Tuesday, 11 December 2012

ಕೃಷ್ಣೆ  .......ನಿನಗೊಂದಷ್ಟು   ಪ್ರಶ್ನೆ  .
ಅಪ್ಪನ  ಮಾತು  ಕೇಳಿ  ಒಂದಷ್ಟು  ಇಂಪ್ರೆಸ್ಸ್  ಆಗಿಬಿಟ್ಟೆ .ಅರ್ಜುನ ನೇ ನಿನ್ನ  ಗೆದ್ದಾಗ  ಮತ್ತಷ್ಟು  ಖುಷಿ ಆಗಿರಬೇಕು  ಆಲ್ವಾ ? ಆದರೆ  ಮಕ್ಕಳಲ್ಲಿ  ಒಡಕು  ಬಾರದಿರಲಿ  ಅಂತಾ  ನಿಮ್ಮತ್ತೆ ,ನಿನ್ನನ್ನು  ಮಕ್ಕಳು ಐವರಿಗೂ  ಹಂಚಿದಳಲ್ಲಾ ? ಆಗೇನ್  ಅನಿಸ್ತೆ ? ಹೋಗಲೀ  ನೀನು  ಅವರನ್ನೆಲ್ಲಾ  ಸಮನಾಗಿ  ಕಾಣಬೇಕು ಅಂತಾ  ನಿನ್ನೊಡನೆ  ವಚನ ತೆಗೆದುಕೊಂಡಳಲ್ಲಾ ? ನಿಜ  ಹೇಳೇ  ನೀ  ಹಾಗೇ  ಎಲ್ಲರನ್ನೂ  ಸಮನಾಗಿ  ಕಾಣಲು  ಸಾಧ್ಯವಾಯ್ತೇನೆ ?
ಯಾರಿಗಾದರೂ ಒಬ್ಬರನ್ನು  ಮೆಚ್ಚಬಹುದು  ,ಅವರಿಗೆ  ಎಲ್ಲಾ  ಅರ್ಪಿಸಿಬಿಡಬಹುದು .ಮೆಚ್ಚಿದವರ  ಹತ್ರ  ಮಾತ್ರಾ  ಎಲ್ಲಾನೂ  ಸಾಧ್ಯ ಆದರೆ  .........ಇವನ  ಪಕ್ಕ  ಮಲಗಿದಾಗ  ಅವನ  ನೆನಪು  ಕಾಡಲಿಲ್ಲವೇ ?( ಒರಟು ನನ್ನ ಪ್ರಶ್ನೆ ಅನಿಸಿದರೆ  ಸಾರಿ ಕಣೆ ಪ್ಲೀಸ್ .) ಒಂಟಿ  ವಸ್ತ್ರದಲ್ಲಿದ್ದಾಗ  ಆದ  ಆ  ನಿನ್ನ   ದುಸ್ತಿತಿ ನನಗೆ  ಅಳು ಬರುತ್ತೆ  ಕಣೆ  ನನಗೆ. ಐವರಿದ್ದೂ  ನೀನೆಷ್ಟು  ಸುಖ ಪಟ್ಟೆ ಪಾಂಚಾಲೀ ? ಹೆಣ್ಣು  ಯಾವ ಕಾಲಕ್ಕೂ  ಇಷ್ತೆಯೇನೆ ? ಬೇರೆಯವರ  ಇಷ್ಟಕ್ಕೆ  ಬದುಕಬೇಕಾ ?
ಆಮೇಲೆ  ಮಾತಾಡೋಣ  ?

No comments:

Post a Comment