Tuesday, 7 April 2015



ರವಿ ಮರೆಯಾದ .... ಕತ್ತಲಾಯಿತು...ಮನಕೂ.... 
ಅರೆಗಳಿಗೆ ಕಾದಿರು ನಲ್ಲೆ ಎಂದುಸಿರಿ....
ಕೆನ್ನೆಗೊಂದು ಸವಿನೆನಪಿಗಾಗಿ ಕೊಟ್ಟು ಹೋಗಿ....
ಇಂದೂ ಬಾರದವನ ನೆನೆದು ... 
ಕಾದ ಕಂಗಳ ರೆಪ್ಪೆಗಳಡಿ ನೀರು...
ನಿದಿರೆಗೆ ಜಾಗವೆಲ್ಲಿ.....????


ಕನಸುಗಳು ಖಾಲಿಯಾಗಿವೆ ಕಣೋ......
ಬಂದುಬಿಡು ಬೇಡುವೆ ಕಾಡಿಸಬೇಡ ಇನ್ನೂ
ನಾನೂ ಸಹ ಬದುಕಬೇಕಾಗಿದೆ. 
ಹೊಸ ಸಂವತ್ಸರ...
ಅದೇ .....ಬದಲಾಗದ ನಾನು
ನಿನ್ನೊಲವ ಸದಾ ಹಂಬಲಿಸುವ ಹೃದಯದವಳು
ಕಾಯುತ್ತಲೇ ಇದ್ದೇನೆ......
ಬಾಳಲಿ ವಸಂತವಾಗು, ಬಂದುಬಿಡೋ...



ನಾಳೆ ಅಮಾವಾಸ್ಯೆ ....
ಆದರೇನು ????
ಬರುತ್ತಾನಂತೆ ನನ್ನ ಚಂದಿರ !!!!
ನಾಳೆಯೇ ಹಬ್ಬ smile emoticon

No comments:

Post a Comment