ಲ. ಆದರೇ ತುಂಬಾ ಗಂಭೀರವಾದ ಮೆಲು ಮಾತಿನ ಒಳ್ಳೆಯ ಹುಡುಗ. ಬಹುಷಃ ನಾವಿಬ್ರೂ ನಮ್ಮ ರೂಪಕ್ಕೆ ಸೋತು ಒಂದಾಗಿರಲಿಲ್ಲ.
ಹೆಚ್ಚು ದಿನ ಚೆಂದ ಉಳಿಯಲಿಲ್ಲ. ತೀವ್ರ ಅನಾರೋಗ್ಯಕ್ಕೆ ಬಿದ್ದ ನಾನು, ನನ್ನ ಸುಂದರ ನಗು ೬೫ ಕೆ,ಜಿ ದೇಹದ ತೂಕ, ಉದ್ದನೆಯ ಜಡೆ, ಚೆಂದದ ಬಣ್ಣ, ಕೊನೆಗೆ ಬದುಕುವ ಆಸೆಯನ್ನೂ ಕಳೆದುಕೊಂಡಿದ್ದೆ. ತೊದಲುತ್ತಾ , ಕಷ್ಟಪಟ್ಟು ಏನು ಮಾತಾಡೋದು ಅಂತಾ ಮೂಕಳಾದೆ, ಬಹಳಷ್ಟು ಸಮಯ .....ನಿಷ್ಕ್ರಿಯಳಾಗಿ ಮಲಗಿದ್ದಲ್ಲೇ ಮಲಗಿದ್ದೆ ನಾನು.
ನಾಲ್ಕು ಗೋಡೆಗಳ ಮಧ್ಯೆ ಮೌನಕ್ಕೆ ಶರಣಾದೆ. ಆಡಿಕೊಳ್ಳುವ ಜನಗಳ ಎದುರಿಸಲು ಭಯ ಇರಬೇಕು. ಅಥ್ವಾ ಎಲ್ಲವನ್ನೂ ಕಳೆದುಕೊಂಡ ನೋವು-ನಿರಾಸೆ ಇರಬಹುದು, ಕುಗ್ಗಿದೆ.
ಕೊನೆಗೊಂದು ದಿನ ಇನ್ನು ಏಳೋಕೆ ಸಾಧ್ಯವೇ ಇಲ್ಲ ಎಂದಮೇಲೂ ಎದ್ದು ಮಗುವಿನ ಹಾಗೆ ಹೆಜ್ಜೆಯಿಡುವುದು ಕಲಿತೆ, ಕುಂಟುತ್ತಾ ನಡೆದೆ. ಅಯ್ಯೋ ಪಾಪ ಎಂದವರ ಮರುಕ ನನಗೆ ಬೇಡವಾಗಿತ್ತು. ಸಹಾಯ ಮಾಡುವವರಿದ್ರೆ ಅವಲಂಬನೆ ಜಾಸ್ತಿ, ಅಸಾಹಾಯಕರಾಗ್ತೇವ.
ದಿನ ಕಳೀತಾ ........
ಜೀವನದಲ್ಲಿ ಕಲಿತೆ.
"ಯಾವುದೂ ಶಾಶ್ವತ ಅಲ್ಲ , ಯಾವುದೂ ನಮ್ಮದಲ್ಲ".
ದೈಹಿಕ -ಮಾನಸಿಕ ನೋವುಗಳ ಸಾಕಷ್ಟು ಉಂಡ ನನಗೆ ನೋವಿನಲ್ಲಿರುವವರಿಗೆ ಸಹಾಯ, ಸಾಂತ್ವನ ನೀಡುವ ಧೈರ್ಯ ಬಂತು.
ಯಾರಾದರೂ ಅವ್ಳು ಚೆನ್ನಾಗಿದಾಳೆ ಅಂದ್ರೆ ನಗು ಬರುತ್ತೆ, ದೇಹದ ಸೌಂದರ್ಯ ಮಾಸೋದು ಎಷ್ಟ್ ಹೊತ್ತು ? ಇದು ಶಾಶ್ವತ ಅಲ್ಲ ಅಂತಾ ನಂಗೊತ್ತಿದೆ ಎನ್ನಬೇಕು ಅನಿಸುತ್ತೆ.
ಕಳೆದುಕೊಂಡಿದ್ರಿಂದಾ ಪಾಠ ಕಲಿತು....
ಅಂದು ಕಳೆದುಕೊಂಡಿದ್ದನ್ನು ಇಂದು ಮರಳಿ ಪಡೆದಿದ್ದೇನೆ. ಜನಗಳ ಜೊತೆ ಬೆರೆತು ಹೊಸದಾಗಿ ಪಡೆದುಕೊಂಡಿರೋದು 'ಆತ್ಮವಿಶ್ವಾಸ'.
"ನಾನು ಕುರೂಪಿ ನಿಜಾ ಆದರೇ ಮನಸ್ಸು ಸುಂದರವಾಗಿದೆ".
ಅಂತರಾಳದ ಸೌಂದರ್ಯವೇ ನಿಜವಾದ ಸೌಂದರ್ಯ.
Photo: ಏನೂ ಇಲ್ಲದಿದ್ರೆ ಪರವಾಗಿಲ್ಲ, ಇದ್ದಿದ್ದನ್ನು ಕಳೆದುಕೊಂಡರೆ ಆಗುವ ಸಂಕಟ ನನಗೆ ಗೊತ್ತು.
ಅಮ್ಮನಿಗೆ ಹನ್ನೊಂದಕ್ಕೆ  ಮದ್ವೆಯಾಗಿ ಹದಿನೆಂಟಕ್ಕೆ ಹುಟ್ಟಿದ  ಅಣ್ಣ ಬೆಳ್ಳಗೆ ಸುಂದರ, ಮೊದಲನೆಯ ಮಗ ಸಹಜವಾಗೇ ಅಪಾರ ಪ್ರೀತಿ. ಅವನ ನಂತರ ೭ ವರ್ಚಕ್ಕೆ ಅಕ್ಕ, ಸುಂದರಿ. ಮಗ -ಮಗಳು ಸಾಕಿತ್ತು, ಆದ್ರೆ ನಾ ಹುಟ್ಟಿದ್ದು ೫ ವರ್ಷಗಳ ನಂತರ. ನಾ ಬಣ್ಣದಲ್ಲಿ ಕಪ್ಪು, ಮೊಂಡು ಮೂಗು, ಸ್ವಲ್ಪ ಡುಮ್ಮಗೆ. ತೀರಾ ಸೈಲೆಂಟ್. ನೀನು ನಮ್ಮ ಮಗುವಲ್ಲ ಎಂದು ನಗ್ತಿದ್ರು. ನಾ ಎಷ್ಟೋ ದಿನಗಳು ಹಾಗೇ ಅನ್ಕೊಂಡಿದ್ದೆ. ಯಾವುದನ್ನೂ ನನಗೆ ಬೇಕು ಎಂದು ಎಂದೂ ಕೇಳಲಿಲ್ಲ. ಆದರೇ.....
ನನ್ನನ್ನೂ ಸಹ ನನ್ನ ಹದಿನಾರರಲ್ಲಿ   ಒಬ್ಬ ಪ್ರೀತಿಸಿದ :-) ಆಗ ಅವನಿಗೆ ಹದಿನೇಳು. ಮದುವೆಯೂ  ಆಯ್ತು,ಮುದ್ದಾದ ಎರಡು ಮಕ್ಕಳೂ ಸಹ. ಭಗವಂತ ಸುಖ, ಸಂಪತ್ತು ......ಸಕಲವನ್ನೂ ನೀಡಿದ. 
ನಾನೂ ಒಂದಿಷ್ಟು ಅರಳಿದೆ, ಬೀಗಿದೆ. 
ನಾನು ಹದಿನಾರು ಸ್ವಲ್ಪ ಚೆಂದ ಆಗಿದ್ದೆ. ನಮ್ಮ ಹಳೆಯ ದಿನಗಳ ಫೋಟೋ ನೋಡಿ, ಅತ್ತಿಗೆ ಅದು ಹೆಂಗೆ ನಮ್ಮಣ್ಣನನ್ನು ಲವ್ ಮಾಡಿದರೋ ಎಂದು ನಗ್ತಾನೆ ನನ್ ಮೈದುನ. ಹೌದು ನನ್ನವ ನೋಡೋಕೆ ಚೆಂದ ಅನಿಸ್ತಿರಲಿಲ್ಲ. ಆದರೇ ತುಂಬಾ ಗಂಭೀರವಾದ ಮೆಲು ಮಾತಿನ ಒಳ್ಳೆಯ ಹುಡುಗ. ಬಹುಷಃ ನಾವಿಬ್ರೂ ನಮ್ಮ ರೂಪಕ್ಕೆ ಸೋತು ಒಂದಾಗಿರಲಿಲ್ಲ.
ಹೆಚ್ಚು ದಿನ ಚೆಂದ ಉಳಿಯಲಿಲ್ಲ. ತೀವ್ರ ಅನಾರೋಗ್ಯಕ್ಕೆ ಬಿದ್ದ ನಾನು, ನನ್ನ ಸುಂದರ ನಗು ೬೫ ಕೆ,ಜಿ ದೇಹದ ತೂಕ, ಉದ್ದನೆಯ ಜಡೆ, ಚೆಂದದ ಬಣ್ಣ, ಕೊನೆಗೆ ಬದುಕುವ ಆಸೆಯನ್ನೂ ಕಳೆದುಕೊಂಡಿದ್ದೆ. ತೊದಲುತ್ತಾ , ಕಷ್ಟಪಟ್ಟು ಏನು ಮಾತಾಡೋದು ಅಂತಾ  ಮೂಕಳಾದೆ, ಬಹಳಷ್ಟು ಸಮಯ .....ನಿಷ್ಕ್ರಿಯಳಾಗಿ ಮಲಗಿದ್ದಲ್ಲೇ ಮಲಗಿದ್ದೆ ನಾನು.
ನಾಲ್ಕು ಗೋಡೆಗಳ ಮಧ್ಯೆ ಮೌನಕ್ಕೆ ಶರಣಾದೆ. ಆಡಿಕೊಳ್ಳುವ ಜನಗಳ ಎದುರಿಸಲು ಭಯ ಇರಬೇಕು. ಅಥ್ವಾ ಎಲ್ಲವನ್ನೂ ಕಳೆದುಕೊಂಡ ನೋವು-ನಿರಾಸೆ ಇರಬಹುದು, ಕುಗ್ಗಿದೆ.
ಕೊನೆಗೊಂದು ದಿನ  ಇನ್ನು ಏಳೋಕೆ ಸಾಧ್ಯವೇ ಇಲ್ಲ ಎಂದಮೇಲೂ  ಎದ್ದು ಮಗುವಿನ ಹಾಗೆ ಹೆಜ್ಜೆಯಿಡುವುದು ಕಲಿತೆ, ಕುಂಟುತ್ತಾ ನಡೆದೆ. ಅಯ್ಯೋ ಪಾಪ ಎಂದವರ ಮರುಕ ನನಗೆ ಬೇಡವಾಗಿತ್ತು. ಸಹಾಯ ಮಾಡುವವರಿದ್ರೆ ಅವಲಂಬನೆ  ಜಾಸ್ತಿ, ಅಸಾಹಾಯಕರಾಗ್ತೇವ.
ದಿನ ಕಳೀತಾ ........
ಜೀವನದಲ್ಲಿ ಕಲಿತೆ.
"ಯಾವುದೂ ಶಾಶ್ವತ ಅಲ್ಲ , ಯಾವುದೂ ನಮ್ಮದಲ್ಲ".
ದೈಹಿಕ -ಮಾನಸಿಕ ನೋವುಗಳ ಸಾಕಷ್ಟು ಉಂಡ ನನಗೆ ನೋವಿನಲ್ಲಿರುವವರಿಗೆ ಸಹಾಯ, ಸಾಂತ್ವನ ನೀಡುವ ಧೈರ್ಯ ಬಂತು.
ಯಾರಾದರೂ ಅವ್ಳು  ಚೆನ್ನಾಗಿದಾಳೆ ಅಂದ್ರೆ ನಗು ಬರುತ್ತೆ,   ದೇಹದ ಸೌಂದರ್ಯ  ಮಾಸೋದು ಎಷ್ಟ್ ಹೊತ್ತು ?  ಇದು ಶಾಶ್ವತ ಅಲ್ಲ ಅಂತಾ ನಂಗೊತ್ತಿದೆ ಎನ್ನಬೇಕು ಅನಿಸುತ್ತೆ. 
ಕಳೆದುಕೊಂಡಿದ್ರಿಂದಾ ಪಾಠ ಕಲಿತು....
ಅಂದು ಕಳೆದುಕೊಂಡಿದ್ದನ್ನು ಇಂದು ಮರಳಿ ಪಡೆದಿದ್ದೇನೆ. ಜನಗಳ ಜೊತೆ ಬೆರೆತು ಹೊಸದಾಗಿ ಪಡೆದುಕೊಂಡಿರೋದು 'ಆತ್ಮವಿಶ್ವಾಸ'.
"ನಾನು ಕುರೂಪಿ ನಿಜಾ ಆದರೇ ಮನಸ್ಸು ಸುಂದರವಾಗಿದೆ".
ಅಂತರಾಳದ ಸೌಂದರ್ಯವೇ ನಿಜವಾದ ಸೌಂದರ್ಯ.
ನೀನೆಷ್ಟೇ ದೂರ ಹೋದರೂ
ನನ್ನ ಮುಗ್ದ ಮೊಗದ ನೆನಪು 
ನಿನಗೆ ಕಾಡದೇ?
ಕೈ ಕೈ ಹಿಡಿದು ಜೊತೆಯಾಗಿ
ನಾವಿಬ್ಬರೂ ನಡೆದ ದಾರಿ
ಸಂಜೆಯಲಿ ಆಡಿದ ಪಿಸುಮಾತು
ಮರೆಯಲಾದೀತೇ?
ನಾವಿಬ್ಬರೂ ತಬ್ಬಿದ್ದು
ಮುತ್ತಿಟ್ಟಿದ್ದು
ಕಾಮವೂ ಅಲ್ಲ -ಪ್ರೇಮವೂ ಅಲ್ಲ
ಅದು ನಮ್ಮ ಉಸಿರಾಟ
ಅಗಲಲಾದೀತೆ ?
ನೀನಲ್ಲಿ ಈಗ ಚಂದಿರನ ನೋಡ್ತಾ ಇದ್ದೀಯ 
ಎನ್ನುವ ಕಾರಣಕ್ಕೆ ......
ನನಗಿಲ್ಲಿ ಹಿತವೆನಿಸುತ್ತಿದೆ -ಬೆಳದಿಂಗಳು.

நீ அங்கு சந்திரனை பார்த்துக்கொண்டிருக்கிறாய்
என்ற காரணத்திற்காக ......
எனக்கு இங்கே நிலா குளிர்கிறது 
-Sujatha Lokesh A kannada poem translated
ಮೊನ್ನೆಯೊಮ್ಮೆ ನಾನು ನನ್ನವ, ಮಗನೊಂದಿಗೆ ಅಮ್ಮನ ಮನೆಗೆ ಹೋಗಿ ರಾತ್ರಿ ಉಳಿದು, ಬೆಳಗ್ಗೆ ಬೇಗ ಹೊರಡಬೇಕಾಯ್ತು. ನಂ ರಿಷಿ ರಾತ್ರಿ ಬಹಳಾ ಹೊತ್ತು ತಂಗಿಯ (ನನ್ನಕ್ಕನ ಮಗಳು ) ಜೊತೆ ಆಟ. ತನ್ನ ಉಡುಪು ಅವಳಿಗೆ- ಅವಳ ಉಡುಪು ತಾನು ಹಾಕಿಕೊಂಡು, ಒಟ್ಟಿಗೇ ಊಟ ಮಾಡಿ, ಹಾಲು ಕುಡಿದು ಮಾತಾಡ್ತಾ ಇಬ್ರೂ ಜೊತೆಯಲ್ಲೇ ಮಲಗಿದರು. ಬೆಳಗ್ಗೆ ಕಣ್ಣು ಬಿಟ್ಟಿರಲಿಲ್ಲ, ಹಾಗೇ ಎತ್ತಿಕೊಂಡು ಬಂದು ಕಾರ್ ನಲ್ಲಿ ಮಲಗಿಸಿಕೊಂಡು ಹೊರಟ್ವಿ. ಅವನ ತಂಗಿ, ಮಲಗಿದಾಗ ಹೊಚ್ಚಿಕೊಂಡ ಒಂದು ತೆಳು ಹೊದಿಕೆಯನ್ನು ಕಾರ್ನಲ್ಲಿ ಮಲಗಿದ ಅಣ್ಣನಿಗೆ ಕೊಡ್ತು. ಕಣ್ಣು ಬಿಟ್ಟಾಗ ಬೆಂಗಳೂರು. ಹಿಂದಿನ ದಿನದ ಮಜಾ ನೆನಪಾದರೂ, ತಂಗಿಯನ್ನು ಬಿಟ್ಟು ಬಂದ ಬೇಸರ ಆದ್ರೂ ....ಅವಳು ಕೊಟ್ಟ ಹೊದಿಕೆ ಆ ಕ್ಷಣಕ್ಕೆ ಖುಷಿ ಅನಿಸ್ತು. ಮನೆಗೆ ಬಂದು ಇಷ್ಟು ದಿನಗಳಾದರೂ ದಿನಾ ಈಗ ಅವನ ಹೊದಿಕೆ ಬೇಡಾ, ತಂಗಿ ಕೊಟ್ಟಿದ್ದನ್ನೇ ಹೊಚ್ಚಿಕೊಂಡು ನಿದ್ರೆ ಮಾಡ್ತಾನೆ. ಎಂತಹಾ ಸೆಂಟಿಮೆಂಟ್ ಅಲ್ವಾ ? ಈ ನಿಷ್ಕಲ್ಮಶ ಪ್ರೀತಿ ನೋಡಿ ಕಣ್ ತುಂಬಿ ಬಂತು. ದೊಡ್ಡವರಾದಂತೆ .......ಈ ಮುಗ್ಧತೆ ....ಪ್ರೀತಿ ಯಾವತ್ತೂ ಕಳೆದುಹೋಗಬಾರ್ದೂ ಅಲ್ವಾ ?
Photo: ಮೊನ್ನೆಯೊಮ್ಮೆ  ನಾನು ನನ್ನವ, ಮಗನೊಂದಿಗೆ ಅಮ್ಮನ ಮನೆಗೆ ಹೋಗಿ ರಾತ್ರಿ ಉಳಿದು, ಬೆಳಗ್ಗೆ ಬೇಗ ಹೊರಡಬೇಕಾಯ್ತು. ನಂ ರಿಷಿ ರಾತ್ರಿ ಬಹಳಾ ಹೊತ್ತು ತಂಗಿಯ (ನನ್ನಕ್ಕನ ಮಗಳು ) ಜೊತೆ ಆಟ. ತನ್ನ ಉಡುಪು ಅವಳಿಗೆ- ಅವಳ ಉಡುಪು ತಾನು ಹಾಕಿಕೊಂಡು, ಒಟ್ಟಿಗೇ ಊಟ ಮಾಡಿ, ಹಾಲು ಕುಡಿದು ಮಾತಾಡ್ತಾ ಇಬ್ರೂ ಜೊತೆಯಲ್ಲೇ ಮಲಗಿದರು. ಬೆಳಗ್ಗೆ ಕಣ್ಣು ಬಿಟ್ಟಿರಲಿಲ್ಲ, ಹಾಗೇ ಎತ್ತಿಕೊಂಡು ಬಂದು ಕಾರ್ ನಲ್ಲಿ ಮಲಗಿಸಿಕೊಂಡು ಹೊರಟ್ವಿ. ಅವನ ತಂಗಿ, ಮಲಗಿದಾಗ ಹೊಚ್ಚಿಕೊಂಡ ಒಂದು ತೆಳು ಹೊದಿಕೆಯನ್ನು ಕಾರ್ನಲ್ಲಿ ಮಲಗಿದ ಅಣ್ಣನಿಗೆ ಕೊಡ್ತು. ಕಣ್ಣು ಬಿಟ್ಟಾಗ ಬೆಂಗಳೂರು. ಹಿಂದಿನ ದಿನದ ಮಜಾ ನೆನಪಾದರೂ, ತಂಗಿಯನ್ನು ಬಿಟ್ಟು ಬಂದ ಬೇಸರ ಆದ್ರೂ ....ಅವಳು ಕೊಟ್ಟ ಹೊದಿಕೆ ಆ  ಕ್ಷಣಕ್ಕೆ ಖುಷಿ ಅನಿಸ್ತು. ಮನೆಗೆ ಬಂದು ಇಷ್ಟು ದಿನಗಳಾದರೂ  ದಿನಾ  ಈಗ ಅವನ ಹೊದಿಕೆ ಬೇಡಾ, ತಂಗಿ ಕೊಟ್ಟಿದ್ದನ್ನೇ  ಹೊಚ್ಚಿಕೊಂಡು ನಿದ್ರೆ ಮಾಡ್ತಾನೆ.  ಎಂತಹಾ ಸೆಂಟಿಮೆಂಟ್ ಅಲ್ವಾ ? ಈ ನಿಷ್ಕಲ್ಮಶ  ಪ್ರೀತಿ  ನೋಡಿ ಕಣ್ ತುಂಬಿ ಬಂತು. ದೊಡ್ಡವರಾದಂತೆ .......ಈ ಮುಗ್ಧತೆ ....ಪ್ರೀತಿ  ಯಾವತ್ತೂ ಕಳೆದುಹೋಗಬಾರ್ದೂ ಅಲ್ವಾ ?
ಬಹುಷಃ ಮಕ್ಕಳ ಪ್ರಶ್ನೆಗಳಿಗೆ ನಾವು ಸುಳ್ಳು ಹೇಳಬೇಕಾದ ಅಥವಾ ಬೆಬ್ಬೆಬ್ಬೇ ಅನ್ನೋ ಪ್ರಸಂಗಗಳು ಜಾಸ್ತಿ ಅಲ್ವಾ ?
ನನ್ ಮಗನಿಗೆ ಪೂಜೆ ಮಾಡುವುದು , ಶ್ಲೋಕ ಹೇಳೋದು ತುಂಬಾ ಇಷ್ಟವಾದ ಕೆಲಸ. ನೈವೇದ್ಯಕ್ಕೆ ಬಾಳೆಹಣ್ಣು ಇಟ್ರೆ, ಪೂಜೆಯಾದ್ಮೇಲೆ ಡ್ಯಾಡೀ ಈಗ ಗಾಡ್ ಪೆರ್ಮಿಶನ್ ಕೊಡ್ತಾ ಬನಾನಾ ತಿನ್ನೋಕೆ ? ತಗೊಲ್ಲಲಾ ಅಂತಾ ತಗೊಂಡು, ಬಂದರ್ ಖೇಲಾ ತಿನ್ತಿದೆ ಅಂತಾ ಖುಷಿಯಾಗುವ ಮಗ.
ನೀನು ಪಂಚೆ ಉಟ್ಟ ಹಾಗೆ ನನಗೆ ಟವೆಲ್ ಉಡಿಸು ಎಂದು ಅಪ್ಪನೊಂದಿಗೆ ಪೂಜೆಗೆ ತಾನೂ ರೆಡಿ ಆಗ್ತಾನೆ.
ಇಂದು---
ಇದು ಸ್ವೋರ್ಡ್ ಪುರಾನಾ ಜಮಾನದ್ದಾ ಡ್ಯಾಡೀ ಅಂದ ಮಗ.
ಹೌದು ನಂ ತಾತನದ್ದು ಅಂದ್ರು ಅಪ್ಪ.
(ಚಿತ್ರದಲ್ಲಿರೋ ಕತ್ತಿ-ಬೆತ್ತ ನೋಡಿ, ಇದು ಲೋಕಿಯವರ ತಾತನ ಅಸೆಟ್, ನಮ್ಮನೆಯಲ್ಲಿ ದಿನವೂ ಪೂಜಿಸಲ್ಪಡುತ್ತೆ. ತಾತ ಇದನ್ನು ಉಪಯೋಗಿಸುತಿದ್ರು, ಇವರ ಕುಟುಂಬಕ್ಕೆ 'ಗಣಮಗಜ್ಜನ ಮನೆಯವರು ' ಅಂತಾನೆ ಕರೆಯೋದು. ವಿಶೇಷವಾದ ಗೌರವ , ನಂಬಿಕೆ , ಭಕ್ತಿ ಅದರ ಮೇಲೆ.ಒಂದು ದಿನವೂ ಪೂಜೆ ತಪ್ಪಿಸದೇ, ಹಣ್ಣು -ಕಾಯಿ ನೈವೇದ್ಯ ಇರಿಸಿ, ವಿಶೇಷ ದಿನಗಳಲ್ಲಿ ಬೆಲ್ಲದನ್ನ ಇರಿಸಿ ಪೂಜಿಸುವುದು ಪದ್ಧತಿ. )
ಇದನ್ನು ನಿಂಗೆ ಕೊಟ್ರಾ ? ಅಂದ ಮಗ .
ಮಾತಿಲ್ಲ .....
ಈ ಲಕಡೀ ಯಾರದು ?ಅಜ್ಜಿದಾ ? ಮಗ ಕೇಳಿದ.
ನಗೂ ಬರೋಕೆ ಶುರುವಾಯ್ತು ನಮಗೆ.
ಹ್ಮಂ ಡ್ಯಾಡೀ ಅಜ್ಜಿ ಲಕಡೀ ಹಿಡಿದುಕೊಂಡಾಗ ತಾತ ಸ್ವೋರ್ಡ್ ಹಿಡ್ಕೊತಿದ್ರು ತಾನೇ ? ಎಂದ .
ಅವನು ಹೇಳಿದ ಹಾಗೆ ಕಲ್ಪಿಸಿಕೊಂಡರೆ ......ಅಯ್ಯೋ ......
ಏನ್ ಹೇಳಬೇಕೂ ಅಪ್ಪ ?
ನಾವಿಬ್ರೂ ನಗ್ತಾನೆ ಇದ್ವಿ.
ಮಗಾ ಮಾತ್ರ ಆರಾಮಾಗಿ ಪೂಜೆ ಮುಗಿಸಿ , ಟವೆಲ್ ಉದುರಿಸಿ ಬಾಳೆಹಣ್ಣು ಮೆದ್ದ.

Photo: ಬಹುಷಃ ಮಕ್ಕಳ  ಪ್ರಶ್ನೆಗಳಿಗೆ ನಾವು ಸುಳ್ಳು ಹೇಳಬೇಕಾದ ಅಥವಾ  ಬೆಬ್ಬೆಬ್ಬೇ ಅನ್ನೋ ಪ್ರಸಂಗಗಳು ಜಾಸ್ತಿ ಅಲ್ವಾ ? 
ನನ್ ಮಗನಿಗೆ ಪೂಜೆ ಮಾಡುವುದು , ಶ್ಲೋಕ ಹೇಳೋದು ತುಂಬಾ ಇಷ್ಟವಾದ ಕೆಲಸ. ನೈವೇದ್ಯಕ್ಕೆ ಬಾಳೆಹಣ್ಣು ಇಟ್ರೆ, ಪೂಜೆಯಾದ್ಮೇಲೆ ಡ್ಯಾಡೀ ಈಗ ಗಾಡ್ ಪೆರ್ಮಿಶನ್  ಕೊಡ್ತಾ ಬನಾನಾ ತಿನ್ನೋಕೆ ? ತಗೊಲ್ಲಲಾ ಅಂತಾ  ತಗೊಂಡು, ಬಂದರ್ ಖೇಲಾ ತಿನ್ತಿದೆ ಅಂತಾ ಖುಷಿಯಾಗುವ ಮಗ. 
ನೀನು ಪಂಚೆ ಉಟ್ಟ ಹಾಗೆ ನನಗೆ ಟವೆಲ್ ಉಡಿಸು ಎಂದು ಅಪ್ಪನೊಂದಿಗೆ  ಪೂಜೆಗೆ ತಾನೂ ರೆಡಿ ಆಗ್ತಾನೆ.
ಇಂದು--- 
ಇದು ಸ್ವೋರ್ಡ್ ಪುರಾನಾ ಜಮಾನದ್ದಾ ಡ್ಯಾಡೀ ಅಂದ ಮಗ.
ಹೌದು ನಂ ತಾತನದ್ದು ಅಂದ್ರು ಅಪ್ಪ.
(ಚಿತ್ರದಲ್ಲಿರೋ ಕತ್ತಿ-ಬೆತ್ತ  ನೋಡಿ, ಇದು  ಲೋಕಿಯವರ ತಾತನ ಅಸೆಟ್, ನಮ್ಮನೆಯಲ್ಲಿ ದಿನವೂ ಪೂಜಿಸಲ್ಪಡುತ್ತೆ. ತಾತ ಇದನ್ನು ಉಪಯೋಗಿಸುತಿದ್ರು, ಇವರ ಕುಟುಂಬಕ್ಕೆ 'ಗಣಮಗಜ್ಜನ ಮನೆಯವರು ' ಅಂತಾನೆ ಕರೆಯೋದು. ವಿಶೇಷವಾದ ಗೌರವ , ನಂಬಿಕೆ , ಭಕ್ತಿ  ಅದರ ಮೇಲೆ.ಒಂದು ದಿನವೂ ಪೂಜೆ ತಪ್ಪಿಸದೇ, ಹಣ್ಣು -ಕಾಯಿ ನೈವೇದ್ಯ ಇರಿಸಿ, ವಿಶೇಷ ದಿನಗಳಲ್ಲಿ ಬೆಲ್ಲದನ್ನ ಇರಿಸಿ ಪೂಜಿಸುವುದು ಪದ್ಧತಿ. )
ಇದನ್ನು ನಿಂಗೆ ಕೊಟ್ರಾ ? ಅಂದ ಮಗ .
ಮಾತಿಲ್ಲ .....
ಈ ಲಕಡೀ ಯಾರದು ?ಅಜ್ಜಿದಾ ? ಮಗ ಕೇಳಿದ. 
ನಗೂ ಬರೋಕೆ ಶುರುವಾಯ್ತು ನಮಗೆ.
ಹ್ಮಂ ಡ್ಯಾಡೀ ಅಜ್ಜಿ ಲಕಡೀ ಹಿಡಿದುಕೊಂಡಾಗ ತಾತ ಸ್ವೋರ್ಡ್ ಹಿಡ್ಕೊತಿದ್ರು ತಾನೇ ? ಎಂದ .
ಅವನು ಹೇಳಿದ ಹಾಗೆ  ಕಲ್ಪಿಸಿಕೊಂಡರೆ ......ಅಯ್ಯೋ ......
ಏನ್ ಹೇಳಬೇಕೂ ಅಪ್ಪ ?
ನಾವಿಬ್ರೂ ನಗ್ತಾನೆ ಇದ್ವಿ.
ಮಗಾ ಮಾತ್ರ ಆರಾಮಾಗಿ ಪೂಜೆ ಮುಗಿಸಿ , ಟವೆಲ್ ಉದುರಿಸಿ ಬಾಳೆಹಣ್ಣು ಮೆದ್ದ.
ನನ್ನ ಕೊಲ್ಲಲು
ಯಾವುದೇ ಆಯುಧ ಬೇಕಿಲ್ಲ 
ನಿನ್ನ ನಿರ್ಲಕ್ಷ್ಯವೊಂದೇ ಸಾಕು.
ಮಳೆ ನಿಂತರೂ
ತೊಟ್ಟಿಕ್ಕುವ ಹನಿಗಳು ......
ನಿನ್ನ ನೆನಪುಗಳು
 — 
ಸಾಯುತ್ತಿರುವಾಗ 
ದೊರೆತು.....
ಜೀವವಿತ್ತ 
ಸಂಜೀವಿನಿ......
'ನಿನ್ನೊಲವು'.
ನಿಶ್ಯಬ್ದ ಮನದಲ್ಲಿ 
ಪ್ರಚಂಡ ಬಿರುಗಾಳಿ
ಅಲೆಯಂತೀಗ ತುಯ್ದಾಟ-
ದ ಬದುಕು
ಒಲವೇ .....
ನೀನೇಕೆ ಮೌನವಾಗಿರುವೇ
ನಿನ್ನನ್ನು ನೆನೆದಷ್ಟು 
ದೇವರನ್ನು ನೆನೆದಿದ್ದರೇ...
ಆ ದೇವರೇ ಪ್ರತ್ಯಕ್ಷನಾಗಿ 
ನಿನ್ನನ್ನೇ ಕೊಟ್ಟುಬಿಡುತ್ತಿದ್ದನೇನೋ !!!!!
ನಾವು ಚಿಕ್ಕಂದಿನಲ್ಲಿ ಏನು ಖುಷಿ ಅನುಭವಿಸಿರಲ್ವೋ ಅದನ್ನು ನಮ್ಮ ಮಕ್ಕಳು ಅನುಭವಿಸುವಾಗ ನಾವು ಖುಷಿಯಾಗ್ತೇವೆ ಅಲ್ವಾ ? ಹಾಗಾಗಿಯೇ ನನಗೂ , ನನ್ನವನಿಗೂ ಮಕ್ಕಳು ಏನ್ ಕೇಳಿದರೂ ಕೊಡಿಸಿ ಅವರನ್ನು ನೋಡೋದು ಇಷ್ಟ . ಸರೀ ಕಳೆದೊಂದು ಭಾನುವಾರ ಮಗಳನ್ನು ಕಾಲೇಜ್ ಗೆ ಸೇರಿಸಿ ಅವಳಿಗಾಗಿ ಹೊಸಾ ಬಟ್ಟೆ ತರಲು ಹೊರಟ್ವಿ. 
ಡ್ಯಾಡೀ ಮೊದಲು ನನಗೊಂದು ಎಚ್ಪಿ ಪ್ರಿಂಟರ್ ಮತ್ತೆ ಒಂದು ಟ್ರೈ ಪಾಡ್ ಕೊಡಿಸಿಬಿಡೂ ಅಂದ ಮಗರಾಯ. ನಿಂಗೆ ಆಗದಿದ್ರೆ ಹೇಳು ಡ್ಯಾಡಿ ನಾನು ಗೂಗಲ್ ಡಾಟ್ ಕಾಂ ನಲ್ಲಿ ಆರ್ಡೆರ್ ಮಾಡ್ತೀನಿ ಅಂದ .
ರೀ ಇವ್ನು ಓ .ಎಲ್. ಎಕ್ಷ ನಲ್ಲಿ ನಮ್ಮನ್ನೇ ಮಾರ್ತಾನೆ ಅಂತಾ ನಕ್ಕೆ .
ಅದೆಲ್ಲಾ ಆಗೋಲ್ಲ ಮೊದಲು ನನ್ನ ಶಾಪಿಂಗ್ ಅಂದ್ಲು ಮಗಳು .
ಹೋಗ್ಲೀ ಒಂದು ಕೇಜ್ ಕೊಡಿಸೂ ಪ್ಲೀಸ್ ಅಂದ .
ಯಾಕೋ ?ಮಗಳು ಕೇಳಿದಳು .
ಬರ್ಡ್ಸ್ ಇಡೋಕೆ ಮಗನ ಉತ್ತರ .
ಹಕ್ಕಿ ಕಕ್ಕ ಮಾಡುತ್ತೆ ಗಲೀಜು ಮನೆಯೊಳಗೆ ಬೇಡಾ ಅಂದ್ಲು ಮಗಳು .
ಡೋಂಟ್ ವರೀ ಅಕ್ಕ ಒಂದು ಪಪ್ಪಿ ತರೋನಾ ಅಂದ .
ಪಪ್ಪೀ ಗೆ ಯಾರೋ ಸೂಸು , ಕಕ್ಕ ಮಾಡ್ಸೋಕೆ ಕರ್ಕೊಂಡು ಹೋಗೋದು ?
ನಾನು  ಮಗನ ಉವಾಚ.
ನಿನ್ ಕುಂಡೆ ಯಾರೋ ತೊಳೆಯೋದು ?
ಅಮ್ಮ-- ಮಗ ಅಂದ.
ಲೇಯ್ ಮೊದ್ಲು ನಿಂದು ನೀ ತೊಳೆದುಕೋ ಅಷ್ಟು ದೊಡ್ಡವನಾದಮೇಲೆ ತರಾನಾ ಅಂದಳು .
ಮಕ್ಕಳಿಗೆ ಎಷ್ಟು ಆಟದ ಸಾಮಾನು ಇದ್ದರೂ ಸಾಲದು ಎಲ್ಲವೂ ನಾಲ್ಕು ದಿನದ ಖುಷಿ ಹೊಸದೊಂದು ಬರುವವರೆಗೆ ಅಷ್ಟೇ . ಆಡೋಕೆ ಮಕ್ಕಳ ಜೊತೆ ಮಕ್ಕಳು ಇದ್ದರೆ ಸಾಕು ಕಲ್ಲು ಮಣ್ಣು ಮರದ ತುಂಡು ಏನೋ ಒಂದರ ಜೊತೆ ಆಡಿಕೊಳ್ಳು ತ್ತವೆ ಅಲ್ವಾ ?ಆದರೇ ......
ನಾನು ಇದಕ್ಕಿಂತಾ ಭಿನ್ನವಲ್ಲ .
ಮೊನ್ನೆಯೊಮ್ಮೆ ಮದ್ಯಾಹ್ನ ನನ್ನವನಿಗೆ ಫೋನ್ ಮಾಡಿದೆ .
ಯಾಕೋ ಫೋನ್ ತೆಗೆಯಲಿಲ್ಲ 
ನಂತರ ರಿಸಿವ್ ಮಾಡಿದಾಗ ಕೋಪ ಬಂದಾಗಿತ್ತು .
ಬೇಜಾರ ಆದಾಗ ಮಾತಾಡು ನನ್ ಜೊತೆ ಅಂದವ ನೀನಾ ? ಎಲ್ಲಿದೀಯಾ ಬಂದು ಬಿಡು ಬೇಜಾರ್ ಆಗ್ತಿದೆ ಅಂದೆ.
ಕೆಲಸ ಇದೆಯೇ ಅಂದ .
ಬಾ ನೀನು ಅಡುಗೆ ಮಾಡೋಲ್ಲ ನನ್ನ ಮುನಿಸು .
ನಂದು ನೆರವಿನಲಿ ಊಟಾ ಆಗಿದೆ , ಮಕ್ಕಳಿಗೆ ನಿಂಗೆ ಪಿಜ್ಜಾ ತರ್ತೇನೆ , ಅದುವರೆಗು.... ಅಯ್ಯೋ ಎಫ್ ಬಿ ಗೆ ಹೋಗಿ , ಒಂದು ಕಿತ್ ಹೋಗಿರೋ ಕವನ ಹಾಕೆ ಒಂದಷ್ಟು ಲೈಕ್ಸು ಕಾಮೆಂಟ್ಸ್ ಬರುತ್ತೆ ಅಂದು ನಕ್ಕು ಬಿಟ್ಟ.
ಬೆಚ್ಚನೆಯ ಮನೆಯಿರಲು ,
ಮುಚ್ಚಟೆಗೆ ಮುದ್ದು ಮಕ್ಕಳಿರಲು ,
ಇಚ್ಚೆಯನರಿತು ನಡೆವ (:-p ) ಪತಿಯಿರಲು ,
ಇನ್ನೇನು ಎ. ಸಿ ೧೮ ಕ್ಕೆ ಇರಿಸಿ ಮಲಗಿದೆ .
ಸಂತೋಷವನ್ನು ಹುಡುಕ್ತಾನೆ ಇರ್ತೇವೆ 
ಇದೊಂದು ಕಿರು ಕಥೆ ಅಂತ ಓದಿ: -)) 
ಕೆಲವೊಂದು ಸ್ವಭಾವ ಬದಲಾಗೋದೇ ಇಲ್ಲ . 
ನನಗೆ ಪ್ರಾಮುಖ್ಯತೆ ಇರದೆಡೆಗೆ ನಾ ಹೋಗೋಲ್ಲ . ಖುಷಿ ಬೇಕು ನನಗೆ , ಖುಷಿ ಸಿಗುವ ತಾಣ ಇರದಿದ್ರೆ ನಾನಲ್ಲಿ ಸೃಷ್ಟಿಸಿಕೊಳ್ಳುತ್ತೇನೆ . ಸೀಮಿತ ವಲಯದಲ್ಲಿ ನಾ ಸುಮ್ಮನಿದ್ದುಬಿಡುವೆ . ನನ್ನ ಪ್ರೀತಿಯ ವ್ಯಕ್ತಿಗಳ ಸ್ವಲ್ಪ ನಿರ್ಲಕ್ಷ್ಯವೂ ಸಹಿಸದ ನಾನು ಮೆತ್ತೆಗೆ ದೂರ ಸರಿದುಬಿಡ್ತೇನೆ . 
ಇದು ಹಾಗಿದ್ದೂ ಹಾಗೆ ...... 
ಅವನು ಗೆಳೆಯ ಅಂದ್ರೆ ಗೆಳೆಯ ಅಷ್ಟೇ .... ಆ ತರಾ ಈ ತರಾ ಅಂತಿಲ್ಲ . ನಂ ಸೆಕ್ಷನ್ ನಲ್ಲಿದ್ದದ್ದು ೯ ಜನ ಹುಡುಗಿಯರು ,
ಜೊತೆಗೆ ೩೫ ಹುಡುಗರು . ಅನಿವಾರ್ಯವಾಗಿ ಹುಡುಗರನ್ನೂ ಫ್ರೆಂಡ್ ಮಾಡ್ಕೊಬೇಕು ತಾನೇ ? ನನ್ನ ಉದ್ದ ಜಡೆಗೆ ಮುಡಿಯಲು ,ದಿನವೂ ಬೆಳಗ್ಗೆ ಒಂದು ರೋಜ್ ತಂದು ಡೆಸ್ಕ್ ಮೇಲಿಡುವ ಅವನು ಯಾವತ್ತೂ ಐ ಲವ್ ಯು ಅನ್ನಲಿಲ್ಲ . ಉದ್ದ ಜಡೆ , ಗುಂಡು ಮೊಗದಲ್ಲಿ ದೊಡ್ಡ ಕಣ್ಣು, ಮೆಲು ಮಾತು,
ಕುಳ್ಳ ಪುಟ್ಟ ಹುಡುಗಿ ನಾನು , ಎಷ್ಟೋ ಜನ ಚೆಂದ ನೀನೂ ಅಂದ್ರೂ ನನಗೆ ನಮ್ಬಿಕೆಯೇನೂ ಇರಲಿಲ್ಲ . ಹಾಗಾಗಿ ನಾನು ಲವ್ ಅಂತಾ ತಲೆಕೆಡಿಸಿ ಕೊಳ್ಳೋಕೆ ಹೋಗಲಿಲ್ಲಾ ಅನಿಸುತ್ತೆ  ಬಹುಷಃ ಅವನು ನಿರೀಕ್ಷಿಸಿದ್ದನಾ ?
ಅವನೊಂದಿಗೆ ನಾ ಚರ್ಚ್ ,ನನ್ನೊಂದಿಗೆ ಅವನು ದೇವಸ್ಥಾನಕ್ಕೆ , ಹಬ್ಬ ಅಂತಾ ಇಬ್ರೂ ಮನೆಗೆ ಕರೆಯೊದಾಗಲೀ , ನಮಗಿಷ್ಟವಾದ ಐಸ್ ಕ್ರೀಮ್ ತಿನ್ನೋಕೆ , ಪಿಚ್ಚರ್ ಗೆ ಅಂತಾ ಸುತ್ತಾಡಿದ್ದನ್ತೂ ಸುಳ್ಳಲ್ಲ .
ಜೆಲಸ್ ಬರಲೀ ಅಂತಾ ಹೀಗ್ಮಾಡಿದನಾ ?ನನಗೆ ಹಾಗನಿಸ್ತಾ ? ಅವನೇ ಹಾಗ ಮಾಡಿದನಾ ?ಬೇರೊಂದು ಹುಡುಗಿ ಸ್ನೇಹ ಅವನ ಜೊತೆ ಅತೀ ಅನಿಸ್ತು . ನನಗೆ ಹೊಟ್ಟೆಕಿಚ್ಚು ಅಂತಾ ಒಪ್ಪಲ್ಲ . ಸ್ವಲ್ಪ ನೋವಾಗಿದ್ದು ನಿಜಾ . ದೂರ ಸರಿದಿದ್ದು ಗೊತ್ತಾಗಲಿಲ್ಲ .
ಎಲೆಕ್ಷನ್ ನಿಲ್ಲುವ ವೇಳೆ ಬಂತು , ಇವನೂ ನಿಂತ ,ಸುಜಾತಾ ವೋಟು ನನಗೆ , ಕೇಳೋದೇನಿರುತ್ತೆ ನನ್ನಲ್ಲಿ ಅಂತಾ ಕೇಳಲಿಲ್ಲ . ಒಳವಳಗೆ ಇದ್ದ ಕೋಪ , ನಾನೂ ನನ್ನ ಜೊತೆಗಾತಿ ಇಬ್ರೂ ಅವನಿಗೆ ವೋಟು ಹಾಕಲಿಲ್ಲ . ಎರಡೇ ವೋಟಿಂದ ಸೋತು ಅವನು ಲೀಡರ್ ಆಗಲಿಲ್ಲ . ಜಾಣ ಅವನು ಯಾರು ಯಾರು ವೋಟು ಹಾಕಿದಾರೆ ಅಂತಾ lecturer ಹತ್ರಾ ಚೀಟಿ ತೆಗೆಸಿ ನೋಡಿದ . handwriting ನಿಂದಾ ಅದು ನಾವೇ ಅನ್ನೋದು ಸ್ಪಷ್ಟವಾಯ್ತು . ಈ ಆಘಾತ ಅವನು ನಿರೀಕ್ಷಿಸಿರಲಿಲ್ಲ , ಅವನ ಕನಸನ್ನು ಮುರಿದಿದಿದ್ದು ನಾನು ಅಂತಾ ಬೇಜಾರ್ ಮಾಡಿಕೊಂಡು ದೂರಾದ .
ಸಂಬಂಧ ಮುರಿದುಹೊಯ್ತು .
ಓದಿನ ದಿನಗಳು ಮುಗಿದ ಮೇಲೆ ಎಷ್ಟೋ ವರುಷಗಳ ನಂತರ ಸಂಪರ್ಕಕ್ಕೆ ಬಂದೆ . ಆಗ .......
skype ನಲ್ಲಿ ..... ಈಗ ವಿದೇಶದಲ್ಲಿ ದೊಡ್ಡ ಹುದ್ದೆ, ನೋಡೇ ಇದು ನನ್ನ ಮನೆ ,ಇದು ನನ್ನ ಕಾರ್ ,ಕಾರ್ ನಲ್ಲಿ ಹೋಗ್ತಾ ..ಮಾತಾಡ್ತಾ ..ರಸ್ತೆಗಳ ತೋರಿಸ್ತಾ , ಮೇಲೆ ಹಾರಿದ ವಿಮಾನನೂ ತೋರಿಸ್ತಾ , ಏರ್ ಪೋರ್ಟ್ ವರೆಗೂ ಮಾತು ..... ಬಂದುಬಿಡೇ ವಿಸಿಟರ್ಸ್ ವೀಸ ಕಳಿಸ್ತೇನೆ ಎಂದ .
ನೀನು ದೂರವಾಗಿದ್ದರೂ ನಾ ಚೆಂದ ಇದ್ದೇನೆ ಅಂತಾ ತೋರಿಸಬೇಕಿತ್ತೇನೋ !!!!!
ನೀ ಹೇಗಿದ್ದೀ ? ಎಂದ . ನಾನೂ ಸಹಾ .....
ಬಯಸಿದರೆ ಆಗಸದಲ್ಲಿನ ತಾರೆಗಳನ್ನೇ ತರುವೆ ಎನ್ನುವ , ಏಕೆ ಹೀಗೆ ಮಾಡಿದೆ ಎಂದು ಎಂದೂ ಪ್ರಶ್ನಿಸಿದ , ನನ್ನೆಲ್ಲಾ ಭಾವನೆಗಳನ್ನು ಗೌರವಿಸುವ ನನ್ನನ್ನು ಪ್ರ್ರಿತಿಸಿ ಮದುವೆಯಾದ ನನ್ನವನ ತೋಳುಗಳಲ್ಲಿ , ಮುದ್ದು ಎರಡು ಮಕ್ಕಳೊಂದಿಗೆ ಬೆಚ್ಚಗೆ ಇದ್ದೇನೆ ಎಂದು ನಕ್ಕೆ 
ಏನಿದೆಯೋ ..... ಇಲ್ಲವೋ ..... ಎಲ್ಲಾದಕ್ಕಿನ್ತಲೂ...... ನನ್ನನ್ನು ನಾನು ಬದಲಾಯಿಸಿಕೊಳ್ಳದೆ ಬದುಕೋಕೆ ಸಾಧ್ಯವಾಗಿರೋದು ನೆಮ್ಮದಿನೆ 
ಇವತ್ತು ನನಗಿಷ್ಟವಾದ ಅಡಿಗೆ ಹೇಳಿಕೊಡ್ತೇನೆ: -)
ಎಲೆಕೋಸಿನ ಬೀಸುಗೊಜ್ಜು ---
ಬಾಣಲೆಗೆ ಸ್ವಲ್ಪ ಕೋಸಿನ ತುರಿ , ಒಣ /ಹಸಿ ಮೆಣಸಿನಕಾಯಿ , ಹೆಚ್ಚಿದ ಒಂದು ಟೊಮ್ಯಾಟೋ ಇವಿಷ್ಟನ್ನು ೧ ಚಮಚೆ ಎಣ್ಣೆಯೊಡನೆ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಬೇಕು . ಅದಕ್ಕೆ ಸ್ವಲ್ಪ ಕಾಯಿತುರಿ ,ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ರುಬ್ಬಬೇಕು . ರುಬ್ಬಿದ ಮಿಶ್ರಣಕ್ಕೆ , ಸಾಸಿವೆ ,ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು , ಇಂಗು ಒಗ್ಗರಣೆ ಹಾಕಿದರೆ ಚೆಂದ ಆಗುತ್ತೆ . ಇದನ್ನು ಬಿಸಿ ಅನ್ನದ ಜೊತೆ ತುಸು ಕೊಬ್ಬರಿ ಎಣ್ಣೆ ಬೆರೆಸಿಕೊಂಡು ತಿನ್ನೋಕೆ ಮಜಾ  ಇದೆ ತರಹ ಕೋಸಿನ ಬದಲಾಗಿ ಹೆಚ್ಚಿದ ತೊಂಡೆಕಾಯಿ, ಜೊತೆಗೆ tomato ಬದಲಾಗಿ ಹುಣಿಸೇಹಣ್ಣು ಹಾಕಿ ರುಬ್ಬಿದರೆ ಅದೂ ಒಂದು ತರಹಾ ರುಚೀ ಇರುತ್ತೆ . ಇದಕ್ಕೆ ಬೀಸುಗೊಜ್ಜು ಅಂತಾರೆ  
ನಿಜವಾಗಲೂ ಚೆನಾಗಿರುತ್ತೆ, ಮಾಡಿ ನೋಡಿ.
ನನಗರಿವಿದೆ ...
ನಾ ನಿನ್ನ ಪ್ರೀತಿಸಿದರೇ ....
ರಾಧೆಯ ವಿರಹವನೇ ಅಪ್ಪಿಕೊಳ್ಳಬೇಕೆಂದು
ಆದರೇ......
ಹೇಳು 
ಪ್ರೀತಿಸುವ ಸುಖದಿಂದ 
ನಾನೇಕೆ ವಂಚಿತಳಾಗಲೀ?

Sunday, 16 February 2014

1.ನಾ ಸನಿಹ ಬಂದಷ್ಟೂ ,,,,
ದೂರ ಓಡುತ್ತೀಯಲ್ಲ !
ನೀ ನನ್ನ ಬಳಿ ಇಲ್ಲದಿರೆ ಏನು ?
ನಾನೊಂಟಿಯಲ್ಲ ,
ನಿನ್ನೊಂದಿಗೆ ಕಳೆದ
ಮಧುರ ನೆನಪುಗಳಿವೆ
ಗೆಳೆಯ ಸಾಕಲ್ಲ ?