Tuesday, 7 April 2015

1.ಅಂತೂ...... ಆಗಮಿಸಿದ ಮಳೆರಾಯ ...
ಭೂತಾಯಿಯ ಸಂಭ್ರಮ..... ತಂಪಿನಲ್ಲಿ.
ನನ್ನವನು ಬರಲಿಲ್ಲ ಮಹರಾಯ 
ನೆನೆಯುತಿರುವೆ ನಾನವನ ನೆನಪಿನಲ್ಲಿ.
2.ಮೋಡ ಮುಸುಕಿದ ವಾತಾವರಣ, 
ಧಗೆಯೂ ಆಚೆ....ನನ್ನೊಳಗೂ ಸಹ...
ಮಳೆಯಂತೂ ಬರುವ ಸೂಚನೆ ಇದೆ...
ನೀನೂ ಬರಬಾರದೇನೋ....?

3.
ನಾನು ಪ್ರಶ್ನಿಸುವುದಿಲ್ಲ -
ಅಡಿಯಿಟ್ಟೆಯೇಕೆ ನನ್ನ ಬಾಳಲಿ ?
ಕಾರಣವ ಕೇಳುವುದೂ ಇಲ್ಲ 
ನೀನು ನಿರ್ಗಮಿಸುವಾಗಲೂ 
ನಿನಗೆ ಕಾಣಿಸದಿರಲಿ 
ನನ್ನ ಕಣ್ಣೀರಿರುವ ಕಂಗಳು.
ನಾ ಬಲ್ಲೆ ...
ಯಾವುದೂ ಶಾಶ್ವತವಲ್ಲ ಇಲ್ಲಿ
ಯಾರು ಯಾರಿಗೂ ಅನಿವಾರ್ಯವೂ ಅಲ್ಲ
ಇದ್ದಷ್ಟು ದಿನ ... ಇರುವಷ್ಟು ಕ್ಷಣ... ಖುಷಿಯಿರಲಿ
ನಗುವಾಗ ನಕ್ಕುಬಿಡು ... ನನ್ನ ಅಗತ್ಯವಿಲ್ಲ
ಕಂಬನಿಯಾದಾಗ ನನ್ನ ನೆನಪಿಸಿಕೋ ....
ಒರೆಸುವ ಕೈಗಳು ನನ್ನಲ್ಲಿವೆ
ನೆನಪಿರಲಿ ನಿನಗೆ ...
ದಣಿದಾಗ ನೀ...
ನಾನಿರುವೆ, ಬಂದುಬಿಡು
ನನ್ನೆದೆಯ ಮೃದುವಿಗೆ ಒರಗಲು
ಏಕೆಂದರೆ ......
"ನಿನ್ನ ಪ್ರೀತಿಸುವುದು ಮಾತ್ರಾ ನನಗೆ ಗೊತ್ತು".


ನಾ ಕರೆದಾಗೆಲ್ಲಾ....
ಓಗೊಡುವ
ನನ್ನ ನಗೆಗಣ್ಣಿನ ಚೆಲುವ
ನನ್ನೆದೆಗೆ ---
ಬೇಸಿಗೆಯ ಮಳೆ.

No comments:

Post a Comment