Friday, 22 February 2013


ಇದು ನಾನು ಮತ್ತು ಬಿ.ವಿ.ಭಾರತಿ ಸೇರಿ ಹೊಸೆದ ಸಾಲುಗಳು .ಫ್ರೆಂಡ್ಸ್ ನನ್ನದೊಂದು ವಿನೂತನ ಪ್ರಯತ್ನ 
ದಿನಕರನ ಕಿರಣ ಧರಣಿಗೆ ಮುತ್ತನಿತ್ತು
ಧರಣಿ ಚೆಲುವೆಗೆ ದಿನವೆಲ್ಲಾ ರೋಮಾಂಚನ .
ಅದಕೂ ಮೊದಲು ಇಳೆಗೆ ಇಬ್ಬನಿಯ
ಸಹಜ ಸ್ನಿಗ್ಧ ಸಿಂಚನ .
ರಾತ್ರಿಯೆಲ್ಲ ಚಂದ್ರ ಮುತ್ತಿಕ್ಕಿದ್ದ
ಮತ್ತು ಇಳಿವ ಮುನ್ನ
ಮತ್ತೆ ದಿನಕರನ ಧಾಳಿಗೆ ತುತ್ತಾದರೂ
ಇನಿತೂ ಸುಸ್ತಿಲ್ಲವಲ್ಲ ಇವಳಿಗೆ !!
ಚಂದ್ರಮ ಮುತ್ತಿಗೆ ತಂಪಾದ ಚೆಲುವೆ ಬುವಿ
ಬಿಸಿಯಾಗಿಸಿದ ಅವಳ ಹಗಲಿನಲಿ ರವಿ
ಮುತ್ತಿಗೆ ತಂಪಾಗಲು ಸಾಧ್ಯವೇ?
ಉಹೂ ! ಆವೇಗದ ಜ್ವರವಿಳಿದು
ಮೈ ಮಾತ್ರ ಶೀತಲ
ತುಟಿ ಕೆಂಡವಾಗಿದ್ದು ನೀ ಕಾಣಲಿಲ್ಲ?!
ಸುಡುವ ಧಾತ್ರಿಯ ತಣಿಸಲು ವರುಣ ಕೃಪೆ ಸುರಿಯೆ
ಬಸಿರು ನೆಲ ,ಮೊಳಕೆ ಶುರು ,ಎಲ್ಲೆಲ್ಲೂ ಹಸಿರು .
ಹಡೆದ ಸಮೃದ್ಧೆಯ ಸೊಬಗಿಗೆ
ಅವಾಕ್ಕಾದ ಅವರಿಬ್ಬರಿಗೆ
ಈಗ ಜಗಳವಂತೆ ...
ಇದಕೆ ಕಾರಣ ನಾನು ನಾನೆಂದು !

No comments:

Post a Comment