ಸುಂದರ ರಾಜ ಒಂದು ದಿನ ಕುದರೆ ಮೇಲೆ ಕುಳಿತು ನಗರ ಸಂಚಾರ ಮಾಡ್ತಿದ್ದ .ಆಗ ಒಬ್ಳು ತರುಣಿ ,ಸುಂದರ ತರುಣಿ ಭಿಕ್ಷೆ ಬೇಡುತ್ತಿರೋದನ್ನು ನೋಡಿದ. ಆಹಾ ಏನ್ ಚೆಲುವೆ ಈಕೆ ? ನನ್ನ ರಾಣಿಯಾಗಲಿ ,ನನ್ನ ಅರಮನೆಯಲ್ಲಿ ತಿಂದುಂಡು ಇನ್ನೂ ಸುಂದರವಾಗಿ ಕಾಣಿಸಿಯಾಳು ಅಂತಾ ಮದ್ವೆ ಮಾಡ್ಕೊಂಡ. ಅರಮನೆ ಅಂದ್ರೆ ವಿವರಿಸೋದೇ ಬೇಡ ,ಎಲ್ಲಾ ಸಂಪತ್ತುಗಳೂ ಇದೆ. ಆದರೆ ದಿನೇ ದಿನೇ ಆ ತರುಣಿ ಸೊರಗಿಹೊಗ್ತಾ ಇದ್ದ್ದಾಳೆ ! ಅವಳನ್ನು ನೋಡಿ ರಾಜನಿಗೆ ಕೋಪ ಬಂತು .ನನ್ನ ಹತ್ರ ಎಲ್ಲವೂ ಇದೇ ,ಅರಮನೆಯಲ್ಲಿ ಸುಖವಾಗಿರೋದು ಬಿಟ್ಟು ಯಾಕೆ ಹೀಗಾದಳು ?ಏನು ಕೊರತೆಯಾಗಿದೆ ಇವಳಿಗೆ ? ಅಂತಾ ಸೊರಗಿದ ಅವಳ ಬಗ್ಗೆ ಅಸಹ್ಯಗೊಂಡು ಒಂದು ಕೋಣೆಯೊಳಗೆ ಹಾಕ್ತಾನೆ .ಸ್ವಲ್ಪ ದಿನಗಳು ಕಳೆದ ನಂತರ ನೆನಪಾಗಿ ಅಲ್ಲಿ ಹೋಗಿ ನೋಡಿದ್ರೆ ಆ ತರುಣಿ ಸುಂದರವಾಗಿ ,ಖುಷ ಖುಷಿಯಾಗಿದ್ದಳು! ಗಮನಿಸಿದಾಗ ,
ಕೋಣೆಯೊಳಗೆ ಇದ್ದ ತರುಣಿಗೆ ಸ್ವಲ್ಪವೇ ಆಹಾರ ಕೊಟ್ರೆ ,ಅವಳು ಅದನ್ನು ಬೇರೆ ಬೇರೆ ಪೊಟ್ಟಣ ಮಾಡಿ ಗೋಡೆಯಲ್ಲಿ ಅಲ್ಲಲ್ಲೇ ಇಡುತಿದ್ಲು . ಹಸಿವಾದಾಗ ಒಂದೊಂದು ಪೊಟ್ಟಣ ದ ಬಳಿ ಹೋಗಿ ಅಮ್ಮಾ ತಾಯೀ ಹಸಿವೆ ......ಎಂದು ಬೇಡಿ ಆಹಾರವನ್ನು ತಿನ್ನುತಿದ್ಲು .ಇದೇ ಅವಳಿಗೆ ಖುಷಿ ಅನಿಸ್ತಿತ್ತು .ಸುಖವಾಗಿದ್ಲು :-)
ಈಗ ಹೇಳಿ ಸುಖ - ಸಂತೋಷ ಅಂದ್ರೆ ಏನು ?
ಕೋಣೆಯೊಳಗೆ ಇದ್ದ ತರುಣಿಗೆ ಸ್ವಲ್ಪವೇ ಆಹಾರ ಕೊಟ್ರೆ ,ಅವಳು ಅದನ್ನು ಬೇರೆ ಬೇರೆ ಪೊಟ್ಟಣ ಮಾಡಿ ಗೋಡೆಯಲ್ಲಿ ಅಲ್ಲಲ್ಲೇ ಇಡುತಿದ್ಲು . ಹಸಿವಾದಾಗ ಒಂದೊಂದು ಪೊಟ್ಟಣ ದ ಬಳಿ ಹೋಗಿ ಅಮ್ಮಾ ತಾಯೀ ಹಸಿವೆ ......ಎಂದು ಬೇಡಿ ಆಹಾರವನ್ನು ತಿನ್ನುತಿದ್ಲು .ಇದೇ ಅವಳಿಗೆ ಖುಷಿ ಅನಿಸ್ತಿತ್ತು .ಸುಖವಾಗಿದ್ಲು :-)
ಈಗ ಹೇಳಿ ಸುಖ - ಸಂತೋಷ ಅಂದ್ರೆ ಏನು ?
No comments:
Post a Comment