ಕುಂತಿ ...ಕಾನೀನ .....ನಿಯೋಗ ....
ಏನಿದು ?
ಏನೇ ಅನ್ನಿ ಈ ಪುಸ್ತಕ ಓದುವ ಖುಷಿನೇ ಬೇರೆ .
ಸುಮಾರು ಹದಿನೆಂಟು ವರುಷಗಳ ಹಿಂದೆ ,ಮದ್ವೆಯಾದ ಹೊಸತು ,ಕೆಲಸ ಏನಿರಲಿಲ್ಲ .ಬೆಳಗ್ಗೆ ಹೋದ ನನ್ ಗಂಡ ಬರೋದು ರಾತ್ರಿ ಆಗ್ತಿತ್ತು .ಒಬ್ಳೆ ಕೂತಿರ್ತಿದ್ದೆ .ಆಗ ಓದಿದ್ದು "ಪರ್ವ ". ಎಷ್ಟು ದಿನ ಅದರ ಗುಂಗು ! ಆ ಪುಸ್ತಕ ಎರವಲು ಪಡೆದವರು ಕೊಡಲೇಯಿಲ್ಲ.ಆ ಪುಸ್ತಕ ನನಗೆ ಕೊಟ್ಟವರೂ ಈಗಿಲ್ಲ ಬಿಡಿ .
ನನ್ ಪುಟ್ಟ ಹೊಟ್ಟೆಯಲಿದ್ದಾಗ ಮತ್ತೆ ಓದೋ ಹಂಬಲ .ಪರ್ವ ,ಜಲಪಾತ ,ಮತದಾನ ,ದೂರ ಸರಿದರು
ಏನಿದು ?
ಏನೇ ಅನ್ನಿ ಈ ಪುಸ್ತಕ ಓದುವ ಖುಷಿನೇ ಬೇರೆ .
ಸುಮಾರು ಹದಿನೆಂಟು ವರುಷಗಳ ಹಿಂದೆ ,ಮದ್ವೆಯಾದ ಹೊಸತು ,ಕೆಲಸ ಏನಿರಲಿಲ್ಲ .ಬೆಳಗ್ಗೆ ಹೋದ ನನ್ ಗಂಡ ಬರೋದು ರಾತ್ರಿ ಆಗ್ತಿತ್ತು .ಒಬ್ಳೆ ಕೂತಿರ್ತಿದ್ದೆ .ಆಗ ಓದಿದ್ದು "ಪರ್ವ ". ಎಷ್ಟು ದಿನ ಅದರ ಗುಂಗು ! ಆ ಪುಸ್ತಕ ಎರವಲು ಪಡೆದವರು ಕೊಡಲೇಯಿಲ್ಲ.ಆ ಪುಸ್ತಕ ನನಗೆ ಕೊಟ್ಟವರೂ ಈಗಿಲ್ಲ ಬಿಡಿ .
ನನ್ ಪುಟ್ಟ ಹೊಟ್ಟೆಯಲಿದ್ದಾಗ ಮತ್ತೆ ಓದೋ ಹಂಬಲ .ಪರ್ವ ,ಜಲಪಾತ ,ಮತದಾನ ,ದೂರ ಸರಿದರು
,ತಬ್ಬಲಿಯು ನೀನಾದೆ ಮಗನೆ ,ನೆಲೆ ,ಗೃಹಭಂಗ ,ನಾಯಿನೆರಳು ,ನಿರಾಕರಣ ಇಟ್ಕೊಂಡು ಕುಳಿತೆ .ಮೊದಲು 'ನಾಯಿನೆರಳು 'ಓದಿ ಮುಗಿಸಿದೆ . ನನ್ ಪಾಪು ಯಾರು ?ಅದು ಹಿಂದಿನ ಜನ್ಮದಲ್ಲಿ ಯಾರಾಗಿದ್ದಿರಬಹುದು ?ನನಗೂ ಅದಕ್ಕೂ ಎನ್ ಸಂಬಂಧ ಇರಬಹುದು ?......ಥೂ ....ಬರೀ ಇದೇ .ನಾನು ಹಾಗೇ ತೀರಾ ಯೋಚಿಸೋದು .ಆಮೇಲೆ ಇನ್ನೊಂದು ಹುಚ್ಚಿದೆ .ಏನೇ ಓದಲೀ ,ಯಾರನ್ನು ಹಾಕಿಕೊಂಡು ಪಿಚ್ಚರ್ ತೆಗೆಯೋಣ ಅಂತಾ ಪ್ಲಾನ್ ಮಾಡೋದು .
ಮಲೆಗಳಲ್ಲಿ ಮದುಮಗಳು ,ಮೇಘ ಸಂದೇಶ,ಮಂಕುತಿಮ್ಮನ ಕಗ್ಗ ಹೊಸದಾಗಿ ತಂದು ಕೊಟ್ಟರು . ಏನೇನ್ ಓದಿದನೋ !
ಮತ್ತೊಮ್ಮೆ 'ಪರ್ವ' ಕಳೆದೆ ಅಷ್ಟೇ .
ಅದೇನೋ ಸಂಸ್ಕೃತದಲ್ಲಿ ಅಂತಾರೆ -ಪುಸ್ತಕ ,ಮತ್ತೇನೋ ಬೇರೆಯವರ ಹತ್ರ ಹೋಗಿದ್ದು ಹೋಗೇ ಬಿಡುತ್ತೆ ಅಂತಾ .ಈಗಲೂ ಅದೇ ,ಮಲೆಗಳಲ್ಲಿ ಮದುಮಗಳು ,ಮನುಸ್ಮೃತಿ ಇವೆರಡನ್ನೂ ತೆಗೆದುಕೊಂಡು ಹೋಗಿ ಒಂದು ವರ್ಷ ಆಗಿರಬೇಕು ,ಅವರನ್ನು ಕಾಡೀ ಕಾಡೀ ಮನುಸ್ಮೃತಿ ವಾಪಾಸ್ ತರಿಸ್ಕೊಂಡೆ ,ಇನ್ನೊಂದು ಪುಸ್ತಕ ಬರತ್ತೋ ಇಲ್ವೋ !
ಖಾಯಿಲೆ ಮಲಗಿ ಎಲ್ಲಾ ಮರ್ತು ಹೋದ ಮೇಲೆ ,ಮತ್ತೆ 'ಪರ್ವ 'ಸಿಕ್ಕಿದೆ .ಸಂಜೆಯಿಂದಾ ಓದೋಕೆ ಶುರು ಮಾಡಿದೆ .೭೭ ಪುಟಗಳು ಆಯ್ತು .ಹಾದರದ ಕಥೆ ,ಸೋದರ ವೈಷಮ್ಯದ ಕಥೆ ಶುರುನಾ ಅಂದ ನನ್ನವ . ಕುಂತಿಗೆ ಯಮನಿಂದಾ 'ಧರ್ಮ ',ಮರುತ್ತನಿಂದಾ 'ಭೀಮ ,ಇಂದ್ರನಿಂದಾ 'ಅರ್ಜುನ ' ಹುಟ್ಟಿದ್ದಾರೆ .ಅಶ್ವಿನಿ ದೇವತೆಗಳಿಂದಾ ಮಾದ್ರಿಗೆ 'ನಕುಲ ,ಸಹದೇವ '.ಅವ್ರು ಪಾಂಡವರು ಅಲ್ಲ ಅಂತಾ ಧುರ್ಯೋಧನ ರಾಜ್ಯ ಕೊಡುವುದಿಲ್ಲವಂತೆ ,ಧೃತರಾಷ್ಟ್ರ ಮತ್ತು ಪಾಂಡುರಾಜ ಹುಟ್ಟಿದಾದರೂ ಹೇಗೆ ?ರಾಜಕೀಯ ನೋಡು ಅಂತಾ ಲೋಕಿಗೆ ಹೇಳಿ ಬಯ್ಸಿಕೊಂಡೆ .
ಒಂದು ಸಾಮಾನ್ಯ ಜನರ ,ನಮ್ಮೊಳಗೇ ನಡೆಯುತ್ತಿರುವ ಕಥೆಯೇನೋ ಎನಿಸುವಂತೆ ಹೇಳಿಕೊಂಡು ಹೋದ 'ಪರ್ವ 'ನನಗಿಷ್ಟ .
ಕಥೆ ಓದಬೇಕು ಮಿತ್ರರೇ ,ಆ ಲೋಕದಲ್ಲಿ ವಿಹರಿಸೋದೇ ಸುಖ ,ಆಹಾ .....ನೀವೂ ಓದಿ .
ಮಲೆಗಳಲ್ಲಿ ಮದುಮಗಳು ,ಮೇಘ ಸಂದೇಶ,ಮಂಕುತಿಮ್ಮನ ಕಗ್ಗ ಹೊಸದಾಗಿ ತಂದು ಕೊಟ್ಟರು . ಏನೇನ್ ಓದಿದನೋ !
ಮತ್ತೊಮ್ಮೆ 'ಪರ್ವ' ಕಳೆದೆ ಅಷ್ಟೇ .
ಅದೇನೋ ಸಂಸ್ಕೃತದಲ್ಲಿ ಅಂತಾರೆ -ಪುಸ್ತಕ ,ಮತ್ತೇನೋ ಬೇರೆಯವರ ಹತ್ರ ಹೋಗಿದ್ದು ಹೋಗೇ ಬಿಡುತ್ತೆ ಅಂತಾ .ಈಗಲೂ ಅದೇ ,ಮಲೆಗಳಲ್ಲಿ ಮದುಮಗಳು ,ಮನುಸ್ಮೃತಿ ಇವೆರಡನ್ನೂ ತೆಗೆದುಕೊಂಡು ಹೋಗಿ ಒಂದು ವರ್ಷ ಆಗಿರಬೇಕು ,ಅವರನ್ನು ಕಾಡೀ ಕಾಡೀ ಮನುಸ್ಮೃತಿ ವಾಪಾಸ್ ತರಿಸ್ಕೊಂಡೆ ,ಇನ್ನೊಂದು ಪುಸ್ತಕ ಬರತ್ತೋ ಇಲ್ವೋ !
ಖಾಯಿಲೆ ಮಲಗಿ ಎಲ್ಲಾ ಮರ್ತು ಹೋದ ಮೇಲೆ ,ಮತ್ತೆ 'ಪರ್ವ 'ಸಿಕ್ಕಿದೆ .ಸಂಜೆಯಿಂದಾ ಓದೋಕೆ ಶುರು ಮಾಡಿದೆ .೭೭ ಪುಟಗಳು ಆಯ್ತು .ಹಾದರದ ಕಥೆ ,ಸೋದರ ವೈಷಮ್ಯದ ಕಥೆ ಶುರುನಾ ಅಂದ ನನ್ನವ . ಕುಂತಿಗೆ ಯಮನಿಂದಾ 'ಧರ್ಮ ',ಮರುತ್ತನಿಂದಾ 'ಭೀಮ ,ಇಂದ್ರನಿಂದಾ 'ಅರ್ಜುನ ' ಹುಟ್ಟಿದ್ದಾರೆ .ಅಶ್ವಿನಿ ದೇವತೆಗಳಿಂದಾ ಮಾದ್ರಿಗೆ 'ನಕುಲ ,ಸಹದೇವ '.ಅವ್ರು ಪಾಂಡವರು ಅಲ್ಲ ಅಂತಾ ಧುರ್ಯೋಧನ ರಾಜ್ಯ ಕೊಡುವುದಿಲ್ಲವಂತೆ ,ಧೃತರಾಷ್ಟ್ರ ಮತ್ತು ಪಾಂಡುರಾಜ ಹುಟ್ಟಿದಾದರೂ ಹೇಗೆ ?ರಾಜಕೀಯ ನೋಡು ಅಂತಾ ಲೋಕಿಗೆ ಹೇಳಿ ಬಯ್ಸಿಕೊಂಡೆ .
ಒಂದು ಸಾಮಾನ್ಯ ಜನರ ,ನಮ್ಮೊಳಗೇ ನಡೆಯುತ್ತಿರುವ ಕಥೆಯೇನೋ ಎನಿಸುವಂತೆ ಹೇಳಿಕೊಂಡು ಹೋದ 'ಪರ್ವ 'ನನಗಿಷ್ಟ .
ಕಥೆ ಓದಬೇಕು ಮಿತ್ರರೇ ,ಆ ಲೋಕದಲ್ಲಿ ವಿಹರಿಸೋದೇ ಸುಖ ,ಆಹಾ .....ನೀವೂ ಓದಿ .
No comments:
Post a Comment