ಕಥೆಗೆ ವಿಷಯ ನೀಡಿ, ಬರೆಯಲು ಸ್ಪೂರ್ತಿಯಾದ ಸಹೃದಯಿ ಹರೀಶ್ ಸರ್ ಗೆ ---
ತಾನೇ ಟೆನ್ಶನ್ ಲ್ಲಿದ್ದರೂ ನಾನು ಕಳಿಸಿದಾಕ್ಷಣ ಕಥೆ ಓದುವ ಆತುರದಲ್ಲಿ ಓದಿ ಮೆಚ್ಚುಗೆ ಹೇಳಿದ ಭಾರತೀ ಅಕ್ಕನಿಗೆ --
ಧನ್ಯವಾದಗಳು ಹೇಳುತ್ತಾ ....
ನಿಮ್ಮ ಓದಿಗಾಗಿ , ಕಾಮೆಂಟ್ಸ್ ಗಾಗಿ ಫ್ರೆಂಡ್ಸ್ .... ಈ ನನ್ ಕಥೆ ---
ತಾನೇ ಟೆನ್ಶನ್ ಲ್ಲಿದ್ದರೂ ನಾನು ಕಳಿಸಿದಾಕ್ಷಣ ಕಥೆ ಓದುವ ಆತುರದಲ್ಲಿ ಓದಿ ಮೆಚ್ಚುಗೆ ಹೇಳಿದ ಭಾರತೀ ಅಕ್ಕನಿಗೆ --
ಧನ್ಯವಾದಗಳು ಹೇಳುತ್ತಾ ....
ನಿಮ್ಮ ಓದಿಗಾಗಿ , ಕಾಮೆಂಟ್ಸ್ ಗಾಗಿ ಫ್ರೆಂಡ್ಸ್ .... ಈ ನನ್ ಕಥೆ ---
ಅದೇ ಕಾವೇರಿ ನದಿಯ ತೀರದ ಮೆಟ್ಟಿಲ ಮೇಲೆ ಕುಳಿತಿದ್ದೆ. ಅಂದು ಅವನಿದ್ದ , ಇಂದು ಇರಲಿಲ್ಲ ಅಷ್ಟೇ ...
ಹೆಚ್ಚು ಹೆಚ್ಚು ನನ್ನ ಹಚ್ಹ್ಚಿಕೊಳ್ಳಬೇಡವೇ .... ನಾನು ಹೆಚ್ಚು ದಿನ ಉಳಿಯುವುದಿಲ್ಲ ಎಂದವನು ನನಗೇಕೆ ಅಚ್ಚುಮೆಚ್ಚಾಗಿದ್ದನೋ !!!
ನೀನಿರದೆ ನಾನು ಹೇಗಿರಲೀ ಹೇಳು ? ನಿನಗಿಂತಾ ಮೊದಲೇ ನಾ ಸತ್ತು ಹೋಗಿಬಿಡ್ತೇನೆ ಎಂದೇ .
ಎಲ್ಲವನ್ನೂ ಕಂಡಿರುವೆ, ಸಾಕು ಎನಿಸಿ ಹೊರಟಿರುವೆ , ಯಾವುದೂ ಬೇಡವೆನಿಸಿದಾಗ ನೀ ಯಾಕೆ ನನಗೆ ? ಹುಚ್ಚೀ ನಾನೆಷ್ಟೇ ದೂರ ತಳ್ಳಿದರೂ , ನಿನಗೆ ಎಷ್ಟು ಅವಮಾನ ಮಾಡಿದರೂ ಯಾಕೕ ಸಹಿಸಿಕೊಂಡೆ, ಹುಚ್ಚು ಹುಚ್ಚಾಗಿ ಯಾಕೆ ಪ್ರೀತಿಸಿದೆ ನನ್ನ ? ಸಾಕಷ್ಟು ನೋಯಿಸಿದ ...
ಮಂತ್ರಮುಗ್ದಳಾಗಿ ಅವನು ಏನೇ ಹೇಳಿದರೂ ಕೇಳುವ ನಾನು ಅದೇಕೆ ಹಾಗೆ ಅವನಿಗೆ ಬೇಡವಾದೇನೋ !!!!!
ಕೊನೆಗೊಮ್ಮೆ ...
ನಿನ್ನಂತೆ ನನ್ನ ಯಾರೂ ಪ್ರೀತಿಸಿರಲಿಲ್ಲ ಕಣೆ ... ನಾ ಹೋದ ಮೇಲೆ ಅಳಬೇಡಾ, ಸಮಾಧಾನ ಹೇಳೋಕೆ ನಾನಿರೋಲ್ಲ, ನನ್ನಾತ್ಮ ಅದ ನೋಡಿ ಹಿಂಸೆ ಅನುಭವಿಸುತ್ತೆ ಕಣೆ , ನಿನಗೆ ನಿನ್ನದೇ ಜವಾಬ್ದಾರಿಗಳಿವೆ, ಅದನ್ನು ಮುಗಿಸಿ ಬಾ , ಕಾಯುವೆ , ಮತ್ತೆ ಸೇರೋಣ , ಭೌತಿಕವಾಗಿ ಇಲ್ಲವಾದರೂ ನಾ ನಿನ್ನೊಡನೆ ಇರುತ್ತೇನೆ ಸದಾ ಎಂದು ಮುಗುಳ್ನಕ್ಕವನನ್ನು ಬೆರಗಾಗಿ ನೋಡಿದೆ.
ನನಗೆ ಸಿಗದ ನೀನು ಯಾರಿಗೂ ಸಿಗಬೇಡ ಹೋಗೋ ಎಂದು ಮನಸಲ್ಲೇ ಕೊಂದು ಬಿಟ್ಟೆ. ಅವನ ಕಾಡುವ ನೆನಪುಗಳ ಕೊಲ್ಲಲಾಗಲಿಲ್ಲ ನನಗೆ .
ಒಂದು ದಿನ ... ಅವನು ಹೇಳಿದಂತೆ ನಡೆದೇ ಬಿಟ್ಟಾಗ ...
ಹೋಗಿ ಅವನ ದೇಹಕ್ಕೆ ಬೆಂಕಿಯಿಟ್ಟು ಬಂದಿದ್ದೆ , ಆದರೆ ... ನಾ ಅವನ ನೆನಪಿನಲ್ಲಿ ದಿನವೂ ಸುಡತೊಡಗಿದೆ.
ಇಂದು ..... ಅವನು ಆಡಿದ ಮಾತುಗಳ ನೆನೆದು .... ಹರಿವ ನದಿಯೊಡನೆ ನಾನೂ ಸಾಗಿಬಿಡಲೇ ಎಂದು ಯೋಚಿಸಿದೆ.
ಕಣ್ಣೀರು ಪುಟಿದು ಪಾದಗಳಿಗೆ ಸುರಿಯುತಿತ್ತು ...
ಕೈ ಒಂದು ಪಾದದ ಮೇಲೆ ಬಿದ್ದ ಕಣ್ಣೀರ ಹನಿಗಳ ಒರೆಸಿತು .
ತಲೆ ಎತ್ತಿದೆ . ಒರೆಸಿದ ಕೈನವರ ಮೊಗದಲ್ಲಿ ಕಿರುನಗು... ಹೊರಡೋಣವೇ ? ಮೆಲು ನುಡಿ.
ಕಳೆದುಕೊಂಡೆ ಎಂದು ಕೊರಗಿದ್ದ, ಬೇಕು ಎಂದು ಬಯಸಿದ್ದ ಪ್ರೀತಿಯ ಬೆಳಕು ಅವರ ಕಂಗಳಲ್ಲಿ ಕಂಡಾಗ ...
ಕೈ ಚಾಚಿದೆ. ಬಿಗಿಯಾಗಿ ಹಿಡಿದುಕೊಂಡ ಆ ಕೈ ಮೆಟ್ಟಿಲುಗಳ ಏರಲು ಸಹಕರಿಸಿತು .
ನನ್ನ ಬಿಟ್ಟು ಹೋದವನು ನನ್ನವನಲ್ಲ ಎಂದೇ ಮೆಲುವಾಗಿ .
ಮುಷ್ಠಿ ಸಡಿಲಿಸಿತು, ಮಾತುಗಳು ಬೇಕಿರಲಿಲ್ಲ. ಬಳಸಿದ ಆ ತೋಳುಗಳಲ್ಲಿ ಬೇಕಾದಷ್ಟು ಮಾತುಗಳಿತ್ತು.
ಸಂಜೆ ಬಾನಲ್ಲಿ ಸೂರ್ಯ ಮುಳುಗಿದ ಕೆಂಪು ರಂಗು ಚೆಲ್ಲಿತ್ತು ....
ನನ್ನ ಬದುಕಲ್ಲಿ ಉದಯಿಸಿದ ಸೂರ್ಯನ ಜೊತೆಗೆ ಮೆಲ್ಲ ಮೆಲ್ಲನೆ ಹೆಜ್ಜೆ ಹಾಕಿದೆ ಕಾರಿನತ್ತ .
"ಮರೆತುಬಿಡು ಕಳೆದ ದಿನಗಳ ಕಹಿಘಟನೆ ...
ಮುನ್ನೆಡೆಯಬೇಕಿದೆ ಜೀವನ ಇರುವವರೊಡನೆ".
ಹೆಚ್ಚು ಹೆಚ್ಚು ನನ್ನ ಹಚ್ಹ್ಚಿಕೊಳ್ಳಬೇಡವೇ .... ನಾನು ಹೆಚ್ಚು ದಿನ ಉಳಿಯುವುದಿಲ್ಲ ಎಂದವನು ನನಗೇಕೆ ಅಚ್ಚುಮೆಚ್ಚಾಗಿದ್ದನೋ !!!
ನೀನಿರದೆ ನಾನು ಹೇಗಿರಲೀ ಹೇಳು ? ನಿನಗಿಂತಾ ಮೊದಲೇ ನಾ ಸತ್ತು ಹೋಗಿಬಿಡ್ತೇನೆ ಎಂದೇ .
ಎಲ್ಲವನ್ನೂ ಕಂಡಿರುವೆ, ಸಾಕು ಎನಿಸಿ ಹೊರಟಿರುವೆ , ಯಾವುದೂ ಬೇಡವೆನಿಸಿದಾಗ ನೀ ಯಾಕೆ ನನಗೆ ? ಹುಚ್ಚೀ ನಾನೆಷ್ಟೇ ದೂರ ತಳ್ಳಿದರೂ , ನಿನಗೆ ಎಷ್ಟು ಅವಮಾನ ಮಾಡಿದರೂ ಯಾಕೕ ಸಹಿಸಿಕೊಂಡೆ, ಹುಚ್ಚು ಹುಚ್ಚಾಗಿ ಯಾಕೆ ಪ್ರೀತಿಸಿದೆ ನನ್ನ ? ಸಾಕಷ್ಟು ನೋಯಿಸಿದ ...
ಮಂತ್ರಮುಗ್ದಳಾಗಿ ಅವನು ಏನೇ ಹೇಳಿದರೂ ಕೇಳುವ ನಾನು ಅದೇಕೆ ಹಾಗೆ ಅವನಿಗೆ ಬೇಡವಾದೇನೋ !!!!!
ಕೊನೆಗೊಮ್ಮೆ ...
ನಿನ್ನಂತೆ ನನ್ನ ಯಾರೂ ಪ್ರೀತಿಸಿರಲಿಲ್ಲ ಕಣೆ ... ನಾ ಹೋದ ಮೇಲೆ ಅಳಬೇಡಾ, ಸಮಾಧಾನ ಹೇಳೋಕೆ ನಾನಿರೋಲ್ಲ, ನನ್ನಾತ್ಮ ಅದ ನೋಡಿ ಹಿಂಸೆ ಅನುಭವಿಸುತ್ತೆ ಕಣೆ , ನಿನಗೆ ನಿನ್ನದೇ ಜವಾಬ್ದಾರಿಗಳಿವೆ, ಅದನ್ನು ಮುಗಿಸಿ ಬಾ , ಕಾಯುವೆ , ಮತ್ತೆ ಸೇರೋಣ , ಭೌತಿಕವಾಗಿ ಇಲ್ಲವಾದರೂ ನಾ ನಿನ್ನೊಡನೆ ಇರುತ್ತೇನೆ ಸದಾ ಎಂದು ಮುಗುಳ್ನಕ್ಕವನನ್ನು ಬೆರಗಾಗಿ ನೋಡಿದೆ.
ನನಗೆ ಸಿಗದ ನೀನು ಯಾರಿಗೂ ಸಿಗಬೇಡ ಹೋಗೋ ಎಂದು ಮನಸಲ್ಲೇ ಕೊಂದು ಬಿಟ್ಟೆ. ಅವನ ಕಾಡುವ ನೆನಪುಗಳ ಕೊಲ್ಲಲಾಗಲಿಲ್ಲ ನನಗೆ .
ಒಂದು ದಿನ ... ಅವನು ಹೇಳಿದಂತೆ ನಡೆದೇ ಬಿಟ್ಟಾಗ ...
ಹೋಗಿ ಅವನ ದೇಹಕ್ಕೆ ಬೆಂಕಿಯಿಟ್ಟು ಬಂದಿದ್ದೆ , ಆದರೆ ... ನಾ ಅವನ ನೆನಪಿನಲ್ಲಿ ದಿನವೂ ಸುಡತೊಡಗಿದೆ.
ಇಂದು ..... ಅವನು ಆಡಿದ ಮಾತುಗಳ ನೆನೆದು .... ಹರಿವ ನದಿಯೊಡನೆ ನಾನೂ ಸಾಗಿಬಿಡಲೇ ಎಂದು ಯೋಚಿಸಿದೆ.
ಕಣ್ಣೀರು ಪುಟಿದು ಪಾದಗಳಿಗೆ ಸುರಿಯುತಿತ್ತು ...
ಕೈ ಒಂದು ಪಾದದ ಮೇಲೆ ಬಿದ್ದ ಕಣ್ಣೀರ ಹನಿಗಳ ಒರೆಸಿತು .
ತಲೆ ಎತ್ತಿದೆ . ಒರೆಸಿದ ಕೈನವರ ಮೊಗದಲ್ಲಿ ಕಿರುನಗು... ಹೊರಡೋಣವೇ ? ಮೆಲು ನುಡಿ.
ಕಳೆದುಕೊಂಡೆ ಎಂದು ಕೊರಗಿದ್ದ, ಬೇಕು ಎಂದು ಬಯಸಿದ್ದ ಪ್ರೀತಿಯ ಬೆಳಕು ಅವರ ಕಂಗಳಲ್ಲಿ ಕಂಡಾಗ ...
ಕೈ ಚಾಚಿದೆ. ಬಿಗಿಯಾಗಿ ಹಿಡಿದುಕೊಂಡ ಆ ಕೈ ಮೆಟ್ಟಿಲುಗಳ ಏರಲು ಸಹಕರಿಸಿತು .
ನನ್ನ ಬಿಟ್ಟು ಹೋದವನು ನನ್ನವನಲ್ಲ ಎಂದೇ ಮೆಲುವಾಗಿ .
ಮುಷ್ಠಿ ಸಡಿಲಿಸಿತು, ಮಾತುಗಳು ಬೇಕಿರಲಿಲ್ಲ. ಬಳಸಿದ ಆ ತೋಳುಗಳಲ್ಲಿ ಬೇಕಾದಷ್ಟು ಮಾತುಗಳಿತ್ತು.
ಸಂಜೆ ಬಾನಲ್ಲಿ ಸೂರ್ಯ ಮುಳುಗಿದ ಕೆಂಪು ರಂಗು ಚೆಲ್ಲಿತ್ತು ....
ನನ್ನ ಬದುಕಲ್ಲಿ ಉದಯಿಸಿದ ಸೂರ್ಯನ ಜೊತೆಗೆ ಮೆಲ್ಲ ಮೆಲ್ಲನೆ ಹೆಜ್ಜೆ ಹಾಕಿದೆ ಕಾರಿನತ್ತ .
"ಮರೆತುಬಿಡು ಕಳೆದ ದಿನಗಳ ಕಹಿಘಟನೆ ...
ಮುನ್ನೆಡೆಯಬೇಕಿದೆ ಜೀವನ ಇರುವವರೊಡನೆ".
No comments:
Post a Comment