Friday, 22 February 2013


‎"ವ್ಯಸನ" ಎನ್ನುವುದು ಮನಸ್ಸಿನ ಒಂದು ವಿಕಲ್ಪ.ಯಾವುದೇ ವ್ಯಸನಕ್ಕೆ ಬಲಿಯಾದ ವ್ಯಕ್ತಿ,ತಾನು ವ್ಯಸನಕ್ಕೆ ಬಲಿಯಾಗಿದ್ದೇನೆ,ಎಂದು ಅರಿವಾದೊಡನೆ ಖಿನ್ನನಾಗುತ್ತಾನೆ.ಹಾಗೂ ಅದನ್ನು ಬಿಡಲು ಯತ್ನಿಸುತ್ತಾನೆ.ಇಲ್ಲಿ ವಿಶೇಷವೆಂದರೆ ವ್ಯಸನಕ್ಕೆ ಬಲಿಯಾಗುವ ಮೊದಲಿನ ಮಾನಸಿಕ ಸ್ಥಿತಿ, ಅದು ಖಿನ್ನತೆಯಾಗಿರಬಹುದು, ನಿರಾಶೆಯಾಗಿರಬಹುದು, ಸುಖ ಅಥವ ದುಃಖ ಆಗಿರಬಹುದು. ಅದೇನೇ ಆಗಿದ್ದರೂ, ಒಂದು ಸಾರಿ ಯಾವುದೇ ವ್ಯಸನಕ್ಕೆ ಒಳಗಾದ ವ್ಯಕ್ತಿ ಅದರಿಂದಾ ಹೊರಬರಲು ಹಾಗೂ ಆಗದಿದ್ದಾಗ ಮತ್ತೆ ಅದೇ ವ್ಯಸನದಿಂದಾ ಚಿಂತಿತ ಹಾಗೂ ವ್ಯಕುಲನಾಗುತ್ತಾ ಹೋಗುತ್ತಾನೆ. ಇದು ಒಂದು ವಿಷದ ಚಕ್ರದಂತೆ.ಇಲ್ಲಿ ವ್ಯಸನಕ್ಕೆ ಮಾದಕ ವಸ್ತುಬೇಕು ಎಂದು ಬಯಸುವವರು ಯಾರು?ಹಾಗೂ ಅದರಿಂದಾ ಹೊರಬರಲು ಯತ್ನಿಸುವವರು ಯಾರು? ಎಂಬ ಪ್ರಶ್ನೆ ಉಧ್ಭವವಾಗುತ್ತದೆ.ಎರಡೂ ನಮ್ಮಒಳಗಿನ ಮನಸ್ಸೇ, ಎರಡು ರೀತಿಯ ದ್ವಂದ್ವ ವ್ಯಕ್ತಿತ್ವಗಳಾಗಿರುತ್ತವೆ.ಇದು ಒಂದೇ ವ್ಯಕ್ತಿಯ ಮನಸ್ಸಿನ ಅನೇಕ ಸ್ಥರಗಳಲ್ಲಿ ಒಂದಾಗಿರುತ್ತದೆ. ಹಾಗಾಗಿ ವ್ಯಸನ ಅದರಿಂದಾ ಉಂಟಾಗುವ ಮಾನಸಿಕ ಹಾಗೂ ದೈಹಿಕ ಪರಿಣಾಮ,ಮತ್ತೆ ಮತ್ತೆ ಅದೇ ವ್ಯಸನದ ಸುತ್ತಾ ನಮ್ಮ ಮನಸ್ಸನ್ನು ಸೆಳೆಯಲು ಪ್ರೇರೇಪಿಸುತ್ತದೆ.ಇದಕ್ಕೆ ನಮ್ಮನ್ನು ನಾವೇ ಕೇಳಿಕೊಂಡಾಗ ವ್ಯಸನಕ್ಕಾಗಿ ಹಂಬಲಿಸುತ್ತಿರುವವರು ಯಾರು? ಹಾಗೂ ಅದರಿಂದ ಮುಕ್ತವಾಗಬೇಕೂ ಎಂದು ಹಂಬಲಿಸುತ್ತಿರುವವರು ಯಾರು?ವಾಸ್ಥವವಾಗಿ ಎರಡೂ ನಮ್ಮಲ್ಲಿಯ ಮಾನಸಿಕ ಸ್ಥರಗಳೇ 
ಆಗಿರುತ್ತವೆ.ಇನ್ನು ಮಾನಸಿಕ ಸ್ಥಿತಿಯನ್ನು ಸರಿ ಮಾಡಲು ಯಾವುದೋ ಒಂದು ಮಾದಕ ವಸ್ತುಗಳನ್ನು ಸೇವಿಸಿದಾಗ, ಅದು ಭೌತಿಕ ಶರೀರದ ಮೇಲೆ ಅಪಾರವಾದ ಪರಿಣಾಮ ಉಂಟುಮಾಡುತ್ತದೆ.ಭೌತಿಕ ಶರೀರ ನಮ್ಮದಲ್ಲ. ಅದರ ಮೇಲೆ ನಮ್ಮ ಹಕ್ಕು ಇರುವುದೇ ಇಲ್ಲ. ಅದನ್ನು ನಾವು ಬಾಡಿಗೆಗೆ ಪದೆದುಕೊಂದಿರುತ್ತೇವೆ. ಅದನ್ನು ಹಾಳು ಮಾಡಲು ನಮಗೆ ಹಕ್ಕೆ ಇಲ್ಲ. ಒಂದು ವೇಳೆ ಹಾಳು ಮಾಡಿದರೆ ಅದು ಪ್ರಕೃತಿಗೆ ವಿರುದ್ಧ, ಎಂಬ ಪ್ರಜ್ಞೆ ನಮಗೆ ಇದ್ದರೆ,ಬಹಳಷ್ಟು ದೇಹದ ಮೇಲಿನ ದಬ್ಬಾಳಿಕೆಯನ್ನು ನಾವು ಸಾಕಷ್ಟು ಕಡಿಮೆ ಮಾಡಬಹುದಾಗಿದೆ. ದೇಹ ನಮ್ಮದಲ್ಲ ಎಂದರೆ ಅರ್ಥವೇನೂ?ಎಂದು ಪ್ರಶ್ನೆ ಮಾಡುವವರು, ಯಾವುದೇ ಅನೈಚ್ಚಿಕ ಸ್ನಾಯು ನಮ್ಮ ವಶದಲ್ಲಿ ಇಲ್ಲ, ಉದಾಹರಣೆಗೆ: ನಮ್ಮ ಹೃದಯದ ಬಡಿತ ನಮ್ಮ ವಶದಲ್ಲಿ ಇಲ್ಲ ಎಂದು ಅರ್ಥ ಮಾಡಿಕೊಂಡರೆ ಗೊತ್ತಾಗುತ್ತದೆ, ಅದು ನಮ್ಮದಲ್ಲ ಅದರ
ನಿಯಂತ್ರಣ ಇನ್ಯಾವುದೋ ಶಕ್ತಿಯಲ್ಲಿ ಅಡಕವಾಗಿದೆ ಎನ್ನುವುದು ಅಲ್ಲವೇ?. ಈ ಜನ್ಮ ಎನ್ನುವುದು ಯಾಕಾಗಿ ಆಯಿತು? ನಾನು ಯಾಕಾಗಿ ಹುಟ್ಟಿದ್ದೇನೆ?ನನ್ನ ಈ ಜನ್ಮದ ಸ್ಪಷ್ಟ ಉದ್ದೇಶ ಏನೂ?ಎನ್ನುವುದು ನಮಗೆ ತಿಳಿಯದೆ ಇದ್ದಾಗ, ನಮಗೆ ಉಂಟಾಗುವ ಪರಿಸ್ಥಿತಿಗಳೂ ಕೂಡ ,ನಮಗೆ ತಿಳಿಯದೆಯೇ ಉಂಟಾದವೂ, ಎನ್ನುವ ಪಾರಮಾರ್ಥಿಕವಾದ ಯೋಚನೆ ಇಲ್ಲದಿದ್ದರೆ, ಸಂದರ್ಭಗಳ ಒತ್ತಡಗಳಿಂದಾಗಿ ಅಥವ ಇನ್ಯಾವುದೇ ಮಾನಸಿಕ ಪರಿಸ್ಥಿಗಳಿಗಾಗಿ ನಾವು ಚಿಂತಿಸಿ, ಖಿನ್ನರಾಗಿ, ಇಂಥಹ ವ್ಯಸನಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತವೆ. ಅದರ ಬದಲು, ಹೇಗೆ ನಾವು ನಮ್ಮ ಹುಟ್ಟಿನ ರಹಸ್ಯ ತಿಳಿದಿಲ್ಲವೋ, ಹಾಗೆಯೇ ಇಲ್ಲಿ ನಡೆಯುತ್ತಿರುವ ಘಟನೆಗಳಿಗೂ ಕೂಡ ನಾವೇ ಕಾರಣಕರ್ಥರು ಎಂದು ಅನ್ನಿಸಿದರೂ, ಅದಕ್ಕಾಗಿ ನಾವು ನಿಯೋಜಿಸಲ್ಪಟ್ಟಿದ್ದೇವೆ ಎನ್ನುವ ಸ್ಥಿತ ಪ್ರಜ್ಞೆಯನ್ನು ಹೊಂದಬೇಕಾಗುತ್ತದೆ. ಇಲ್ಲವಾದಲ್ಲಿ, ಉಂಟಾದ ಪರಿಸ್ಥಿತಿಯಿಂದಾ, ಮನಸ್ಸಿನ ಮೇಲೆ ಆಗುವ ಪರಿಣಾಮದಿಂದಾ ಅದರ ಉಪಶಮನಕ್ಕಾಗಿ, ವ್ಯಸನಕ್ಕೆ, ಮಾದಕ ವಸ್ತುಗಳಿಗೆ, ಬಲಿಯಾಗಬೇಕಾಗುತ್ತದೆ.ನಿದ್ರೆ ಬರುವುದಿಲ್ಲ, ಎಂದು ಕೆಲವರು ವ್ಯಸನಕ್ಕೆ ಬಲಿಯಾಗುತ್ತಾರೆ. ಆದರೆ ನಿಜವಾದ ನಿದ್ರೆ ಅಂದರೆ ಏನೂ? ಅದರಿಂದಾ ಏನಾಗಬೇಕಾಗಿದೆ? ಎನ್ನುವುದು ತಿಳಿಯುಯುವುದು ಅತೀ ಅವಶ್ಯಕ. ನಿದ್ರೆ ಎನ್ನುವುದು ನಮ್ಮ ಇಂದ್ರಿಯಗಳ ಪರಿವೆ ಇಲ್ಲದಂತೆ ಮರೆಸಿ ಸ್ನಾಯುಗಳ ಬಿಗಿತವನ್ನು ಸಡಿಲ ಗೊಳಿಸಿ ಅದಕ್ಕೆ ವಿಶ್ರಾಂತಿಯನ್ನು ಕೊಡುವ ಒಂದು ಪ್ರಕ್ರಿಯೆ ಅಷ್ಟೇ ಅದಕ್ಕಾಗಿ ದೇಹ ನಿದ್ರೆ ಬರಿಸುತ್ತದೆ. ಆದರೆ ಅದರಜೋತೆಯಲ್ಲಿ ಯೋಚನೆಗಳೂ ಕೂಡ ಇರುವುದಿಲ್ಲ, ಎಂಬ ತಪ್ಪು ತಿಳುವಳಿಕೆ ಇದ್ದಾಗ ಮಾತ್ರಾ, ಜನ ನಿದ್ರೆ ಬರದೆ ಇದ್ದರೆ ವಿಶ್ರಾಂತಿಯೇ ಸಿಗುವುದಿಲ್ಲ, ಎಂಬ ತಪ್ಪು ತಿಳುವಳಿಕೆಗೆ ಒಳಗಾಗುತ್ತಾರೆ.ವಾಸ್ಥವಿಕವಾಗಿ ನಿದ್ರೆ ಬರದಿದ್ದರೂ, ದೇಹದ ಸ್ನಾಯುಗಳಿಗೆ ವಿಶ್ರಾಂತಿ ಸಿಗುವಂತೆ ಮಲಗಿದರೆ ಯೋಚನೆಗಳು ಮರಯದೆ ಇದ್ದರೂ, ದೇಹಕ್ಕೆ ವಿಶ್ರಾಂತಿ ಸಿಕ್ಕೆ ಸಿಗುತ್ತದೆ. ನಿದ್ರೆಯ ಉದ್ದೇಶವೇ ಅದು.ನಿದ್ರೆಯಲ್ಲಿ ಯೋಚನೆಗಳು ಇರುವುದೇ ಇಲ್ಲ, ಎಂದು ತಿಳಿದುಕೊಂಡಿದ್ದರೆ, ಅದು ತಪ್ಪು.ಏಕೆಂದರೆ, ಯೋಚನೆಗಳಿಗೆ ವಿಶ್ರಾಂತಿ ಅಥವ ನಿಲುಗಡೆ ಎನ್ನುವುದು ಇಲ್ಲವೇ ಇಲ್ಲ. ನಾವು ಮಲಗಿದಾಗ ಕೂಡ ಯೋಚನೆಗಳು ಇದ್ದೆ ಇರುತ್ತವೆ. ಅದೇ ನಮ್ಮ ನಿದ್ದೆಯಲ್ಲಿ ಕನಸಾಗಿ ಪರಿವರ್ತನೆ ಆಗಲು ಸಾದ್ಯ.ಯೋಚನೆಗಳ ಅರಿವು ಇಲ್ಲದಿರಬಹುದು, ಆದರೆ, ಯೋಚನೆಗಳನ್ನು ನಿದ್ದೆಯಲ್ಲಾಗಲೀ, ಜಾಗೃತಾವಸ್ಥೆಯಲ್ಲಾಗಲೀ, ನಿಲ್ಲಿಸಲು ಆಗುವುದೇ ಇಲ್ಲ.ಯೋಚನೆ ಇದೆ, ಅದಕ್ಕಾಗಿಯೆ ಮಾದಕ ವಸ್ತುವಿಗೆ ಶರಣು ಹೋಗುತ್ತಿದ್ದೇವೆ, ಎಂದು ಅಂದು ಕೊಳ್ಳುವವರು, ಇದನ್ನೂ ಕೂಡ ಯೋಚನೆ ಮಾಡುವ ಅವಶ್ಯಕತೆ ಇದೆ.ನಾವು ಯಾವುದೇ ಮಾದಕ ವಸ್ತುಗಳನ್ನು ತೆಗೆದುಕೊಂಡರೂ ಯೋಚನೆ ನಮ್ಮ ಅರಿವಿಗೆ ಬರದಂತೆ ತಾತ್ಕಾಲಿಕವಾಗಿ ತಡೆಯಬಹುದೇ ವಿನಃ ,ಯೋಚನೆಯನ್ನು ನಿಲ್ಲಿಸಲು ಆಗುವುದಿಲ್ಲ. ಅದು ಕೇವಲ ಭ್ರಮೆ ಮಾತ್ರಾ.ಆದರೆ ಯೋಚನೆಗಳಿಂದಾ ತಪ್ಪಿಸಿಕೊಳ್ಳುವ ಸಲುವಾಗಿ ತೆಗೆದು ಕೊಳ್ಳುವ ಮಾದಕ ವಸ್ತುಗಳಿಂದಾ ಆಗುವ ದೇಹದ ಮೇಲಿನ ಕೆಟ್ಟ ಪರಿಣಾಮಕ್ಕೆ ನೇರವಾಗಿ ನಾವೇ ಹೊಣೆಯಾಗಿರುತ್ತೇವೆ.ಅದು ನಮ್ಮ ಪರಿಸ್ತಿಯನ್ನು ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಇನ್ನೂ ಹಾಳುಮಾಡಿ,ಹತಾಶೆಯ ಕೊಪಕ್ಕೆ ನೂಕಿ, ಅಂಧಕಾರವನ್ನು ಜೀವನದಲ್ಲಿ ತಂದೊಡ್ಡುತ್ತದೆ.

No comments:

Post a Comment