Sunday, 16 December 2012

ಸುಂದರ  ರಾಜ  ಒಂದು  ದಿನ  ಕುದರೆ ಮೇಲೆ  ಕುಳಿತು  ನಗರ ಸಂಚಾರ  ಮಾಡ್ತಿದ್ದ .ಆಗ  ಒಬ್ಳು  ತರುಣಿ  ,ಸುಂದರ  ತರುಣಿ  ಭಿಕ್ಷೆ  ಬೇಡುತ್ತಿರೋದನ್ನು  ನೋಡಿದ. ಆಹಾ  ಏನ್  ಚೆಲುವೆ ಈಕೆ ? ನನ್ನ  ರಾಣಿಯಾಗಲಿ ,ನನ್ನ ಅರಮನೆಯಲ್ಲಿ  ತಿಂದುಂಡು  ಇನ್ನೂ  ಸುಂದರವಾಗಿ  ಕಾಣಿಸಿಯಾಳು ಅಂತಾ  ಮದ್ವೆ ಮಾಡ್ಕೊಂಡ. ಅರಮನೆ ಅಂದ್ರೆ  ವಿವರಿಸೋದೇ ಬೇಡ  ,ಎಲ್ಲಾ ಸಂಪತ್ತುಗಳೂ ಇದೆ. ಆದರೆ  ದಿನೇ ದಿನೇ  ಆ ತರುಣಿ  ಸೊರಗಿಹೊಗ್ತಾ ಇದ್ದ್ದಾಳೆ ! ಅವಳನ್ನು  ನೋಡಿ  ರಾಜನಿಗೆ ಕೋಪ ಬಂತು .ನನ್ನ ಹತ್ರ ಎಲ್ಲವೂ ಇದೇ ,ಅರಮನೆಯಲ್ಲಿ ಸುಖವಾಗಿರೋದು  ಬಿಟ್ಟು ಯಾಕೆ ಹೀಗಾದಳು ?ಏನು ಕೊರತೆಯಾಗಿದೆ ಇವಳಿಗೆ ? ಅಂತಾ  ಸೊರಗಿದ  ಅವಳ ಬಗ್ಗೆ  ಅಸಹ್ಯಗೊಂಡು ಒಂದು  ಕೋಣೆಯೊಳಗೆ  ಹಾಕ್ತಾನೆ  .ಸ್ವಲ್ಪ  ದಿನಗಳು  ಕಳೆದ ನಂತರ ನೆನಪಾಗಿ ಅಲ್ಲಿ  ಹೋಗಿ ನೋಡಿದ್ರೆ  ಆ ತರುಣಿ  ಸುಂದರವಾಗಿ ,ಖುಷ ಖುಷಿಯಾಗಿದ್ದಳು! ಗಮನಿಸಿದಾಗ  ,
ಕೋಣೆಯೊಳಗೆ  ಇದ್ದ ತರುಣಿಗೆ  ಸ್ವಲ್ಪವೇ  ಆಹಾರ  ಕೊಟ್ರೆ ,ಅವಳು  ಅದನ್ನು  ಬೇರೆ ಬೇರೆ  ಪೊಟ್ಟಣ ಮಾಡಿ ಗೋಡೆಯಲ್ಲಿ ಅಲ್ಲಲ್ಲೇ  ಇಡುತಿದ್ಲು . ಹಸಿವಾದಾಗ  ಒಂದೊಂದು  ಪೊಟ್ಟಣ ದ  ಬಳಿ ಹೋಗಿ  ಅಮ್ಮಾ ತಾಯೀ  ಹಸಿವೆ ......ಎಂದು ಬೇಡಿ  ಆಹಾರವನ್ನು  ತಿನ್ನುತಿದ್ಲು  .ಇದೇ  ಅವಳಿಗೆ  ಖುಷಿ ಅನಿಸ್ತಿತ್ತು .ಸುಖವಾಗಿದ್ಲು :-)

ಈಗ ಹೇಳಿ ಸುಖ - ಸಂತೋಷ ಅಂದ್ರೆ  ಏನು ? 

No comments:

Post a Comment