Friday, 22 February 2013

4.ಹಸಿರೊಣಗಿ ಕೊಂಬೆ 
ಕಳಚುವ ಸ್ಥಿತಿಯಲ್ಲಿ ಎಲೆ -
-ಯುದುರಿದ ,ಭಾವನೆಗಳ 
ಕಳಚಿಕೊಂಡನ್ತಿರುವ ಒಣ ಮರ 
ನಾನಾಗೆ ......
ಮಣ್ಣಿಂದ ಬಿಡುಗಡೆ
ಹೊಂದಲಾರದೇ ..
ನಿಟ್ಟುಸಿರ ಗಯ್ಯಬಲ್ಲೆನಷ್ಟೇ ....
ರವಿಯ ಪ್ರೇಮದ ಹೊಂಗಿರಣಗಳು
ಮೈಮೇಲೆ ಚೆಲ್ಲಾಟವಾಡುತಿರಲು
ಪುಳಕಗೊಳ್ಳದ
ವಸಂತದಿ ತಂಪೆರೆವ ಕೋಗಿಲೆ -
-ಗೆ ತಾಣವಾಗದೆ
ಆ ಬಾವ ಜೀವಿಯ ಭಾವುಕತೆಗೆ
ಸ್ಪಂದಿಸಲಾಗದೆ
ಯವ್ವನದ ಗರಿ ಕಳಚಿದ ಮುದಿಹಕ್ಕಿಯ
ಹಳೆಯ ನೆನಪಿನಂತೆ
ಗತ ವೈಭವದ ನೆನೆಕೆಗಳ ಮೆಲುಕು ,
ನಿಂತಿರುವೆ ....
ನೀರೂಯಿದೆ.....
ನೀರೂಯಿದೆ.....
ಚಿಗುರಲಾರೆ ಮತ್ತೆ
ಹಸಿರು ಬಿರಿದು ಬಾನೆತ್ತರಕೆ
ಬೆಳೆಯುವಾಸೆಯಿದ್ದರೂ ,
ಪಕ್ಕದಲ್ಲಿನ ಕಿರುಸಸಿಗೆ
ಸ್ಥಳ ತೆರವು ಮಾಡುವ ತವಕದಿ
ಸಾವಿನ ನಿರೀಕ್ಷೆಯ ,
ಬದುಕಲಾರದ ಬಡ ಮುದುಕನ ತೆರದಿ
ಆಗಸವ ದಿಟ್ಟಿಸುತ್ತಿರುವೆ ,
ಮಳೆಗಾಗಿ ಅಲ್ಲ......
ಜೀವಿತದ ಕೊನೆಯ
ಕ್ಷಣಕ್ಕಾಗಿ .

No comments:

Post a Comment