Friday, 24 April 2015

taaytanada sukha --

ಸಾ

ಅಂದು ಬೆಳಿಗ್ಗೆ ಮನೆಯೊಳಗೆ  ಕಾಲಿಟ್ಟೆ. ಆಗಷ್ಟೇ ಎದ್ದು ಸೋಫಾದಲ್ಲಿ ಕುಳಿತಿದ್ದ ಮಗ ಕೇಳಿದ- ಅಮ್ಮಾ ನನ್ನ ಬಿಟ್ಟು ಎಲ್ಲಿಗೆ ಹೋಗಿದ್ದೆ ? ಜಿಜ್ಜಿ ಗುಡಿಗೆ ಮಗನೆ ಅಂದೆ. ಮಿಕಿ ಮಿಕಿ ನೋಡಿದ , ಯಾಕೆ ಅಂದರೆ ನಾನು ದೇವಸ್ಥಾನ ಅಂತಾ ಹೋಗದೆ ಯಾವ್ ರಾಯನ ಕಾಲವಾಯ್ತೋ ನೆನಪಿಲ್ಲ.
ಅಮ್ಮಾ ನೀನು ಡಿಫೆರೆಂಟ್  ಆಗಿ  ಇದೀಯ ಅಂದ. ಯಾಕೋ ಕಂದ ? ಗೊಂದಲವಾಯ್ತು ನನಗೆ, ಸಾವರಿಸಿಕೊಂಡು ಕೇಳಿದೆ, ಅಮ್ಮ ನಿನ್ನ ದೇವಸ್ಥಾನಕ್ಕೆ ಬಿಟ್ಟು ಹೋಗಿದ್ದಕ್ಕ ಹೀಗನ್ನೊದು ? ಅಥವ  ಅಮ್ಮಾ ಚೆನಾಗಿ ಕಾಣಿಸ್ತಿಲ್ವ ?
ಅಯ್ಯೋ ಅಮ್ಮಾ ನನ್  ಲೈಫ್ ಲ್ಲಿ ಈ ತರಹ ನಿನ್ನ ನೋಡಿಲ್ಲ, ಚೆಂದ  ಕಾಣಿಸ್ತಿದ್ದೀ  ಅಮ್ಮಾ, ದಿನಾ ಹೀಗೇ  ಇರು ಅಂದ. ಆಹಾ ಸಾರ್ಥಕ --ಹಸಿರು ಸೀರೆಯಲ್ಲಿ  ಅಮ್ಮ ಮಗನಿಗೆ ಚೆನಾಗಿ ಕಾಣಿಸ್ತಿದಾಳೆ! ಆದರೆ .... ಲೈಫ್ ಅಂತೆಲ್ಲ ಪುಟ್ಟಮರಿ ಮಾತಾಡುತ್ತೆ ? ಪುಟ್ಟ  ಮಗನ ಬಾಯಿಂದ ದೊಡ್ಡ ಮಾತು! ಬೆರಗಾದೆ. ನೋಡ್ರೀ  ಒಂದಿನನಾದ್ರೂ ನೀವು ಹೇಳಿದ್ದೀರ ಹೀಗೆ ನಾನು ಚೆಂದ ಅಂತ ?  ನನ್ನವನಿಗೆ ಕೇಳಿದೆ. ಇರೆ ಹತ್ತು ವರುಷ ಹೋಗ್ಲಿ, ಈ ತರಹ ಮಾತಾಡಿ, ಯಾರನ್  ಪಟಾಯಿಸಿಕೊಂಡು ಬರ್ತಾನೋ ನಿನ್ ಮಗ? ಆಗ ನಗುವಿಯಂತೆ ಅಂದು ನನ್ನವನು ನಕ್ಕ. ಇರಲಿ ಬಿಡೋ, ನಾನು ಅಷ್ಟು ದಿನ ಬದುಕಿರಲಿ, ಆ ಖುಷಿಗೂ ನಗುತ್ತೇನೆ ಏನೀವಾಗ ? ಎಂದೇ:-)
ನನ್ನ ಮಗ ಹಾಗೇ ...   ಮುದ್ದು ಮುದ್ದು ಮಾತಾಡ್ತಾ ಪದೇ ಪದೇ ಮುತ್ತು ಕೊಡುವಾಗ ಒಮ್ಮೆ ಕೇಳಿದೆ - ಮಗನೆ ಯಾಕೆ ಅಮ್ಮನ್ನ ಹೀಗೆ ಮುದ್ದು ಮಾಡೋದು ? ನನಗೆ ಯಾರೂ ಫ್ರೆಂಡ್ಸ್ ಇಲ್ಲ, ಇರೋ ಫ್ರೆಂಡ್ಸ್ ಮಾತಾಡಿಸ್ತಿಲ್ಲ, ಮನೆಗೆ ಬಂದಿಲ್ಲ ಅಂತಾ ಚಿಂತಾ ಮಾಡ್ತಿರ್ತಿಯ  ಅಮ್ಮಾ ... ನಂಗೆ ನಿನ್ ಸ್ಯಾಡ್ ಫೇಸ್ ನೋಡಿದ್ರೆ ಗೊತ್ತಾಗುತ್ತೆ, ಆಗ ಅಮ್ಮನ್ನ ಮುದ್ದು  ಮಾಡಿ ಚಿಂತ ದೂರ ಮಾಡಬೇಕು ಅಂತ ನಂಗೊತ್ತು ಅಮ್ಮಾ, ನಾನು ಎಷ್ಟು ಮುದ್ದು ಮಾಡ್ತಿನೋ ಅದಕ್ಕೆ ಡಬಲ್ ನನಗೆ ಸಿಗೋಲ್ವ ? ಅಂದ !!!
ಅರೆ ಪುಟ್ಟಾ ? ದೇವದೂತ ನೀನು ನನ್ನ ಕಂದ ಎಂದು ತಬ್ಬಿಕೊಂಡೆ.
ಈಗ ರಜೆಯ ಸಂಭ್ರಮ, ಸದಾ ಚಟುವಟಿಕೆಯ ಕಂದ ಕೆಲವೊಮ್ಮೆ ಸುಸ್ತು ಹೊಡಿಸ್ತಾನೆ ನನಗೆ.
ಮನೆಯೆಲ್ಲಾ ಏನೇ ಬೆಣ್ಣೆ ಘಮ ಅಂದ ನನ್ನವ ಮೊನ್ನೆಯೊಮ್ಮೆ. ನನ್ನ ಪುಟ್ಟ ನಗುತಿದ್ದ. ಅಮ್ಮಾ ನೀನು ಸ್ಯಾಂಡ್ವಿಚ್ ಗೇ  ಅಂತಾ ತಂದಿಟ್ಟಿರೋ ಅಮುಲ್ ಅಸಲಿ ಬಟರ್ ನ ನಾನು ಸ್ಕೂಪ್ ಮಾಡ್ಕೊಂಡು ತಿಂದೆ, ಬಯ್ಯಲ್ವ ಅಮ್ಮ ? ಕೇಳಿದ. ನನಗ್ ಯಾಕಮ್ಮಾ ಬಟರ್ ಇಷ್ಟ ? ಎಂದ. ಬಯ್ಯೋಲ್ಲ ಮಗನೆ, ಸಂತಾನ ಗೋಪಾಲಕೃಷ್ಣನ ವ್ರತ, ಪಾರಾಯಣ ಮಾಡಿ ನಿನಗಾಗಿ ನಾನು ದಿನವೂ  ಬೆಣ್ಣೆ  ತಿಂದಿದ್ದೇನೆ  ಕಂದಾ, ನಲವತ್ತು ದಿನಗಳಲ್ಲಿ ಒಂದು ತಟ್ಟೆ ಬೆಣ್ಣೆ ತಿಂದು ನೀರು ಕುಡಿದಿದ್ದೇನೆ.  ನನ್ನ ಮುದ್ದು ಕೃಷ್ಣ ನೀನು, ಅದಕ್ಕೆ ನಿಂಗೂ ಬೆಣ್ಣೆ ಇಷ್ಟ ಅಂದೇ.  ಪೆದ್ದು ಪೆದ್ದಾಗಿ ನಗ್ತು,  ರಾಮನ  ನಕ್ಷತ್ರದಲ್ಲಿ  ಹುಟ್ಟಿದವ  ಒಳ್ಳೆಯ ಮಗ ನನ್ನ ಪುಟ್ಟ.
ತಾಯ್ತನ ಅನ್ನೋದು ನಿಜಕ್ಕೂ ಅದೆಷ್ಟು ಸುಖ ! ಕೆಲವರು ಮಕ್ಕಳನ್ನು ಹೆರ್ತಾರೆ, ಅಮ್ಮನದೋ, ಅಕ್ಕನದೋ , ಇನ್ಯಾರದೋ ಮಡಿಲಿಗೆ ಹಾಕಿ ಈ ಸುಖದಿಂದ ವಂಚಿತರಾಗ್ತಾರೆ. ಮಕ್ಕಳು ಸಣ್ಣಲಿರುವಾಗ  ಕೊಡುವ ಕಾಟ, ಖುಷಿ ಅಲ್ವಾ ? ಅನುಬಂಧ ಬಿಗಿಯಾಗೋದು ಮಕ್ಕಳನ್ನು  ಜೊತೆಯಲ್ಲಿ ಇರಿಸಿಕೊಂಡು  ಸಾಕಿ ಸಲಹಿದಾಗ ಅಲ್ವಾ ?
ನನ್  ಮಗನ ಬಗ್ಗೆ ಬೇಕಾದಷ್ಟು ಬರೆಯಬಹುದು ಬಿಡೀ, ನಾನ್ಯಾಕೆ ಇದನೆಲ್ಲಾ ಬರೆದೆ ಅಂದರೆ ..  ನಮ್ಮ ಪಕ್ಕದ ಮನೆಯಾಕೆಗೂ  ಮಗಳು ಹುಟ್ಟಿ ೧೨ ವರುಷಗಳ ನಂತರ ಮಗ ಹುಟ್ಟಿದಾನೆ. ನಾನು ಮಾತನಾಡುವುದಿಲ್ಲ ಅಷ್ಟು  ಸುಲಭಕ್ಕೆ,  ಮುದ್ದು ಮಗು ನನ್ನ ನೋಡಿ ನಗುವಾಗ, ಸಹಜವಾಗಿ  ನಾನು ಮಾತಾಡಲು ಶುರು ಮಾಡಿಕೊಂಡೆ. ಅದು ಸ್ವಲ್ಪ ಕಾಣಿಸೋದು ಆಪರೂಪ ಆಯ್ತು ಅಂತಾ ಕೇಳಿದೆ -ಮಗ ಎಲ್ಲಿ ? ಆನೆಯಂತಹ ಆಕೆ , ತುಂಬಾ ದಿವರುಷಗಳ  ನಂತರ ಹುಟ್ಟಿದ  ಪುಟ್ಟ ಮಗನನ್ನು ನೋಡಿಕೊಳ್ಳಲಾಗದೇ,  ತುಂಬಾ ಕಾಟ ಕೊಡುತ್ತಾನೆರೀ, ಕೈಯೇ  ಬಿಡೋಲ್ಲ, ಅದಕ್ಕೆ ನಮ್ತಾಯಿ ಹತ್ರ ಬಿಟ್ಟಿದೇನೆ ಅಂದ್ರು ! ಛೆ ಇವರೂ ತಾಯಿನಾ ಅನಿಸ್ತು :( ಉದ್ಯೋಗಸ್ತ ಮಹಿಳೆಯಾದರೆ ಅನಿವಾರ್ಯ ಈ ಸುಖ ಕಳೆದುಕೊಳ್ಳುವುದು.  ಗೃಹಿಣಿನೂ ಹೀಗೆ ಮಾಡೋದು ಸರಿಯಲ್ಲ ಅಲ್ವಾ ?


No comments:

Post a Comment