Saturday, 9 February 2013

ಪ್ರೀತಿಯ  ಅಕ್ಕಾ  ,
ನನ್ನ  ಲೆಟರ್  ನೋಡಿದಾಗ  ಎದೆ  ಡವ ಡವ ಅಂತಾ ?ನಿನಗೆ ಮಾತ್ರಾ ಅಲ್ಲ ,ಜೀವವಿರೋ  ಎಲ್ಲರಿಗೂ  ಬಡಿದುಕೊಳ್ಳುತ್ತೆ .ನನ್ನ  ಲೆಟರ್  ನೋಡದೆ  ಇರುವಾಗಲೂ  ಬಡಿಯುತ್ತಿರುತ್ತೆ .ಬೇಕಾದ್ರೆ  ಪರೀಕ್ಷೆ  ಮಾಡ್ಕೋ .
ಹೌದಕ್ಕಾ , ಆಶಾಳ  ವಿಷಯದಲ್ಲಿ  ನಾನು  ತೀರಾ  ಅಪ್ಸೆಟ್  ಆಗ್ತೀನಿ ,ಹಾಗಾಗಬಾರದು  ಅಂತಾ ಎಷ್ಟೇ  ಪ್ರಯತ್ನಪಟ್ರೂ  ,ನನ್ನ ಮನಸನ್ನ  ಕಂಟ್ರೋಲ್ ನಲ್ಲಿ  ಇಟ್ಟುಕೊಳ್ಳಲು   ಆಗ್ತಿಲ್ಲ .But  any how it is a challenge to me  and  my personality . ಆಶಾ ನೇ  ದುಃಖಕ್ಕೆ  ಮೂಲ  ಅಲ್ಲ  ಸುಖಕ್ಕೆ  ಮೂಲ ಅನ್ನೋದನ್ನು  ಪ್ರೂವ್ ಮಾಡ್ತೇನೆ .
ನನ್ನ  ತಕ್ಕ ಆಯ್ಕೆ   ಅವಳಲ್ಲ  .ನಾನು  ಯಾವುದೇ   ಆದರ್ಶಗಳಿಲ್ಲದ ಒಬ್ಬ ಸಾಧಾರಣ  ಮನುಷ್ಯ .ಬಡವ  . ಅವಳೋ ಶ್ರೀಮಂತೆ .ನಾನು  ಸ್ವಾಭಿಮಾನಿ  ಅಕ್ಕಾ .ಎಂತಹಾ  ಸ್ರೀಮನ್ತಿಕೆಯಿನ್ದಾನೂ ನನ್ನ  ಸ್ವಾಭಿಮಾನಕ್ಕೆ ಬೆಲೆ  ಕಟ್ಟೋದು  ಯಾರಿಂದನೂ  ಸಾಧ್ಯವಿಲ್ಲ .ಶ್ರೀಮಂತಿಕೆ  ಕನಸಿನ  ಸಂಪತ್ತಿನಂತೆ .ಇಂದು  ಲಕ್ಷಾಧಿಪತಿಯಾಗಿದ್ದವನು  ನಾಳೆ  ಭಿಕ್ಷಾಧಿಪತಿ  ಆಗಬಹುದು ಯವ್ವನದ ಮದದಲ್ಲಿ ,ಶ್ರೀಮಂತಿಕೆಯ  ಮದದಿಂದಾ  ಏನನ್ನಾದರೂ  ಮಾಡಬಹುದು  ಅನ್ನೋ  ಭ್ರಮೆಯಲ್ಲಿರ್ತಾರೆ  .ಆದರೆ  ಎಷ್ಟು  ಶ್ರೀಮಂತಿಕೆಯೂ  ಒಬ್ಬನಿಗೆ  ಮನಶ್ಯಾನ್ತಿಯನ್ನು  ತಂದುಕೊಡಲು  ಸಾಧ್ಯನಾ ? ಮಾನವೀಯತೆಯಿಲ್ಲವಾದರೆ ಎಂತಹಾ ಶ್ರೀಮಂತಿಕೆಯೂ  ಉಪಯೋಗವಾಗದು .ಸಂದರ್ಭ ಬಂದರೆ  ಶ್ರೀಮಂತನೂ  ನನ್ನಂತಹ  ಬಡವನಲ್ಲಿ   ಬೇಡಬೇಕಾದೀತು  .ಆಗ  ನಾನು  ಅಮಾನವೀಯವಾಗಿ ನಡೆದುಕೊಂಡರೆ ?ಚ್ಛೆ  ನಾಯಿ ಕಚ್ಚುತ್ತೆ  ಅಂತಾ  ನಾವೂ  ಕಚ್ಚಲಿಕ್ಕೆ  ಸಾಧ್ಯನಾ ? ನಮ್ಮ  ವ್ಯಕ್ತಿತ್ವಕ್ಕೆ  ಕುಂದು .
ನನ್ನ ಜೀವನದಲ್ಲಿ  ಅಂತಹ ಘಟನೆ ಬಂದ್ರೆ ?ಹೇಗೆ ವರ್ತಿಸಬೇಕಾಗಿತ್ತು ?
surprise ....
ಇತ್ತೀಚೆಗಷ್ಟೇ  ವ್ಯಾಲಂಟೈನ್  ಡೇ  ಯಂದು  ,ಒಂದು ಗಿಫ್ಟ್  ವಿಷಯಕ್ಕಾಗಿ  ನನ್ನೊಂದಿಗೆ  ಜಗಳವಾಡಿದ  ,ಅದುವರೆಗೂ ಇದ್ದ ನಮ್ಮ  ಪವಿತ್ರ (!) ಪ್ರೇಮವನ್ನು   ತಿರಸ್ಕರಿಸಿ  ಹೋಗಿದ್ದ  'ಆಶಾ ' ಮತ್ತೆ  ನನ್ನ  ಬಳಿ  ಬಂದಳು .ಏನನ್ನೋ  ಬೇಡಿದಾಗ  ನನ್ನ ಪರಿಸ್ತಿತಿ  ಹೇಗಿರಬಹುದು  ಉಹಿಸಿದ್ದೀಯಾ ಅಕ್ಕಾ ?
ಸೋಮವಾರ  ಅಂದು ,ಬೆಳಗ್ಗೆ  ನನ್ನ ಕಾಲೇಜ್  ಬಳಿ  ನಿಂತಿದ್ಲು .ನನ್ನನ್ನು ಕಂಡ ಒಡನೆಯೇ  'ಸೂರ್ಯ  ಪ್ಲೀಸ್  ಒಂದು ನಿಮಿಷ .ಒಂದು  ಹೆಲ್ಪ್  ಮಾಡ್ತೀಯಾ ? ಅಪ್ಪನೇ ನನ್ನನ್ನ ನಿನ್ನಲ್ಲಿಗೆ  ಕಳಿಸಿದ್ದಾರೆ '  ಅಂದಳು .ನನಗರಿವಿಲ್ಲದೆಯೇ  ನನ್ನ ಕೈ ಮೇಲೆ  ಹೋಯ್ತು . ತಕ್ಷಣ ನನ್ನ ಒಳ ಪ್ರಜ್ಞೆ  ಎಚ್ಚರಿಸಿ ಆಗುವ ಅನಾಹುತವನ್ನು  ತಪ್ಪಿಸಿತು .
  ಅವಳ ಬಗ್ಗೆ ಕನಿಕರ ಮೂಡಿತು .ಮೊನ್ನೆ ಮೊನ್ನೆಯಷ್ಟೇ  ಒಂದು ಗಿಫ್ಟ್  ಎಂಬ ಮಾನದನ್ದದಿಂದಾ ನನ್ನನ್ನು ಅಳೆದು ತೊರೆದು ಹೋದ  ಹುಡುಗಿ ಇವಳೇನಾ ಅನಿಸಿತು .ಆಗ ನನ್ನಲ್ಲಾದ ದ್ವಂದ್ವ  !ಅದನ್ನು  ಮಾತಿನಲ್ಲಿ ವಿವರಿಸಲಾರೆ ಅಕ್ಕ .'ಜೀವನವೊಂದು ನಾಟಕ '  ಎನ್ನುವ  ಕಂಬಾರರ  ಮಾತು ನೆನಪಾಯ್ತು  .ನಿನ್ನಂತಹ  ಶ್ರೀಮಂತೆಗೆ  ನಾನು ಏನ್  ಸಹಾಯ ಮಾಡೋಕಾಗುತ್ತೆ   ನಾಲಿಗೆಯಿಂದಾ  ಜಾರಿತು .ಬಹುಷಃ  ಕಥೆಯೊಂದನ್ನು  ಓದಿದ ಹಾಗೇ ಆಗ್ತಿದೆ ಆಲ್ವಾ ಅಕ್ಕ್ಕಾ ?ಇದು ಕಥೇನೆ  ಮಾತ್ರಾ ಸತ್ಯ ಕಥೆ .
ಸೂರ್ಯ  ನಾನು  ನಿನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ .ಈಗ ಹೆಚ್ಚು ಮಾತಾಡಿದ್ರೆ  ನನ್ನಕ್ಕನ  ಜೀವ ಹೋಗುತ್ತೆ ಸೂರ್ಯ ಎಂದಾಗ  ಇದೇನು ಕನಸೋ ನನಸೋ  ಎಂದು ನನಗೇ  ಆಶ್ಚರ್ಯವಾಯ್ತು .ನನಗೇ ಅರಿವಿಲ್ಲದೇ ಕಾರಿನಲ್ಲಿ  ಹೋಗಿ ಕುಳಿತು ಮಂಗಳೂರ ಗೆ ಹೋದೆ .ಪ್ರಜ್ಞಾ ಹೀನ  ಸ್ಥಿತಿಯಲ್ಲಿ  ನಮ್ಮತ್ತಿಗೆ ಅಂದ್ರೆ ಅವಳ ಅಕ್ಕ ! ಅಲ್ಲಿ ನಡೆದಿದ್ದ ವಿಷ್ಯ ಇಷ್ಟು -ಡೆಲಿವರಿ  ಕಷ್ಟವಾಗಿ  ಒಪೆರೇಶನ್  ಮಾಡಿ  ಮಗು ತೆಗೆಯಬೇಕಾಗಿತ್ತಂತೆ .ಬ್ಲಡ್  ಲಾಸ್  ಆಗಿ  ಚಿಂತಾಜನಕ  ಸ್ತಿತಿಯಲ್ಲಿ  ಅತ್ತಿಗೆ . ನೋಡಿ  ಅಳು ಬಂತು . AB-ve ರಕ್ತ  ಬೇಕಾಗಿತ್ತು  .ಎಷ್ಟು ಹುಡುಕಿದರೂ  ಸಿಗದೇ  ಆಶಾ ನನ್ನಲ್ಲಿಗೆ  ಬರಬೇಕಾಯ್ತು .ಹೇಗಿದೆ ನಾಟಕ ?ಆಕಸ್ಮಾತ್ ನಾನು ಆಗಲ್ಲಾ ಅಂದಿದ್ರೆ ?ಅವ್ರ  ಶ್ರೀಮಂತಿಕೆಯಿಂದಾ  ಏನು  ಮಾಡಲಿಕ್ಕೆ ಸಾಧ್ಯವಾಗ್ತಿತ್ತು ? ಅವರ ಅದೃಷ್ಟ ನೋಡು .ಮೊನ್ನೆ ಕಾಲೇಜ್ ಕ್ಯಾಂಪಸ್  ನಲ್ಲಿ  ರಕ್ತದಾನ  ಶಿಬಿರ  ಏರ್ಪಡಿಸಿದ್ದರು .ನಾನೂ ಭಾಗವಹಿಸಿದ್ದೆ  .ಆಗ ನನ್ನ ಗ್ರೂಪ್  ಚೆಕ್ ಮಾಡಿದ ಡಾಕ್ಟರು  'ನಿಮ್ಮದು  ರೇರ್  ಬ್ಲಡ್ ಗ್ರುಪ್ ,ಈಗ  ಕೊಡೋದು  ಬೇಡ .ನಮಗೆ  ಅವಶ್ಯವಿದ್ದಾಗ  ಕರೆಸಿಕೊಳ್ತೆವೆ 'ಅಂದಿದ್ರು .ಅದಾದ ಎರಡೇ  ದಿನಕ್ಕೆ  ಹೀಗಾಯ್ತು  .ಮೊದಲೇ  ನಾನು ಸಪೂರ  .ರಕ್ತ  ಕೊಟ್ಟು ಏಳಬೇಕಾದ್ರೆ  ನಿಶ್ಯಕ್ತಿ .,ನನಗೇ  ಗ್ಲುಕೋಸ್  ಕೊಡಬೇಕಾಯ್ತಂತೆ .ಈಗ  ಪರವಾಗಿಲ್ಲ  ,ಕಾಲೇಜ್ ಗೆ ಹೋಗ್ತಿದ್ದೇನೆ .
ಅವಳಿಗೆ  ಗಿಫ್ಟ್  ಕೊಡಲು  ಬೇಕಾದ ಹಣ  ಈಗ  ಕೇಳಿದ್ರೆ  ಎಷ್ಟ್ ಕೇಳಿದರೂ  ಸಿಗುತಿತ್ತು  ಆಲ್ವಾ ?ಒಂದು  ಬಾಟ್ಲಿ  ರಕ್ತ ! ಬೆಲೆ ?
ನಾನು  ಆರಾಮಾಗಿ  ದುಡ್ಡು ಕೇಳಿದ್ರೆ  ಕೊಡುತಿದ್ರು ಆಲ್ವಾ ? ಮಗಳ  ಜೀವಕ್ಕೆ  ಬೆಲೆ! ನಾನೂ ಹಣವಂತ  ಆಗ್ತಿದ್ದೆ . ಗಿಫ್ಟ್ ಕೊಡಿಸಬಹುದಿತ್ತು ಆಲ್ವಾ ?ಹೇಗಿದೆ  ಐಡಿಯಾ  :-)
  ಅಕ್ಕಾ  ಮತ್ತೆ ಬರೆಯುತ್ತೇನೆ .
--ನಿನ್ನ ಸೂರ್ಯ .


1 comment:

  1. Samanyavagi ellara anubhavaku baruvanthaha badukina kelavu sathyagalanu katha roopadalli chennagi nirupisddira. Great.

    ReplyDelete