Thursday, 2 January 2014

ಸುಜಾತಾ ಹೀಗಾ ಅಂತಾ ಯಾರಾದರೂ ಬಯ್ದುಕೊಳ್ಳಿ ಪರವಾಗಿಲ್ಲ ಹೇಳಿಬಿಡ್ತೇನೆ.
ನನಗೆ ಮುಸ್ಲಿಮ್ಸ್ ಕಂಡ್ರೆ ಭಯ. ಮಹಮ್ಮದ್ ಪೈಗಂಬರ್ ಯಾರು ? ಅವರಮ್ಮನ ಹೆಸರು ಏನು ? ....... ಈ ತರಹದ ಪ್ರಶ್ನೆಗಳ ಕೇಳಿ ಉತ್ತರಿಸದಿದ್ದವರನ್ನು ಗುಂಡಿಕ್ಕಿ ಸಾಯಿಸುವುದನ್ನು ಬೇರೆ ನೋಡಿ ದೇವರಾಣೆ ಎದೆ ನಡುಗಿತ್ತು. ವೈಟ್ ವಿಡೋ !!!!! ಅಬ್ಭಾ !!!!!
ಆದರೆ........
ಮೊನ್ನೆ ತೀವ್ರವಾಗಿ ಅನಾರೋಗ್ಯ. ಇದ್ದಕ್ಕಿದ್ದಂತೆ ಅನಿವಾರ್ಯವಾಗಿ ಹಾಸ್ಪಿಟಲ್ ಗೆ ಹೋಗಬೇಕಾಯ್ತು. ಅದೂ ಮುಸ್ಲಿಂ ಏರಿಯಾದಲ್ಲಿನ ಹಾಸ್ಪಿಟಲ್, ಅಲ್ಲಿನ ವೈದ್ಯರು ಸಹಾ ಮುಸ್ಲಿಂ  Zameeruddin Ahmed
ಚಕಾ ಚಕ್ ಸೀರಿಯಸ್ ಅಂದ್ರು ಆಪರೇಶನ್ ರೆಡಿ ಮಾಡಿಯೇ ಬಿಟ್ರು. ನನಗೋ ಮನಸಿಲ್ಲ 
ಆದರೂ .......
ವೈದ್ಯೋ ನಾರಾಯಣೋ ಹರಿ ಅಂತಾ ಸುಮ್ಮನೆ ಮಲಗಿದೆ.
ಯಾವುದಕ್ಕೂ ಭಯಪಡದ ನನ್ನ ನೋಡಿ ಅವರಿಗೆ ಅಚ್ಚರಿಯಾದರೆ .....
ಅವರು ಎಷ್ಟು ಚೆಂದ ಕನ್ನಡದಲ್ಲಿ ನನ್ನೊಡನೆ ಮಾತಾಡ್ತಿದಾರೆ ಅಂತಾ ನನಗೆ ಅಚ್ಚರಿ.
ಸಾಬ್ರು ಕನ್ನಡ ನಿರೀಕ್ಷಿಸಿದ್ದೆ, ಆದ್ರೆ ಶುದ್ದವಾಗಿ ಕನ್ನಡ ಮಾತಾಡುವ ಅವರು ನನಗೆ ಅಚ್ಚರಿ ಅನಿಸಿದ್ದ್ದು ಸುಳ್ಳಲ್ಲ.
ಆಪರೇಶನ್ ಶುರುವಾಗೋ ಮುನ್ನ - ನಿಮ್ ಕನ್ನಡ ನಂಗೆ ತುಂಬಾ ಇಷ್ಟ ಆಯ್ತು ಎಂದು ಮೆಚ್ಚುಗೆ ಸೂಚಿಸಿದೆ.
'ರೀ ಮ್ಯಾಡಂ ನಾನು ಕನ್ನಡ ಮೀಡಿಯಂ ನಲ್ಲೆ ಓದಿದ್ದುರೀ. ಸರ್ವಜ್ಞ ಗೊತ್ತು ನನಗೆ ಹೇಳಲಾ 'ಅಂದ್ರು .
ಆದರೇ, ನನಗೆ ಸ್ಪೈನಲ್ ಅನಸ್ತೇಶಿಯಾ ಕೊಟ್ಟಿದ್ದು , ಸೊ ಆಪರೇಶನ್ ಮುಗಿಯುವವರೆಗೂ ಕನ್ನಡ , ಕವನ , ಕಥೆ .........ಸಖತ್ ಹರಟೆ.
ನನ್ನ ಒಂದೇ ಒಂದು ಮೆಚ್ಚುಗೆಯ ಮಾತು ನಮ್ಮನ್ನು ಫ್ರೆಂಡ್ ಆಗಿಸಿಬಿಡ್ತು.
ಹಾಸ್ಪಿಟಲ್ ಅನಿಸಲಿಲ್ಲ, ಅಲ್ಲಿದಷ್ಟೂ ಸಮಯ ಒಳ್ಳೆಯ ಗೆಳೆಯನೊಂದಿಗೆ ಇರುವ ಕಂಫರ್ಟ್.
ಮನೆಗೆ ಬಂದ ಮೇಲೆಯೂ ಅವರೇ ಫೋನ್ ಮಾಡಿ ಆರೋಗ್ಯ ವಿಚಾರಿಸಿಕೊಂಡರು 
೧. ಮನುಷ್ಯರನ್ನು ಮನುಷ್ಯರನ್ನಾಗೆ ನೋಡಬೇಕು.
೨. ಒಂದು ಒಳ್ಳೆಯ ಮಾತು ಎಂತಹಾ ಪರಿಣಾಮ ಬೀರುತ್ತೆ !!!
ಇಷ್ಟು ಮಾತ್ರಾ ನಾ ಹೇಳಿದ್ದರ ಉದ್ದೇಶ.
ನಾನಿಲ್ಲದಿದ್ರೆ ಏನೂ ನಡೆಯೋಲ್ಲ ಅನ್ಕೊತೀನಿ. 
ನನ್ನವರಿಗೆ ಸ್ನಾನ ಮುಗಿಸಿ ಬಂದಾಗ ನಾನೇ ಟವೆಲ್ ಕೊಡಬೇಕು. 
ಮಗಳಿಗೆ ಜಡೆ ಹಾಕೋಕೆ ನಾನೇ ಬೇಕು.
ಮಗನಿಗೆ ಮಮ್ಮಮ್ ಮಾಡಿಸೋಕೆ ನನ್ನ ಅಗತ್ಯ ಉಂಟು .
ನನ್ನ ಸಂಸಾರದ ಸಣ್ಣ ಸಣ್ಣ ಅಗತ್ಯಗಳಿಗೂ ನಾನೇ ಬೇಕು.
ಅಡುಗೆ, ಮನೆಕೆಲಸ .......ಒಂದಾ ಎರಡಾ ??????
ನನ್ನದು ಬದಲಾಗದ ಎರಡು ಸ್ವಭಾಗಳಿವೆ.
೧.ಯಾವಾಗಲೂ ನೆಗೆಟಿವ್ ಯೋಚನೆಗಳೇ ನನಗೆ.
೨.ನಾನು ಮೊದಲೇ ಪ್ರತಿಯೊಂದನ್ನೂ ಪ್ಲಾನ್ ಮಾಡೋದು ಜಾಸ್ತಿ.
ನನ್ನಿಂದಾ ಯಾರಿಗೂ ತೊಂದರೆಯಾಗದಂತೆ ಸಾಕಷ್ಟು ಪ್ಲಾನ್ ಮಾಡಿದ್ದೇನೋ ಆಯ್ತು.
ಆದರೇ.........
ನಾನು ಸುಮಾರು ದಿನ ಮಲಗಿದೆ.
ಊಟ -ತಿಂಡಿ ಹೋಟೆಲ್ ನಿಂದಾ ಬಂತು.
ಮಗ ಏನೂ ಹಠವಿಲ್ಲದೆ ಓಡಾಡಿಕೊಂಡಿದ್ದ.
ಮಗಳು -ನನ್ನವನು ಮನೆಕೆಲಸ ಹಂಚಿಕೊಂಡರು.
ಮನೆ ನೀಟಾಗಿತ್ತು.
ಪ್ರತಿಯೊಬ್ರೂ ಅವರವರ ಕೆಲಸ ಅವ್ರೆ ಮಾಡ್ಕೊಂಡ್ರು.
ನನ್ನ ಅಗತ್ಯ ಇರಲೇಯಿಲ್ಲ 
ಪ್ರಪಂಚ ಏನೂ ಬದಲಾಗಿರಲಿಲ್ಲ 
ಸರಿ ನನಗೂ ಮಲಗೀ ಮಲಗೀ ಸಾಕೆನಿಸಿತು, ಎದ್ದೆ.
ಮಗ -ನಾನು ಏಳೋಲ್ಲ, ಸ್ಕೂಲ್ ಗೆ ನಾ ಹೋಗೊಲ್ಲ , ತಿಂಡಿ ನೀನೇ ತಿನ್ನಿಸು , ನಾ ನಿನ್ ಮಾತು ಕೇಳೋಲ್ಲ .....ಶುರು ಹಠ.
ನೀ ಎದ್ದಿದಿಯಲ್ಲಾ ಪೂಜೆ ನೀನೇ ಮಾಡಿಬಿಡೇ ನನಗೆ ಅರ್ಜೆಂಟ್ -ಮನೆಯವರ ಓಟ .
ಅಮ್ಮಾ ನನಗೆ ಲೇಟ್ ಆಯ್ತು ತಿಂಡಿ ಕೊಡು -ಮಗಳ ತರಾತುರಿ.
ನನಗೆ ಭಾರೀ ಗೊಂದಲ 
ಯಾಕೆ ಹೀಗೇ ???????
ಏನೂ ಇಲ್ಲದಿದ್ರೆ ಪರವಾಗಿಲ್ಲ, ಇದ್ದಿದ್ದನ್ನು ಕಳೆದುಕೊಂಡರೆ ಆಗುವ ಸಂಕಟ ನನಗೆ ಗೊತ್ತು.
ಅಮ್ಮನಿಗೆ ಹನ್ನೊಂದಕ್ಕೆ ಮದ್ವೆಯಾಗಿ ಹದಿನೆಂಟಕ್ಕೆ ಹುಟ್ಟಿದ ಅಣ್ಣ ಬೆಳ್ಳಗೆ ಸುಂದರ, ಮೊದಲನೆಯ ಮಗ ಸಹಜವಾಗೇ ಅಪಾರ ಪ್ರೀತಿ. ಅವನ ನಂತರ ೭ ವರ್ಚಕ್ಕೆ ಅಕ್ಕ, ಸುಂದರಿ. ಮಗ -ಮಗಳು ಸಾಕಿತ್ತು, ಆದ್ರೆ ನಾಹುಟ್ಟಿದ್ದು ೫ ವರ್ಷಗಳ ನಂತರ. ನಾ ಬಣ್ಣದಲ್ಲಿ ಕಪ್ಪು, ಮೊಂಡು ಮೂಗು, ಸ್ವಲ್ಪ ಡುಮ್ಮಗೆ. ತೀರಾ ಸೈಲೆಂಟ್. ನೀನು ನಮ್ಮ ಮಗುವಲ್ಲ ಎಂದು ನಗ್ತಿದ್ರು. ನಾ ಎಷ್ಟೋ ದಿನಗಳು ಹಾಗೇ ಅನ್ಕೊಂಡಿದ್ದೆ. ಯಾವುದನ್ನೂ ನನಗೆ ಬೇಕು ಎಂದು ಎಂದೂ ಕೇಳಲಿಲ್ಲ. ಆದರೇ.....
ನನ್ನನ್ನೂ ಸಹ ನನ್ನ ಹದಿನಾರರಲ್ಲಿ ಒಬ್ಬ ಪ್ರೀತಿಸಿದ  ಆಗ ಅವನಿಗೆ ಹದಿನೇಳು. ಮದುವೆಯೂ ಆಯ್ತು,ಮುದ್ದಾದ ಎರಡು ಮಕ್ಕಳೂ ಸಹ. ಭಗವಂತ ಸುಖ, ಸಂಪತ್ತು ......ಸಕಲವನ್ನೂ ನೀಡಿದ.
ನಾನೂ ಒಂದಿಷ್ಟು ಅರಳಿದೆ, ಬೀಗಿದೆ.
ನಾನು ಹದಿನಾರು ಸ್ವಲ್ಪ ಚೆಂದ ಆಗಿದ್ದೆ. ನಮ್ಮ ಹಳೆಯ ದಿನಗಳ ಫೋಟೋ ನೋಡಿ, ಅತ್ತಿಗೆ ಅದು ಹೆಂಗೆ ನಮ್ಮಣ್ಣನನ್ನು ಲವ್ ಮಾಡಿದರೋ ಎಂದು ನಗ್ತಾನೆ ನನ್ ಮೈದುನ. ಹೌದು ನನ್ನವ ನೋಡೋಕೆ ಚೆಂದ ಅನಿಸ್ತಿರಲಿಲ್ಲ. ಆದರೇ ತುಂಬಾ ಗಂಭೀರವಾದ ಮೆಲು ಮಾತಿನ ಒಳ್ಳೆಯ ಹುಡುಗ. ಬಹುಷಃ ನಾವಿಬ್ರೂ ನಮ್ಮ ರೂಪಕ್ಕೆ ಸೋತು ಒಂದಾಗಿರಲಿಲ್ಲ.
ಹೆಚ್ಚು ದಿನ ಚೆಂದ ಉಳಿಯಲಿಲ್ಲ. ತೀವ್ರ ಅನಾರೋಗ್ಯಕ್ಕೆ ಬಿದ್ದ ನಾನು, ನನ್ನ ಸುಂದರ ನಗು ೬೫ ಕೆ,ಜಿ ದೇಹದ ತೂಕ, ಉದ್ದನೆಯ ಜಡೆ, ಚೆಂದದ ಬಣ್ಣ, ಕೊನೆಗೆ ಬದುಕುವ ಆಸೆಯನ್ನೂ ಕಳೆದುಕೊಂಡಿದ್ದೆ. ತೊದಲುತ್ತಾ , ಕಷ್ಟಪಟ್ಟು ಏನು ಮಾತಾಡೋದು ಅಂತಾ ಮೂಕಳಾದೆ, ಬಹಳಷ್ಟು ಸಮಯ .....ನಿಷ್ಕ್ರಿಯಳಾಗಿ ಮಲಗಿದ್ದಲ್ಲೇ ಮಲಗಿದ್ದೆ ನಾನು.
ನಾಲ್ಕು ಗೋಡೆಗಳ ಮಧ್ಯೆ ಮೌನಕ್ಕೆ ಶರಣಾದೆ. ಆಡಿಕೊಳ್ಳುವ ಜನಗಳ ಎದುರಿಸಲು ಭಯ ಇರಬೇಕು. ಅಥ್ವಾ ಎಲ್ಲವನ್ನೂ ಕಳೆದುಕೊಂಡ ನೋವು-ನಿರಾಸೆ ಇರಬಹುದು, ಕುಗ್ಗಿದೆ.
ಕೊನೆಗೊಂದು ದಿನ ಇನ್ನು ಏಳೋಕೆ ಸಾಧ್ಯವೇ ಇಲ್ಲ ಎಂದಮೇಲೂ ಎದ್ದು ಮಗುವಿನ ಹಾಗೆ ಹೆಜ್ಜೆಯಿಡುವುದು ಕಲಿತೆ, ಕುಂಟುತ್ತಾ ನಡೆದೆ. ಅಯ್ಯೋ ಪಾಪ ಎಂದವರ ಮರುಕ ನನಗೆ ಬೇಡವಾಗಿತ್ತು. ಸಹಾಯ ಮಾಡುವವರಿದ್ರೆ ಅವಲಂಬನೆ ಜಾಸ್ತಿ, ಅಸಾಹಾಯಕರಾಗ್ತೇವ.
ದಿನ ಕಳೀತಾ ........
ಜೀವನದಲ್ಲಿ ಕಲಿತೆ.
"ಯಾವುದೂ ಶಾಶ್ವತ ಅಲ್ಲ , ಯಾವುದೂ ನಮ್ಮದಲ್ಲ".
ದೈಹಿಕ -ಮಾನಸಿಕ ನೋವುಗಳ ಸಾಕಷ್ಟು ಉಂಡ ನನಗೆ ನೋವಿನಲ್ಲಿರುವವರಿಗೆ ಸಹಾಯ, ಸಾಂತ್ವನ ನೀಡುವ ಧೈರ್ಯ ಬಂತು.
ಯಾರಾದರೂ ಅವ್ಳು ಚೆನ್ನಾಗಿದಾಳೆ ಅಂದ್ರೆ ನಗು ಬರುತ್ತೆ, ದೇಹದ ಸೌಂದರ್ಯ ಮಾಸೋದು ಎಷ್ಟ್ ಹೊತ್ತು ? ಇದು ಶಾಶ್ವತ ಅಲ್ಲ ಅಂತಾ ನಂಗೊತ್ತಿದೆ ಎನ್ನಬೇಕು ಅನಿಸುತ್ತೆ.
ಕಳೆದುಕೊಂಡಿದ್ರಿಂದಾ ಪಾಠ ಕಲಿತು....
ಅಂದು ಕಳೆದುಕೊಂಡಿದ್ದನ್ನು ಇಂದು ಮರಳಿ ಪಡೆದಿದ್ದೇನೆ. ಜನಗಳ ಜೊತೆ ಬೆರೆತು ಹೊಸದಾಗಿ ಪಡೆದುಕೊಂಡಿರೋದು 'ಆತ್ಮವಿಶ್ವಾಸ'.
"ನಾನು ಕುರೂಪಿ ನಿಜಾ ಆದರೇ ಮನಸ್ಸು ಸುಂದರವಾಗಿದೆ".
ಅಂತರಾಳದ ಸೌಂದರ್ಯವೇ ನಿಜವಾದ ಸೌಂದರ್ಯ.

ಮೊನ್ನೆ ರಾತ್ರಿ -
ನಾನು ನನ್ನ ದೊಡ್ಡ ಫ್ಯಾಮಿಲಿ ಜೊತೆ ರೆಸಾರ್ಟ್ ನಲ್ಲಿ.
ಅಬ್ಬರದ ಸಂಗೀತ .....ಓಲಾಡುವ ಜನಗಳು .
ಎಷ್ಟ್ ಹೊತ್ತು ನೋಡೋಕೆ ಸಾಧ್ಯ ?
ನೀರಿಗಿಳಿದ ಮೇಲೆ ಚಳಿಯೇನು? ಮಳೆಯೇನು?
ಸರೀ ದಬಾಲ್ ಗುಚ್ಚಿ ಶುರುವಾಯ್ತು ನೋಡಿ ......
ನನ್ ಕುಟುಂಬದ ಸದಸ್ಯರ, ಸ್ನೇಹಿತರ, ಮಕ್ಕಳ ನಡುವೆ ನಾನೂ....
ಹಾಡೂ ಸಂತೋಷಕೇ ...ಎಂದು ಕಿರುಚುತ್ತಾ ಕುಣಿದಿದ್ದೂ ಆಯ್ತು.
ಕುಲದಲ್ಲಿ ಮೇಲೆ ಯಾವುದೋ ಹುಚ್ಚಪ್ಪಾ .....ಈ ತರಹದ ಹಾಡಿಗೆ ಹೆಜ್ಜೆ ಹಾಕೋದು ಮಜಾ ಅನಿಸುತ್ತೆ ಕೌಂಟ್ ಡೌನ್ ಶುರುವಾಯ್ತು ....ಹ್ಯಾಪ್ಪಿ ನ್ಯೂ ಇಯರ್ ಎಂದು ಎಲ್ಲರನ್ನೂ ತಬ್ಬಿ ವಿಶ್ ಮಾಡಿದ್ದಾಯ್ತು .
ನಂತರ .......ಶುರುವಾಯ್ತು.....ಶವದ ಎದುರು ತಮಟೆ ಬಾರಿಸ್ತಾರಲ್ಲಾ ಆ ಮ್ಯೂಸಿಕ್ !!!!ಹೆಣ ಎಲ್ಲಿದೆ ಅಂದೇ ನನ್ ಫ್ರೆಂಡ್ ಗೆ. ೨೦೧೩ ಮುಗಿತಲ್ಲಾ ಅಂದ್ರು !!!! ಎಲ್ಲಾ ಸಿಕ್ಕಾಪಟ್ಟೆ ಕುಣಿತಿದ್ದಾರೆ.
ನಾ ಹಿಂದೆ ಸರಿದೆ:(
ಮೊನ್ನೆತಾನೇ ನನ್ನ ಮನೆಯ ಎದ್ರಿಗೆ ಇರೋ ಒಬ್ಬ ಕಾಲೇಜ್ ಹುಡುಗ ಮಹಡಿಯಿಂದಾ ಬಿದ್ದು ತೀರಿಕೊಂಡ. ಆ ದಿನವಿಡೀ ಜನಜಂಗುಳಿ, ರಸ್ತೆಯುದ್ದಕ್ಕೂ ಹೂವುಗಳು, ಪಟಾಕಿಯ ಸದ್ದು , ಶವದ ಮೆರವಣಿಗೆ ಮೇಲೇನೆ ನಿಂತ್ಕೊಂಡು ನೋಡಲು ಬಹಳಷ್ಟು ಜನ ನಮ್ಮನೆಯ ಮೆಟ್ಟಿಲು ಹತ್ತಿದರು.ಅವರೊಂದಿಗೆ ನನ್ನದೂ ಸಾವಿನ ನೋಟ. ಶವದ ಎದುರು ತಮಟೆಯ ಸದ್ದು ಕೇಳಿದಾಕ್ಷಣ ನನಗೆ ಒಂಥರಾ ಅನಿಸೋಕೆ ಶುರುವಾಯ್ತು. ಇದು ನನ್ನದೇ ಅಂತಿಮ ಯಾತ್ರೆಯೇನೋ ಅನಿಸಿಬಿಡ್ತು. ಓಡಿ ಬಂದು ಅಳ್ತಾ ನನ್ ಫ್ರೆಂಡ್ ಒಬ್ರಿಗೆ ಪೋನ್ ಮಾಡಿದೆ. ನನ್ನ ರಸ್ತೆಯಲ್ಲಿರೋ ಜನ ಕಣ್ಮರೆಯಾಗಿದ್ದು ಇದು ೫ ನೆಯವರು. ನಾನೂ ಡಾಕ್ಟರ್ ಹೇಳಿದ ಪ್ರಕಾರ ಸತ್ತಿದ್ರೆ ಈಗಾಗಲೇ ೫ ವರ್ಷ ಆಗ್ತಿತ್ತು  ನಾ ಆಚೆ ಹೊರಟರೆ ಜನ ಇವ್ಳು ಬದುಕಿದ್ದಾಳಲ್ಲಾ ? ಹೇಗಿದ್ಲು ಹೇಗಾದಳು ಅಂತಾ ನನ್ನೇ ನೋಡ್ತಾರೆನೋ ಅನಿಸುತ್ತೆ. ನನಗೆ ಸಾವು, ಶವ, ಅಳು ಏನೂ ಹೊಸತಲ್ಲ. ವಿಚಿತ್ರ ಅಂದ್ರೆ .....
ನಾ ಬೆಂಗಳೂರಿಗೆ ಬಂದದ್ದೆ ವಿಲ್ಸನ್ ಗಾರ್ಡೆನ್ ನಲ್ಲಿರೋ ಮನೆಗೆ. ಅದು ಸ್ಮಶಾನದ ಎದುರಿನ ರಸ್ತೆ.
ಸ್ವಲ್ಪ ಸಮಯದ ಬಳಿಕ ಬಿಳೆಕಹಳ್ಳಿಯಲ್ಲಿ ಮನೆ ಮಾಡಿದ್ದು ಸ್ಮಶಾನದ ತುಸುವೇ ದೂರದಲ್ಲಿ.
ಈಗಲೂ ನಮ್ಮ ಮನೆ ಇರೋದು ಕೆರೆಯ ಹತ್ತಿರ, ಇಲ್ಲೇ ಎದುರುಗಡೆ ಸ್ಮಶಾನ ಉಂಟು.
ಇಷ್ಟೇ ಅಲ್ಲ, ಊರಲ್ಲಿ ನಮ್ಮ ಅಮ್ಮನ ಮನೆ ಇರೋದು ಸಹಾ ಸ್ಮಶಾನ ಕ್ಕೆ ಹೋಗುವ ದಾರಿಯ ಪ್ರಾರಂಭದಲ್ಲಿ.
ಬಹುಷಃ ಕೊನೆಯ ಯಾತ್ರೆಗಳನ್ನು ಬೇಡಾ ಅಂದ್ರೂ ಬೇಕಾದಷ್ಟು ನೋಡಿಬಿಟ್ಟಿದ್ದೇನೆ. ಆದರೇ ..... ಶವದ ಮುಂದೆ ಆ ತಮಟೆ ಬಡಿಯೋ ಸದ್ದು ಇದೆಯಲ್ಲಾ ಏನೋ ಒಂಥರಾ ........ದೇವರಾಣೆ ಭಯ ಅಂತಲ್ಲ, ಆದ್ರೆ ಏನೂ ಅಂತಾ ಹೇಳೋಕೆ ಆಗ್ತಿಲ್ಲ ಏನೋ 
Like ·  · Promote ·