Thursday, 12 February 2015



ಏಕಾಂತದಲಿ ಹಿತವಾದ ವೇಣು ನಾದ ... ಎಂದೋ ಕೇಳಬೇಕೆಂದು ಬಯಸಿದ್ದು ಇದೇನಾ !!!! ಆಲಿಸುತ್ತಾ ನವಿರಾದ ಕಂಪನ ... ಮಧುರತೆಯಲ್ಲಿ ತಲ್ಲೀನ... ರಾಗಕೆ ಶರಣಾಗಿ.....ಒಪ್ಪಿಸಿಕೊಂಡೇ ಏಕೋ ....ಏನೋ .... ನನ್ನೇ ನಾ ... ಹೌದು ತೆರೆಯಬೇಕು ಮುಚ್ಚಿಟ್ಟ ಕದ, ಬೆಳಕು ಬರಲು... ಮನಸನ್ನೂ ಸಹಾ... ಅನುಭವಿಸಲು. ಇನ್ನೆಷ್ಟು ದಿನಾ ಬಾಕಿ ಇದೆ ...? ಸುಖ ಹುಡುಕಬೇಕು, ಬೋಳಿಮಗಂದು ಅಷ್ಟು ಸುಲಭವಾಗಿ ಸಿಗುವುದಿಲ್ಲ, ಸಿಕ್ಕಾಗ ಅಷ್ಟೂ ಬಾಚಿಕೊಳ್ಳಬೇಕು ---ಗೆಳತಿಯ ಮಾತು ನೆನಪಾಗಿ ತುಟಿಯ ಮೇಲೊಂದು ತೆಳುನಗು. ............ಮುಚ್ಚಿಟ್ಟೆ ಪುಸ್ತಕವನ್ನು. ಅಕ್ಷರಗಳು ಘಮ ಘಮಿಸಿದವು.

No comments:

Post a Comment