Friday, 8 March 2013

ಆಧ್ಯಾತ್ಮ ---

ಆಧ್ಯಾತ್ಮ ಮನುಷ್ಯನನ್ನು ಸರ್ವಶಕ್ತಭಲಾಡ್ಯನನ್ನಾಗಿ ಮಾಡುತ್ತದೆ,,,,

ಏನಿದು ಸುಜಾತಾ ಹೀಗೆ ಹೇಳ್ತಿದಾಳೆ ! ಅನ್ಕೋಬೇಡಿ. ನನ್ನ ಅನುಭವವನ್ನು ಮಾತ್ರಾ ನಾ ಹೇಳೋದು. ವಯಸ್ಸಾಯ್ತು ಅಂತಲ್ಲಾ. ನಾಗರ ಹಾವು ತನ್ನ ಪೊರೆಯನ್ನು ಕಳಚುವಂತೆ ನಾವು ಕೂಡ ದಿನದಿನಕ್ಕೆ ನಮ್ಮ ಭಾವನೆಗಳ ಪೊರೆಯನ್ನು ಕಳಚುತ್ತಲೇ ಇರುತ್ತೇವೆ.ಹೊಸ ಹೊಸ ಭಾವನೆ ಹೊಸ ಹೊಸ ಮಾರ್ಗಗಳನ್ನು ಹೊಸ ಹೊಸ ಪಾಠ ವನ್ನು ಕಲಿಯುತ್ತಲೇ ಇರುತ್ತೇವ. ನಮ್ಮ ಮೆದುಳಿಗೆ ದೇಹದಂತೆ ವಯಸ್ಸು ಎನ್ನುವುದು ಇಲ್ಲ.ಅದಕ್ಕೆ ಅದು ಹೊಸದಾಗಿಯೇ ಇರುತ್ತದ. ಅದು ಭಾವನೆಗಳಿಗೆ ಜ್ಞಾನಕ್ಕೆ ಕಲಿಕೆಗೆ ಹೊಸ ಹೊಸ ಆಲೋಚನೆಗಳಿಗೆ ಆವಿಷ್ಕಾರಕ್ಕೆ ಹುಡುಕುವಿಕೆಗೆ ಎಂದೆಂದೂ ತೆರೆದುಕೊಳ್ಳುತ್ತಲೇ ಇರುತ್ತದೆ.

No comments:

Post a Comment