Sunday, 9 December 2012

ನಿರೀಕ್ಷೆ

ಹಸಿರೊಣಗಿ ಕೊಂಬೆ
ಕಳಚುವ ಸ್ಥಿತಿಯಲ್ಲಿ ಎಲೆ -
ಯುದುರಿದ, ಭಾವನೆಗಳ
ಕಳೆದುಕೊಂಡಿರುವ ಒಣಮರ
ನಾನಾಗೆ ........

ಮಣ್ಣಿಂದ ಬಿಡುಗಡೆ
ಹೊಂದಲಾರದೇ ನಿಟ್ಟುಸಿರು


ರವಿಯ ಹೊಂಗಿರಣಗಳು
ಚೆಲ್ಲಾಟವಾಡುತ್ತಿರಲು ಪುಳಕಗೊಳ್ಳದ
ವಸಂತದಿ ಕೋಗಿಲೆಯ ಉಲಿಯುವಿಕೆಗೆ

ದನಿಗೂಡದೇ
ಆ ಭಾವಜೀವಿಯ ಭಾವುಕತೆಗೆ ಸ್ಪಂದಿಸಲಾಗದೆ,
ಯೌವ್ವನದ ಗರಿ ಕಳಚಿದ ಮುದಿಹಕ್ಕಿಯ
ಹಳೆಯ ನೆನಪಿನಂತೆ,

ಗತವೈಭವದ ನೆನಕೆಗಳ ಮೆಲುಕು.
ನಿಂತಿರುವೆ,
ನೀರೂ ಇದೆ,
ಚಿಗುರಲಾರೆ ಮತ್ತೆ.
ಹಸಿರು ಬಿರಿದು,
ಬಾನೆತ್ತರಕ್ಕೆ ಬೆಳೆಯಬೇಕೆಂಬ ಆಸೆಯಿದ್ದರೂ
ಪಕ್ಕದಲ್ಲಿನ ಕಿರುಸಸಿಗೆ ಸ್ಥಳ ತೆರವು

ಸಾವಿನ ನಿರೀಕ್ಷೆಯ,
ಬದುಕಲಾರದ ಮುದುಕನ ತೆರದಿ .
ಆಗಸವ ದಿಟ್ಟಿಸುತ್ತಿರುವೆ ಮಳೆಗಾಗಿ
ಅಲ್ಲ.
ಜೀವಿತದ ಕೊನೇ ಕ್ಷಣಕ್ಕಾಗಿ....

No comments:

Post a Comment