ಇಬ್ಬನಿಯಲಿ ತೋಯ್ದ ಗುಲಾಬಿಯ ಕಾಣಲು......
ಈಗ ಕಣ್ಣು ಮುಚ್ಚುವೆ.
ನಿರಾಸೆಯಿರದಿರಲೀ...
ನಾಳೆಯಾದರೂ...
ಅರಳಿಬಿಡು ಓ ಹೂವೇ....
ನಾ ನಿನಗಾಗಿ ಕಾದಿರುವೆ.
-----------
ದಿನವೂ ಸೂರ್ಯೋದಯ , ಸೂರ್ಯಾಸ್ತ
ಹಗಲೂ--ಇರುಳು
ಆಗುವುದು
ನೀನಿಲ್ಲದೆಯೂ....
ನನಗೆ ಮಾತ್ರ. ....
ವ್ಯತ್ಯಾಸದ ಅರಿವಾಗದು.
---------------
ಪ್ರೀತಿಸುವುದನು ಕಲಿಸಿದೇ....
ನಗುವುದನು ಕಲಿಸಿದೇ....
ಅಳುವುದನೂ ಕಲಿಸಿದೇ..
ನೀ...
ನೀನಿಲ್ಲದೆಯೂ. ..ನಿನ್ನ ಮರೆತು ನಾನಿರುವುದ ಕಲಿಸದೇ ಹೋದೇ..
ನಗುವ ಜೊತೆಗೊಯ್ದು, ಕಂಬನಿಯುಳಿಸಿದೇ....
----------------------
ನೀರವ ನಡು ರಾತ್ರಿ ವೇಳೆ ನಡೆದಿದೇ....ನಿನ್ನ ನೆನಪುಗಳ ಗದ್ದಲ....
ನೋಡಲು ನಿನ್ನ ಮೊಗವ ಏನೋ ಕಾತರ..
ಕಂಡೆನೋ. ...ಕಾಣೆನೋ...
ಬಂದು ಬಿಡು ಒಮ್ಮೆ, ನಾ ಕಣ್ಮುಚ್ಚುವ ಮೊದಲು ಬೇಡುವೆನು.
ಬೇಸರದ ಮೋಡಗಳು ಕರಗಲೀ....
-----------------------------ಹೇಳಿ ಹೋಗು ಕಾರಣಾ ...
ಎಂದು ಕಾಡಿದೇ ...
ಹೊಗದಿರೂ ಎಂದು ಬೇಡಿದೇ ...
ಗೊತ್ತು ನನಗೆ ಪ್ರೀತಿಯೆಂದರೆ ನೀಡುವುದು ಅಷ್ಟೇ ....
ಅವನಲ್ಲಿರಲಿ
ನಾನಿಲ್ಲೇ ನೆನೆವೆ ಏನಂತೆ ?
-----------------------------------
ಮೊನ್ನೆ ನೆನ್ನೆಯವರೆಗೂ ಆಪ್ತವೆನಿಸಿದವರು. ...
ಇಂದು ಅಪರಿಚಿತರಂತೆ ನಡೆದರೇ.....
ಏನು ಮಾಡಲಿ. .....???
ಅಳುವುದಕೆ ಕಣ್ಣಿನಲ್ಲಿ ನೀರೂ ಇಲ್ಲ...
ಸರಿ ಹೋದೀತೇನೋ ಎಂದು ಕಾಯಲು...
ನಾಳೆಯ ಭರವಸೆಯೂ ಇಲ್ಲ
----------------------------------
ನಾ ನೊಂದು ತೀರ.....
ಅವ ನೊಂದು ತೀರ....
ನಮ್ಮಿಬ್ಬರ ನಡುವೆ ಭೋರ್ಗರೆವ ವಿರಹದ ನದಿ.
------------------------------------------------------ಗೋಡೆಗಳ ನಡುವಿನಲ್ಲಿ ಒಂದು ನೀರವ ಮೌನ. ....
ಅದಕ್ಕೆ ಹೆಸರು- --
ಏಕಾಂತ
ಕೆಲವೊಮ್ಮೆ--
ಒಂಟಿತನ....
ಸದ್ದಿರದ ಬಿಕ್ಕು...
-------------------------------------------------
ನಿರೀಕ್ಷೆ, ಕನಸುಗಳನ್ನು ಚಿಗುರಿಸಿದ ನನ್ನೊಲವೇ. ..
ಹೀಗೆ ಮೌನವಾಗಿ ನನ್ನ ಕೊಲ್ಲುವುದು ತರವೇ???
ಹಂಚಿಕೊಂಡ ಮೇಲೂ ಮನಸ್ಸು, ಕನಸು... ಎಲ್ಲವನೂ
ಹೇಗೆ ತಾನೇ ಸಹಿಸಲಿ ಹೇಳು ಈ ಅಗಲಿಕೆಯನು ???
ಕಟ್ಟೆಯೊಡೆಯಲಿ ಬಿಗಿದಿಟ್ಟ ಮೌನ. ..
ಹೊರಗೆ ಬರಲಿ ಬಯಕೆಗಳ ಮಹಾಪೂರ.
----------------------------------------------
ಯಾರು ಆಂದರೋ...
ಚಂದ್ರ ತಂಪು ಎಂದು
ಹೇಗೆ ಸುಡುತ್ತಿದ್ದಾನೆ ಗೊತ್ತೇ...
ನೀ ಬಳಿಯಿರದೇ ಇಂದು.
--------------------------------------------------ನಾನು ಮತ್ತು ಹಾಡುತಿದ್ದಾನೆ ಸೋನು ನಿಗಮ್
ಎದೆಯೊಳಗೆ ಮಧುರ ಭಾವವೇ.....
ನಾಲ್ಕು ಗೋಡೆಗಳ ಮಧ್ಯೆ ನಾ ಒಂಟಿಯಲ್ಲ.
ಒಲವೆಂದರೆ ನನ್ನವನ ಧ್ಯಾನವೇ .
-----------------------------------------ಅವಳನ್ನು ಬದುಕಿಸಿದ್ದು ಅವನೊಲವು......
ವಿಷವಾಗಿದ್ದೂ ಅದೇ ....
-----------------------------------ಪ್ರೇಮದ ಸ್ಪರ್ಶದಲಿ ಬೆಳಗಿಸು
ನಾನು ಕರ್ಪೂರ.
-------------------------------------ಒಲವೆಂದರೆ ಬದುಕು ಎಂದೇ ಅಂದುಕೊಂಡ ಅವಳು ಅದನ್ನರಸಿ ಸುಸ್ತಾದಾಗ .....
ಸಾವು ಒಲವಿನಿಂದ ಅವಳನಪ್ಪಿತು.
------------------------------------------------ನೀ ನನ್ನ ಹೆಸರಿಡಿದು ಕರೆಯುವ ಮುನ್ನ....
ಅದು ನನ್ನ ಹೆಸರೆಂದು ಮರೆತಿದ್ದೆ
ಕರೆದಾಗ ....
ನನ್ನಾಣೆ ನನ್ನನೇ ಮರೆತುಹೋದೆ.
ನನ್ನಲ್ಲಿರುವುದು ಇಷ್ಟೇ. ...
ಅವನು ಬಳಿಯಿರಲು ಬಲು ಪ್ರೀತಿ
ದೂರವಿದ್ದಾಗ....
ಪ್ರೀತಿಯ ಜೊತೆಗೆ ಕಾಡುವ ವಿರಹ.
-------------------------------------------ನಾನು ಯಾಚಿಸಿಲ್ಲ ಯಾರನ್ನೂ, ಏನನ್ನೂ, ಆ ಕಾಣದ ದೇವರನ್ನೂ
ಪಾದದಡಿ ಕುಳಿತು ಬೇಡಿದ್ದು ಹಿಡಿಯಷ್ಟು ನಿನ್ನೊಲವನ್ನು ....
ನೀಡುವುದಾದರೆ ನೀಡು, ಇಲ್ಲವಾದರೆ ಬಿಡೂ ನನ್ನ ಹಣೆಪಾಡು.
ಉಸಿರಾಡದೆ ಬದುಕಲು ಕಲಿಯುವೆ.
--------------------------------------------ಅವಳು ಬರೆಯುತ್ತಾ ಹೋದಳು ಹಗುರಾಗುವುದಕ್ಕೆ ...
ಪುಂಖಾನುಪುಂಖವಾಗಿ ಪ್ರೇಮ ಪದ್ಯ ...
ಓದುಗರು ---
ಅರೆ ಇದು ನಮ್ಮದೇ ಭಾವನೆ ಇವಳು ಚೆಂದ ಅಕ್ಷರವಾಗಿಸಿದ್ದಾಳೆ ಎಂದರು.
ಮೆಚ್ಚಿದರು ಕೆಲವರು, ಚಪ್ಪಾಳೆ ತಟ್ಟಿದರು, ಬೆನ್ನೂ ತಟ್ಟಿದರು.
ನನಗಾಗೇ ಬರದಳೇನೋ ಎಂದು ಸಂಭ್ರಮಿಸಿದವರೂ ಉಂಟು.
ಅವಳು ಹೇಳಲಿಲ್ಲ - ಛಿದ್ರಗೊಂಡ ನನ್ನ ಕನಸುಗನ್ನಡಿಯ ಚೂರುಗಳು ಇವು.
----------------------------------------------
ನಿನ್ನ ನೋಡುವ ತವಕದಲಿ......
ನಯನಗಳು ಎವೆಯಾಡುವುದ ಮರೆತಿವೆ.
-----------------------------------------------
ಈಗ ಕಣ್ಣು ಮುಚ್ಚುವೆ.
ನಿರಾಸೆಯಿರದಿರಲೀ...
ನಾಳೆಯಾದರೂ...
ಅರಳಿಬಿಡು ಓ ಹೂವೇ....
ನಾ ನಿನಗಾಗಿ ಕಾದಿರುವೆ.
-----------
ದಿನವೂ ಸೂರ್ಯೋದಯ , ಸೂರ್ಯಾಸ್ತ
ಹಗಲೂ--ಇರುಳು
ಆಗುವುದು
ನೀನಿಲ್ಲದೆಯೂ....
ನನಗೆ ಮಾತ್ರ. ....
ವ್ಯತ್ಯಾಸದ ಅರಿವಾಗದು.
---------------
ಪ್ರೀತಿಸುವುದನು ಕಲಿಸಿದೇ....
ನಗುವುದನು ಕಲಿಸಿದೇ....
ಅಳುವುದನೂ ಕಲಿಸಿದೇ..
ನೀ...
ನೀನಿಲ್ಲದೆಯೂ. ..ನಿನ್ನ ಮರೆತು ನಾನಿರುವುದ ಕಲಿಸದೇ ಹೋದೇ..
ನಗುವ ಜೊತೆಗೊಯ್ದು, ಕಂಬನಿಯುಳಿಸಿದೇ....
----------------------
ನೀರವ ನಡು ರಾತ್ರಿ ವೇಳೆ ನಡೆದಿದೇ....ನಿನ್ನ ನೆನಪುಗಳ ಗದ್ದಲ....
ನೋಡಲು ನಿನ್ನ ಮೊಗವ ಏನೋ ಕಾತರ..
ಕಂಡೆನೋ. ...ಕಾಣೆನೋ...
ಬಂದು ಬಿಡು ಒಮ್ಮೆ, ನಾ ಕಣ್ಮುಚ್ಚುವ ಮೊದಲು ಬೇಡುವೆನು.
ಬೇಸರದ ಮೋಡಗಳು ಕರಗಲೀ....
-----------------------------ಹೇಳಿ ಹೋಗು ಕಾರಣಾ ...
ಎಂದು ಕಾಡಿದೇ ...
ಹೊಗದಿರೂ ಎಂದು ಬೇಡಿದೇ ...
ಗೊತ್ತು ನನಗೆ ಪ್ರೀತಿಯೆಂದರೆ ನೀಡುವುದು ಅಷ್ಟೇ ....
ಅವನಲ್ಲಿರಲಿ
ನಾನಿಲ್ಲೇ ನೆನೆವೆ ಏನಂತೆ ?
-----------------------------------
ಮೊನ್ನೆ ನೆನ್ನೆಯವರೆಗೂ ಆಪ್ತವೆನಿಸಿದವರು. ...
ಇಂದು ಅಪರಿಚಿತರಂತೆ ನಡೆದರೇ.....
ಏನು ಮಾಡಲಿ. .....???
ಅಳುವುದಕೆ ಕಣ್ಣಿನಲ್ಲಿ ನೀರೂ ಇಲ್ಲ...
ಸರಿ ಹೋದೀತೇನೋ ಎಂದು ಕಾಯಲು...
ನಾಳೆಯ ಭರವಸೆಯೂ ಇಲ್ಲ
----------------------------------
ನಾ ನೊಂದು ತೀರ.....
ಅವ ನೊಂದು ತೀರ....
ನಮ್ಮಿಬ್ಬರ ನಡುವೆ ಭೋರ್ಗರೆವ ವಿರಹದ ನದಿ.
------------------------------------------------------ಗೋಡೆಗಳ ನಡುವಿನಲ್ಲಿ ಒಂದು ನೀರವ ಮೌನ. ....
ಅದಕ್ಕೆ ಹೆಸರು- --
ಏಕಾಂತ
ಕೆಲವೊಮ್ಮೆ--
ಒಂಟಿತನ....
ಸದ್ದಿರದ ಬಿಕ್ಕು...
-------------------------------------------------
ನಿರೀಕ್ಷೆ, ಕನಸುಗಳನ್ನು ಚಿಗುರಿಸಿದ ನನ್ನೊಲವೇ. ..
ಹೀಗೆ ಮೌನವಾಗಿ ನನ್ನ ಕೊಲ್ಲುವುದು ತರವೇ???
ಹಂಚಿಕೊಂಡ ಮೇಲೂ ಮನಸ್ಸು, ಕನಸು... ಎಲ್ಲವನೂ
ಹೇಗೆ ತಾನೇ ಸಹಿಸಲಿ ಹೇಳು ಈ ಅಗಲಿಕೆಯನು ???
ಕಟ್ಟೆಯೊಡೆಯಲಿ ಬಿಗಿದಿಟ್ಟ ಮೌನ. ..
ಹೊರಗೆ ಬರಲಿ ಬಯಕೆಗಳ ಮಹಾಪೂರ.
----------------------------------------------
ಯಾರು ಆಂದರೋ...
ಚಂದ್ರ ತಂಪು ಎಂದು
ಹೇಗೆ ಸುಡುತ್ತಿದ್ದಾನೆ ಗೊತ್ತೇ...
ನೀ ಬಳಿಯಿರದೇ ಇಂದು.
--------------------------------------------------ನಾನು ಮತ್ತು ಹಾಡುತಿದ್ದಾನೆ ಸೋನು ನಿಗಮ್
ಎದೆಯೊಳಗೆ ಮಧುರ ಭಾವವೇ.....
ನಾಲ್ಕು ಗೋಡೆಗಳ ಮಧ್ಯೆ ನಾ ಒಂಟಿಯಲ್ಲ.
ಒಲವೆಂದರೆ ನನ್ನವನ ಧ್ಯಾನವೇ .
-----------------------------------------ಅವಳನ್ನು ಬದುಕಿಸಿದ್ದು ಅವನೊಲವು......
ವಿಷವಾಗಿದ್ದೂ ಅದೇ ....
-----------------------------------ಪ್ರೇಮದ ಸ್ಪರ್ಶದಲಿ ಬೆಳಗಿಸು
ನಾನು ಕರ್ಪೂರ.
-------------------------------------ಒಲವೆಂದರೆ ಬದುಕು ಎಂದೇ ಅಂದುಕೊಂಡ ಅವಳು ಅದನ್ನರಸಿ ಸುಸ್ತಾದಾಗ .....
ಸಾವು ಒಲವಿನಿಂದ ಅವಳನಪ್ಪಿತು.
------------------------------------------------ನೀ ನನ್ನ ಹೆಸರಿಡಿದು ಕರೆಯುವ ಮುನ್ನ....
ಅದು ನನ್ನ ಹೆಸರೆಂದು ಮರೆತಿದ್ದೆ
ಕರೆದಾಗ ....
ನನ್ನಾಣೆ ನನ್ನನೇ ಮರೆತುಹೋದೆ.
ನನ್ನಲ್ಲಿರುವುದು ಇಷ್ಟೇ. ...
ಅವನು ಬಳಿಯಿರಲು ಬಲು ಪ್ರೀತಿ
ದೂರವಿದ್ದಾಗ....
ಪ್ರೀತಿಯ ಜೊತೆಗೆ ಕಾಡುವ ವಿರಹ.
-------------------------------------------ನಾನು ಯಾಚಿಸಿಲ್ಲ ಯಾರನ್ನೂ, ಏನನ್ನೂ, ಆ ಕಾಣದ ದೇವರನ್ನೂ
ಪಾದದಡಿ ಕುಳಿತು ಬೇಡಿದ್ದು ಹಿಡಿಯಷ್ಟು ನಿನ್ನೊಲವನ್ನು ....
ನೀಡುವುದಾದರೆ ನೀಡು, ಇಲ್ಲವಾದರೆ ಬಿಡೂ ನನ್ನ ಹಣೆಪಾಡು.
ಉಸಿರಾಡದೆ ಬದುಕಲು ಕಲಿಯುವೆ.
--------------------------------------------ಅವಳು ಬರೆಯುತ್ತಾ ಹೋದಳು ಹಗುರಾಗುವುದಕ್ಕೆ ...
ಪುಂಖಾನುಪುಂಖವಾಗಿ ಪ್ರೇಮ ಪದ್ಯ ...
ಓದುಗರು ---
ಅರೆ ಇದು ನಮ್ಮದೇ ಭಾವನೆ ಇವಳು ಚೆಂದ ಅಕ್ಷರವಾಗಿಸಿದ್ದಾಳೆ ಎಂದರು.
ಮೆಚ್ಚಿದರು ಕೆಲವರು, ಚಪ್ಪಾಳೆ ತಟ್ಟಿದರು, ಬೆನ್ನೂ ತಟ್ಟಿದರು.
ನನಗಾಗೇ ಬರದಳೇನೋ ಎಂದು ಸಂಭ್ರಮಿಸಿದವರೂ ಉಂಟು.
ಅವಳು ಹೇಳಲಿಲ್ಲ - ಛಿದ್ರಗೊಂಡ ನನ್ನ ಕನಸುಗನ್ನಡಿಯ ಚೂರುಗಳು ಇವು.
----------------------------------------------
ನಿನ್ನ ನೋಡುವ ತವಕದಲಿ......
ನಯನಗಳು ಎವೆಯಾಡುವುದ ಮರೆತಿವೆ.
-----------------------------------------------
No comments:
Post a Comment